ವಿಧಾನ ಸಭಾ ಅಧಿವೇಶನ ಆರಂಭ: ಬಿಜೆಪಿ ಮ್ಯಾಜಿಕ್ ನಂಬರ್ ತಲುಪುತ್ತಾ?
ವಿಧಾನ ಸಭಾ ಕಲಾಪ ಆರಂಭವಾಗಿದೆ. ಬಿಜೆಪಿ ಸರ್ಕಾರದ ಅಳಿವು-ಉಳಿವು ಇಂದು ನಿರ್ಧಾರವಾಗಲಿದೆ. ಸದನಕ್ಕೆ ಎಲ್ಲ ಬಿಜೆಪಿ ಸದಸ್ಯರು ಹಾಜರಾಗಿದ್ದಾರೆ. ಸದನದಲ್ಲಿ ಒಟ್ಟು 104 ಬಿಜೆಪಿ ಸದಸ್ಯರು ಹಾಜರಾಗಿದ್ದಾರೆ. ಜೆಡಿಎಸ್ನ ಒಟ್ಟು 37 ಸದಸ್ಯರು, ಕಾಂಗ್ರೆಸ್’ ಒಟ್ಟು 76 ಸದಸ್ಯರು ಹಾಜರಿದ್ದಾರೆ. ಹೊಸಪೇಟೆ ಶಾಸಕ ಆನಂದ್ ಸಿಂಗ್, ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಗೈರು ಹಾಜರಾಗಿದ್ದಾರೆ.
ಬೆಂಗಳೂರು (ಮೇ. 19): ವಿಧಾನ ಸಭಾ ಕಲಾಪ ಆರಂಭವಾಗಿದೆ. ಬಿಜೆಪಿ ಸರ್ಕಾರದ ಅಳಿವು-ಉಳಿವು ಇಂದು ನಿರ್ಧಾರವಾಗಲಿದೆ. ಸದನಕ್ಕೆ ಎಲ್ಲ ಬಿಜೆಪಿ ಸದಸ್ಯರು ಹಾಜರಾಗಿದ್ದಾರೆ.
ಸದನದಲ್ಲಿ ಒಟ್ಟು 104 ಬಿಜೆಪಿ ಸದಸ್ಯರು ಹಾಜರಾಗಿದ್ದಾರೆ. ಜೆಡಿಎಸ್ನ ಒಟ್ಟು 37 ಸದಸ್ಯರು, ಕಾಂಗ್ರೆಸ್’ ಒಟ್ಟು 76 ಸದಸ್ಯರು ಹಾಜರಿದ್ದಾರೆ. ಹೊಸಪೇಟೆ ಶಾಸಕ ಆನಂದ್ ಸಿಂಗ್, ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಗೈರು ಹಾಜರಾಗಿದ್ದಾರೆ.
ಹಂಗಾಮಿ ಸ್ಪೀಕರ್ ಬೋಪಯ್ಯ ನೇಮಕವನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಬೋಪಯ್ಯ ನೇಮಕವನ್ನು ಎತ್ತಿ ಹಿಡಿದಿದೆ. ಸುಪ್ರೀಂಕೋರ್ಟ್ನಲ್ಲಿ ಕಾಂಗ್ರೆಸ್- ಜೆಡಿಎಸ್ ಭಾರೀ ಹಿನ್ನೆಡೆಯಾಗಿದೆ. ಕೆ.ಜೆ. ಬೋಪಯ್ಯ ನೇಮಕಾತಿ ನಿಯಮ ಬಾಹಿರ ಅಲ್ಲ. ಬೋಪಯ್ಯ ನೇಮಕದಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾ. ಎ.ಕೆ. ಸಿಕ್ರಿ ಅಭಿಪ್ರಾಯ ಕಾಂಗ್ರೆಸ್ ಅರ್ಜಿಯನ್ನು ಮಾನ್ಯತೆ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕೆ.ಜಿ.ಬೋಪಯ್ಯ ಉಸ್ತುವಾರಿಯಲ್ಲೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆರಂಭವಾಗಿದೆ.
ವಿಧಾನಸಭೆ ಸದನದ ಕಲಾಪದ ವಿಡಿಯೋ ರೆಕಾರ್ಡಿಂಗ್ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಶುಭ ಗಳಿಗೆ ನೋಡಿಕೊಂಡು ಸದನಕ್ಕೆ ಕಾಲಿಟ್ಟಿದ್ದಾರೆ.
ಬಿಜೆಪಿ ಮ್ಯಾಜಿಕ್ ನಂಬರ್ 110 ತಲುಪುತ್ತಾ? ವಿಶ್ವಾಸಮತ ಯಾಚನೆ ಸಾಬೀತುಪಡಿಸುವಲ್ಲಿ ಯಶಸ್ವಿಯಾಗುತ್ತಾ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.