ನಟ ಸುದೀಪ್ ನಮ್ಮ ಸಮಾಜದವರು, ಅವರ ಮೇಲೆ ನಮಗೆ ಗೌರವ ಇದೆ. ನನ್ನನ್ನು ಗೆಲ್ಲಿಸಲು ನಮ್ಮ ಸಮಾಜದವರಾದ ಅವರು ಮುಂದಾಗಬೇಕು ಎಂದು ಮಾಜಿ ಸಂಸದ ಶ್ರೀರಾಮುಲು ಹೇಳಿದರು.
ಕೊಳ್ಳೇಗಾಲ: ನಟ ಸುದೀಪ್ ನಮ್ಮ ಸಮಾಜದವರು, ಅವರ ಮೇಲೆ ನಮಗೆ ಗೌರವ ಇದೆ. ನನ್ನನ್ನು ಗೆಲ್ಲಿಸಲು ನಮ್ಮ ಸಮಾಜದವರಾದ ಅವರು ಮುಂದಾಗಬೇಕು ಎಂದು ಮಾಜಿ ಸಂಸದ ಶ್ರೀರಾಮುಲು ಹೇಳಿದರು.
Add Asianetnews Kannada as a Preferred Source

ಶುಕ್ರವಾರ ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಚಿತ್ರನಟ ಸುದೀಪ್ಗೆ ನಾವೆಲ್ಲರೂ ಅಭಿಮಾನಿಗಳು. ಅವರು ನಮ್ಮ (ವಾಲ್ಮೀಕಿ) ಸಮಾಜದ ಹಿರಿಯ ಕಲಾವಿದರು. ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದರು.
ಸಿದ್ದು ಪರ ಸುದೀಪ್ ಪ್ರಚಾರ ಬೇಡ: ಸುದೀಪ್ ಸಿದ್ದರಾಮಯ್ಯ ಪರ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಇದರಿಂದ ನಮ್ಮ ಪಂಗಡಕ್ಕೆ ಸೇರಿದ ಶ್ರೀರಾಮುಲು ಅವರಿಗೆ ಹೊಡೆತವಾಗಲಿದ್ದು, ಸಿದ್ದು ಪರ ಪ್ರಚಾರ ನಡೆಸಬಾರದು ಎಂದು ಬಾದಾಮಿಯಲ್ಲಿ ವಾಲ್ಮೀಕಿ ಜನಾಂಗದ ಮುಖಂಡರು ಹೇಳಿದ್ದಾರೆ.
