ಬಾದಾಮಿ ಸಿಎಂ ಸಿದ್ದರಾಮಯ್ಯ ಹಾಗೂ ಶ್ರೀರಾಮುಲುಗೆ ಪ್ರತಿಷ್ಠೆಯ ಕಣವಾಗಿದೆ. ಶತಾಯ ಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಶ್ರೀರಾಮುಲು ಸಖತ್ ಸ್ಟ್ರಾಟರ್ಜಿ ಪ್ಲೇ ಮಾಡಿದ್ದಾರೆ. 

ಬಾಗಲಕೋಟೇ (ಮೇ. 10): ಬಾದಾಮಿ ಸಿಎಂ ಸಿದ್ದರಾಮಯ್ಯ ಹಾಗೂ ಶ್ರೀರಾಮುಲುಗೆ ಪ್ರತಿಷ್ಠೆಯ ಕಣವಾಗಿದೆ. ಶತಾಯ ಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಶ್ರೀರಾಮುಲು ಸಖತ್ ಸ್ಟ್ರಾಟರ್ಜಿ ಪ್ಲೇ ಮಾಡಿದ್ದಾರೆ. 

Add Asianetnews Kannada as a Preferred SourcegooglePreferred

ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಇಂದು ಎಸ್ಸಿ ಮತ್ತು ಲಿಂಗಾಯತ ಸಮುದಾಯದವರ ಮತ ಸೆಳೆಯಲು ಪ್ಲಾನ್ ಮಾಡಿದ್ದಾರೆ. ಎಸ್ಸಿ ಮತಗಳ ಸೆಳೆಯಲು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಮೂಲಕ ರ್ಯಾಲಿಯಲ್ಲಿ ಪ್ರಚಾರ ಮಾಡಿಸಿದ್ದಾರೆ. ಬಿಎಸ್‌ವೈ ಮೂಲಕ‌ ಲಿಂಗಾಯತ ಮತಗಳ ಸೆಳೆಯುವ ಪ್ಲಾನ್ ಮಾಡಿದ್ದಾರೆ. ಇನ್ನು ಬಿಜೆಪಿ ಚಾಣಕ್ಯ ಅಮಿತ್ ಶಾ ಬಾದಾಮಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಎಂದಿನಂತೆ ಶ್ರೀರಾಮುಲು ಕೂಡಾ ರ್ಯಾಲಿ ನಡೆಸಿದ್ದಾರೆ. 

ಬಿಜೆಪಿ ನಾಯಕರ ರ್ಯಾಲಿ ಶ್ರೀರಾಮುಲುಗೆ ವರ್ಕೌಟ್ ಆಗುತ್ತಾ ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ.