ಸಾಕಷ್ಟು ಲೆಕ್ಕಾಚಾರಗಳ ನಂತರ ಬಾದಾಮಿಯಿಂದ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವುದು ಖಚಿತವಾಗಿದೆ. ಸಿಎಂ ವಿರುದ್ಧ ಪ್ರಬಲ ಸ್ಪರ್ಧಿಯಾಗಿ ಶ್ರೀ ರಾಮುಲುರನ್ನು ಬಿಜೆಪಿ ಕಣಕ್ಕಿಳಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ.  ಶ್ರೀ ರಾಮುಲು ಸೂಕ್ತ ಅಭ್ಯರ್ಥಿ ಎಂದು ಬಿಜೆಪಿ ವಲಯದಲ್ಲಿ ಚರ್ಚೆ ನಡೆದಿದೆ.  ಶ್ರೀರಾಮಲು ಸ್ಪರ್ಧಿಸಿದ್ದರೆ ಸಿದ್ದರಾಮಯ್ಯ ವಿರುದ್ಧ ಪ್ರಬಲ ಪೈಪೋಟಿ ಸಾಧ್ಯ ಎಂಬ ಲೆಕ್ಕಾಚಾರ ಹಾಕಿದೆ.  ಬಾದಾಮಿಯಲ್ಲಿ 48 ಸಾವಿರ ಕುರುಬರ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ.  ಸುಲಭ ಗೆಲುವಿನ ಲೆಕ್ಕಾಚಾರ ಹಾಕಿದ್ದ ಸಿದ್ದರಾಮಯ್ಯಗೆ ಬಿಜೆಪಿ ಶಾಕ್ ನೀಡಿದೆ. ​​

ಬೆಂಗಳೂರು (ಏ. 22):  ಸಾಕಷ್ಟು ಲೆಕ್ಕಾಚಾರಗಳ ನಂತರ ಬಾದಾಮಿಯಿಂದ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವುದು ಖಚಿತವಾಗಿದೆ. ಸಿಎಂ ವಿರುದ್ಧ ಪ್ರಬಲ ಸ್ಪರ್ಧಿಯಾಗಿ ಶ್ರೀ ರಾಮುಲುರನ್ನು ಬಿಜೆಪಿ ಕಣಕ್ಕಿಳಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ. 
ಶ್ರೀ ರಾಮುಲು ಸೂಕ್ತ ಅಭ್ಯರ್ಥಿ ಎಂದು ಬಿಜೆಪಿ ವಲಯದಲ್ಲಿ ಚರ್ಚೆ ನಡೆದಿದೆ. ಶ್ರೀರಾಮಲು ಸ್ಪರ್ಧಿಸಿದ್ದರೆ ಸಿದ್ದರಾಮಯ್ಯ ವಿರುದ್ಧ ಪ್ರಬಲ ಪೈಪೋಟಿ ಸಾಧ್ಯ ಎಂಬ ಲೆಕ್ಕಾಚಾರ ಹಾಕಿದೆ. ಬಾದಾಮಿಯಲ್ಲಿ 48 ಸಾವಿರ ಕುರುಬರ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಸುಲಭ ಗೆಲುವಿನ ಲೆಕ್ಕಾಚಾರ ಹಾಕಿದ್ದ ಸಿದ್ದರಾಮಯ್ಯಗೆ ಬಿಜೆಪಿ ಶಾಕ್ ನೀಡಿದೆ. ​​

ಬಾದಾಮಿ ಜಾತಿ ಲೆಕ್ಕಾಚಾರ ಹೀಗಿದೆ. 

ಬಾದಾಮಿ ಮತ ಸಮೀಕರಣ : ಒಟ್ಟು ಮತದಾರರು 2.14 ಲಕ್ಷ

ಲಿಂಗಾಯತ (ಪಂಚಮಸಾಲಿ)- 32 ಸಾವಿರ
ಗಾಣಿಗ - 26 ಸಾವಿರ
ನೇಕಾರ - 16 ಸಾವಿರ 
ರೆಡ್ಡಿ - 10 ಸಾವಿರ
ಕುರುಬ - 47 ಸಾವಿರ 
ಎಸ್ ಸಿ - 25 ಸಾವಿರ
ಮುಸ್ಲಿಂ - 10 ಸಾವಿರ
ವಾಲ್ಮೀಕಿ - 13 ಸಾವಿರ,
ಲಂಬಾಣಿ - 7 ಸಾವಿರ