ಕರ್ನಾಟಕದಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಹಲವೆಡೆ ವಿವಿಧ ಆಮಿಷಗಳ ಮೂಲಕ ಮತದಾರರನ್ನು ಸೆಳೆಯುವ ಯತ್ನಗಳು ನಡೆಯುತ್ತಲೇ ಇದೆ. ಅದರಂತೆ ತುಮಕೂರಲ್ಲಿ ಉಪ್ಪಿನ ಪ್ಯಾಕೇಟ್ ಕೊಟ್ಟು ಮತಯಾಚನೆ ಮಾಡಲಾಗಿದೆ.
ತುಮಕೂರು : ಕರ್ನಾಟಕದಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಹಲವೆಡೆ ವಿವಿಧ ಆಮಿಷಗಳ ಮೂಲಕ ಮತದಾರರನ್ನು ಸೆಳೆಯುವ ಯತ್ನಗಳು ನಡೆಯುತ್ತಲೇ ಇದೆ.
Add Asianetnews Kannada as a Preferred Source

ಅದರಂತೆ ತುಮಕೂರಲ್ಲಿ ಉಪ್ಪಿನ ಪ್ಯಾಕೇಟ್ ಕೊಟ್ಟು ಮತಯಾಚನೆ ಮಾಡಲಾಗಿದೆ. ಜನರ ಭಾವನೆ ಮೇಲೆ ಸವಾರಿ ಮಾಡಿ ಆಮಿಷ ಒಡ್ಡಲಾಗುತ್ತಿದೆ.
ಇಲ್ಲಿನ ಗಳೂರಿನಲ್ಲಿ ಗ್ರಾ.ಪಂ.ಅಧ್ಯಕ್ಷೆ ಯಶೋದಮ್ಮ ಪತಿ ಗಂಗಾಧರ್ ಎಂಬುವವರು ಈ ರೀತಿಯ ಆಮಿಷ ಒಡ್ಡಿ ಮತದಾರರನ್ನು ಸೆಳೆವ ಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಮತದಾರರಿಗೆ ಹಣ, ಹಾಲಿನ ಪ್ಯಾಕೇಟ್, ಉಪ್ಪಿನ ಪ್ಯಾಕೇಟ್ ಹಾಗೂ ತಲಾ 500 ಹಣ ನೀಡಿ ಮತ ನೀಡಲು ಒತ್ತಾಯ ಮಾಡಲಾಗಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಭ್ಯರ್ಥಿಗಳು ರಾತ್ರಿ ದರ್ಬಾರ್ ನಡೆಸಿದ್ದು, ಈ ವಿಚಾರ ಬೆಳಕಿಗೆ ಬಂದಿದೆ.
