222 ರಲ್ಲಿ 7 ಸ್ತ್ರೀಯರು ಮಾತ್ರ ಗೆಲುವು
ಇವರಲ್ಲಿ 7 ಮಂದಿ ಮಾತ್ರ ಗೆಲುವುಗಳಿಸಿದ್ದಾರೆ. ಕಾಂಗ್ರೆಸ್ 4, ಬಿಜೆಪಿಯಿಂದ ಮೂವರಿಗೆ ಜಯ ಒಲಿದಿದೆ. ಮೋಟಮ್ಮ, ಉಮಾಶ್ರೀ, ಗೀತಾ ಮಹದೇವಪ್ರಸಾದ್, ಶಾರದಾ ನಾಯ್ಕ, ಶಾಕುಂತಲಾ ಶೆಟ್ಟಿ ಮುಂತಾದ ಪ್ರಮುಖರು ಸೋಲು ಅನುಭವಿಸಿದ್ದಾರೆ.
ಬೆಂಗಳೂರು(ಮೇ.15): ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಯಾವೊಂದು ಪಕ್ಷಕ್ಕೂ ಬಹುಮತ ಲಭಿಸದೆ ಸರ್ಕಾರ ರಚನೆಗೆ ಕಾರ್ಯತಂತ್ರ ನಡೆಸುತ್ತಿವೆ.
ಈ ನಡುವೆ ಒಟ್ಟು 222 ಕ್ಷೇತ್ರಗಳಲ್ಲಿ ಪ್ರಮುಖ ಮೂರು ಪಕ್ಷದಿಂದ 26 ಸ್ತ್ರೀಯರು ಸ್ಪರ್ಧಿಸಿದ್ದರು. ಇವರಲ್ಲಿ 7 ಮಂದಿ ಮಾತ್ರ ಗೆಲುವುಗಳಿಸಿದ್ದಾರೆ. ಕಾಂಗ್ರೆಸ್ 4, ಬಿಜೆಪಿಯಿಂದ ಮೂವರಿಗೆ ಜಯ ಒಲಿದಿದೆ. ಮೋಟಮ್ಮ, ಉಮಾಶ್ರೀ, ಗೀತಾ ಮಹದೇವಪ್ರಸಾದ್, ಶಾರದಾ ನಾಯ್ಕ, ಶಾಕುಂತಲಾ ಶೆಟ್ಟಿ ಮುಂತಾದ ಪ್ರಮುಖರು ಸೋಲು ಅನುಭವಿಸಿದ್ದಾರೆ.
- ಲಕ್ಷ್ಮಿ ಹೆಬ್ಬಾಳ್ಕರ್ - ಬೆಳಗಾವಿ ಗ್ರಾಮಾಂತರ - ಕಾಂಗ್ರೆಸ್
- ಡಾ.ಅಂಜಲಿ ನಿಂಬಾಳ್ಕರ್ - ಖಾನಾಪುರ - ಕಾಂಗ್ರೆಸ್
- ಖನೀಜಾ ಫಾತೀಮಾ - ಕಲಬುರಗಿ ಉತ್ತರ - ಕಾಂಗ್ರೆಸ್
- ರೂಪಾಲಿ ಸಂತೋಷ್ ನಾಯ್ಕ್ - ಕಾರವಾರ - ಬಿಜೆಪಿ
- ಕೆ.ಪೂರ್ಣಿಮಾ - ಹಿರಿಯೂರು - ಬಿಜೆಪಿ
- ರೂಪಕಲಾ ಎಂ - ಕೆಜಿಎಫ್ - ಕಾಂಗ್ರೆಸ್
- ಶಶಿಕಲಾ ಜೊಲ್ಲೆ - ನಿಪ್ಪಣಿ - ಬಿಜೆಪಿ