ಕೊಪ್ಪಳ ಜಿಲ್ಲೆಯಲ್ಲಿ 5 ವಿಧಾನಸಭೆ ಕ್ಷೇತ್ರಗಳು ಕುಷ್ಟಗಿ, ಕನಕಗಿರಿ, ಕೊಪ್ಪಳ, ಗಂಗಾವತಿ ಮತ್ತು ಯಲಬುರ್ಗಾ ಮೂರು ಕ್ಷೇತ್ರದಲ್ಲಿ ಕಮಲ ಅರಳಿದರೆ ಎರಡು ಕೈ ಪಾಲಿಗೆ

ಬೆಂಗಳೂರು [ಮೇ. 15]: 15ನೇ ವಿಧಾನಸಭೆಯ ಚುನಾವಣಾ ಫಲಿತಾಂಶಗಳು ಮಂಗಳವಾರ ಪ್ರಕಟವಾಗಿದ್ದು, ಕೊಪ್ಪಳದಲ್ಲಿ ಬಿಜೆಪಿಯು ಕೈ ಪಾಳೆಯಕ್ಕೆ ಶಾಕ್ ನೀಡಿದೆ. ಜಿಲ್ಲೆಯ ಒಟ್ಟು 5 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಯು 3 ಸೀಟುಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. 

ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಸೇರಿದ್ದ ಗಂಗಾವತಿಯ ಪ್ರಭಾವಿ ಶಾಸಕ ಇಕ್ಬಾಲ್ ಅನ್ಸಾರಿಯನ್ನು ಬಿಜೆಪಿಯ ಈಶ್ವರಪ್ಪ ಮುನವಳ್ಳಿ ಸೋಲಿನ ರುಚಿ ತೋರಿಸಿದ್ದಾರೆ. ಸುಮಾರು 7973 ವೋಟುಗಳ ಅಂತರದಿಂದ ಇಕ್ಬಾಲ್ ಅನ್ಸಾರಿ ಪರಾಭವಗೊಂಡಿದ್ದಾರೆ. 2013ರಲ್ಲಿ ನಡೆದ ವಿದಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 3, ಹಾಗೂ ಜೆಡಿಎಸ್ ಮತ್ತು ಬಿಜೆಪಿ ತಲಾ 1 ಸ್ಥಾನಗಳನ್ನು ಗಳಿಸಿತ್ತು.

ಕ್ಷೇತ್ರಗೆಲುವುಪಕ್ಷಮತಗಳುಸೋಲುಪಕ್ಷಮತಗಳುಅಂತರ
ಕುಷ್ಟಗಿಅಮರೇಗೌಡ ಬಯ್ಯಾಪುರಕಾಂಗ್ರೆಸ್87566ದೊಡ್ಡಣಗೌಡ ಪಾಟೀಲ್ಬಿಜೆಪಿ6953518031
ಕನಕಗಿರಿಬಸವರಾಜ್ ದಾದೆಸುಗುರ್ಬಿಜೆಪಿ87735ಶಿವರಾಜ್ ತಂಗಡಗಿಕಾಂಗ್ರೆಸ್7351014225
ಗಂಗಾವತಿಪರಣ ಈಶ್ವರಪ್ಪ ಮುನವಳ್ಳಿಬಿಜೆಪಿ67617ಇಕ್ಬಾಲ್ ಅನ್ಸಾರಿಕಾಂಗ್ರೆಸ್596447973
ಯಲಬುರ್ಗಾಆಚಾರ್ ಹಾಲಪ್ಪ ಬಸಪ್ಪಬಿಜೆಪಿ79072ಬಸವರಾಜ್ ರಾಯರೆಡ್ಡಿಕಾಂಗ್ರೆಸ್6575413318
ಕೊಪ್ಪಳಬಸವರಾಜ್ ಹಿತ್ನಾಳ್ಕಾಂಗ್ರೆಸ್98783ಅಮರೇಶ್ ಸಂಗಣ್ಣ ಕರಡಿಬಿಜೆಪಿ7243226531

ಈ ಬಾರಿ ಬಹಳ ಪ್ರಯಾಸಪಟ್ಟು ಟಿಕೆಟ್ ಗಿಟ್ಟಿಸಿದ್ದ ಕರಡಿ ಸಂಗಣ್ಣ ಪುತ್ರ, ಬಿಜೆಪಿ ಅಭ್ಯರ್ಥಿ ಅಮರೇಶ್‌ನ್ನು ಬಸವರಾಜ್ ಹಿತ್ನಾಳ್ 26 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ 76.12 ಶೇ. ಮತದಾನವಾಗಿದೆ.