ಚೌಕ್ಸಿ ಪರ ಕಪಿಲ್ ಸಿಬಾಲ್, ಚಿದಂಬರ್ ಕೂಡ ವಾದ ಮಾಡಿರ್ತಾರೆ : ಅಭ್ಯರ್ಥಿ ಪರ ನಿಂತ ಖರ್ಗೆ
ಹಾಗೇ ನೋಡೊದಾದ್ರೆ ಕಪಿಲ್ ಸಿಬಾಲ್, ಚಿದಂಬರ್ ಅಂತಾ ನಾಯಕರು ಈ ರೀತಿಯ ಒಂದಲ್ಲ ಒಂದು ಕೇಸ್ ಅಲ್ಲಿ ವಾದ ಮಾಡಿರ್ತಾರೆ.ಅವರ ವೃತ್ತಿ ಅವರು ಮಾಡಿದ್ದಾರೆ.ಆ ಕಾರಣಕ್ಕೆ ಟಿಕೆಟ್ ಬೇಡ ಅನ್ನೋದು ಸರಿಯಲ್ಲ ಎಂದು ವಾದ ಮಾಡಿದ್ದಾರೆ' ಎನ್ನಲಾಗಿದೆ. ಸಿಎಂಗೆ ಉಸ್ತುವಾರಿ ವೇಣುಗೋಪಾಲ್ ಅವರು ಹೈಕಮಾಂಡ್ ಮಾಹಿತಿ ನೀಡಿದ ಬಗ್ಗೆ ತಿಳಿಸಿದ್ದಾರೆ.
ಬೆಂಗಳೂರು(ಏ.21): ಮಡಿಕೇರಿಯಿಂದ ಕಾಂಗ್ರೆಸ್'ನಿಂದ ಟಿಕೆಟ್ ನೀಡಿ ಬಿ ಫಾರ್ಮ್ ನಿರಾಕರಿಸಲಾಗಿದ್ದ ಅಭ್ಯರ್ಥಿ ಚಂದ್ರಮೌಳಿಗೆ ಮತ್ತೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.
ಚೌಕ್ಸಿ ಪರ ವಾದ ಮಾಡಿದರೆಂದು ಬಿ ಫಾರ್ಮ್ ನಿರಾಕರಿಸಲಾಗಿತ್ತು. ಇವರ ಪರವಾಗಿ ಮಾತನಾಡಿದ ಹಿರಿಯ ನಾಯಕ ಖರ್ಗೆ ಅವರು' ಚೌಕ್ಸಿ ಪರ ವಾದ ಮಾಡಿದ್ದು ಅವರ ವೃತ್ತಿ. ಹಾಗೇ ನೋಡೊದಾದ್ರೆ ಕಪಿಲ್ ಸಿಬಾಲ್, ಚಿದಂಬರ್ ಅಂತಾ ನಾಯಕರು ಈ ರೀತಿಯ ಒಂದಲ್ಲ ಒಂದು ಕೇಸ್ ಅಲ್ಲಿ ವಾದ ಮಾಡಿರ್ತಾರೆ.ಅವರ ವೃತ್ತಿ ಅವರು ಮಾಡಿದ್ದಾರೆ.ಆ ಕಾರಣಕ್ಕೆ ಟಿಕೆಟ್ ಬೇಡ ಅನ್ನೋದು ಸರಿಯಲ್ಲ ಎಂದು ವಾದ ಮಾಡಿದ್ದಾರೆ' ಎನ್ನಲಾಗಿದೆ. ಸಿಎಂಗೆ ಉಸ್ತುವಾರಿ ವೇಣುಗೋಪಾಲ್ ಅವರು ಹೈಕಮಾಂಡ್ ಮಾಹಿತಿ ನೀಡಿದ ಬಗ್ಗೆ ತಿಳಿಸಿದ್ದಾರೆ.