ಬಿಜೆಪಿ ಆರೆಸ್ಸೆಸ್ನಿಂದ ಸಂವಿಧಾನದ ಮೇಲೆ ದಾಳಿ: ರಾಹುಲ್ ಗಾಂಧಿ
- ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಬುಡಮೇಲುಗೊಳಿಸುತ್ತಿರುವ ಬಿಜೆಪಿ ಆರೆಸ್ಸೆಸ್
- ದೇಶವನ್ನು ಸರ್ವಾಧಿಕಾರದತ್ತ ಕೊಂಡೊಯ್ಯುವ ಹುನ್ನಾರ
ನವದೆಹಲಿ [ಮೇ. 17]: ಕರ್ನಾಟಕ ರಾಜಕೀಯದಲ್ಲಾಗುತ್ತಿರುವ ನಾಟಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅದ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಬುಡಮೇಲುಗೊಳಿಸುತ್ತಿರುವ ಬಿಜೆಪಿ-ಆರೆಸ್ಸೆಸ್, ದೇಶವನ್ನು ಸರ್ವಾಧಿಕಾರದತ್ತ ಕೊಂಡೊಯ್ಯುವ ಹುನ್ನಾರ ಹೊಂದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
आम तौर से जनता न्याय के लिये सुप्रीम कोर्ट जाती है, 70 साल में पहली बार आपने देखा होगा कि सुप्रीम कोर्ट के जज जनता के पास आकर कह रहे हैं कि हमें दबाया जा रहा है, हम अपना काम नहीं कर पा रहे हैं : कांग्रेस अध्यक्ष @RahulGandhi#बदलेगा_छत्तीसगढ़
— Congress (@INCIndia) May 17, 2018
One by one, the RSS has captured the independent institutions of the country: Congress President @RahulGandhi #बदलेगा_छत्तीसगढ़ pic.twitter.com/xHwRcmgUgn
— Congress (@INCIndia) May 17, 2018
The BJP is creating an atmosphere of fear. They don't want Dalits, backward classes and women to fulfill their dreams: Congress President @RahulGandhi #बदलेगा_छत्तीसगढ़
— Congress (@INCIndia) May 17, 2018
ಒಂದರ ಬಳಿಕ ಒಂದು ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಆರೆಸ್ಸೆಸ್ ನಿಯಂತ್ರಿಸುತ್ತಿದೆ. ಸರ್ವಾಧಿಕಾರ ಇರುವ ದೇಶಗಳಲ್ಲಿ ಅಥವಾ ಪಾಕಿಸ್ತಾನದಲ್ಲಿ ಇಂತಹದ್ದೆಲ್ಲಾ ನಡೆಯುತ್ತದೆ, ಆದರೆ ಭಾರತದಂತಹ ಪ್ರಜಾತಾಂತ್ರಿಕ ದೇಶದಲ್ಲಿ ಇದು ನಡೆಯಬಾರದು, ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಯಪುರದ ಜನ ಸ್ವರಾಜ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಬಿಜೆಪಿ ಆರೆಸ್ಸೆಸ್ನಿಂದ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ದೇಶದ ನ್ಯಾಯಾಂಗ, ಮಾಧ್ಯಮಗಳು ಭಯಭೀತವಾಗಿವೆ. ಸಂಸದರೂ ಕೂಡಾ ಭಯದಲ್ಲಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿ ಮುಂದೆ ಒಂದೇ ಒಂದು ಶಬ್ಧ ಮಾತನಾಡುವಂತಿಲ್ಲ, ಎಂದು ರಾಹುಲ್ ಗಾಂಧಿ ಹರಿಹಯ್ದಿದ್ದಾರೆ.