Asianet Suvarna News Asianet Suvarna News

ನನ್ನನ್ನು ಸೋಲಿಸಲು ಇವಿಎಂ ಅದಲು - ಬದಲು : ಶೆಟ್ಟರ್

ಉದ್ದೇಶಪೂರ್ವಕವಾಗಿ ನನ್ನ ಕ್ಷೇತ್ರದಲ್ಲಿ ಹಲವಾರು ಗೋಲ್‌ಮಾಲ್ ನಡೆದಿದ್ದು ಅನೇಕ ಕಡೆ ಇವಿಎಮ್ ಮಷಿನ್ ಅದಲು-ಬದಲು ಮಾಡಿ ನನ್ನನ್ನು ವಾಮಮಾರ್ಗದಿಂದ ಸೋಲಿಸಲು ಪ್ರಯತ್ನಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.

Karnataka Election : Low voter turnout worries Jagadish Shettar

ಹುಬ್ಬಳ್ಳಿ (ಮೇ 14) : ಉದ್ದೇಶಪೂರ್ವಕವಾಗಿ ನನ್ನ ಕ್ಷೇತ್ರದಲ್ಲಿ ಹಲವಾರು ಗೋಲ್‌ಮಾಲ್ ನಡೆದಿದ್ದು ಅನೇಕ ಕಡೆ ಇವಿಎಮ್ ಮಷಿನ್ ಅದಲು-ಬದಲು ಮಾಡಿ ನನ್ನನ್ನು ವಾಮಮಾರ್ಗದಿಂದ ಸೋಲಿಸಲು ಪ್ರಯತ್ನಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ,  ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.

ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನ ವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದರು. ವೋಟರ್ ಐಡಿ ಹೊಂದಿದ ಸಾವಿರಾರು ಬಿಜೆಪಿಯ ಸಾಂಪ್ರದಾಯಿಕ ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಿದ್ದಾರೆ. ಇದರಿಂದ ಅನೇಕರು ಮತದಾನದಿಂದ ವಂಚಿತರಾಗಿದ್ದಾರೆ. 

ಉದ್ದೇಶ ಪೂರ್ವಕವಾಗಿ ಮತದಾರರ ಕ್ಷೇತ್ರವನ್ನು ಬದಲಿಸಿದ್ದಾರೆ ಎಂದು ಆರೋಪಿಸಿದರು. ಇದನ್ನೆಲ್ಲ ಚುನಾವಣಾಧಿಕಾರಿಗಳು  ಗಮನಿಸಬೇಕಿತ್ತು. ಆದರೆ, ಅವರು ನಿರ್ಲಕ್ಷ್ಯವಹಿಸಿದ್ದರು. ಇದನ್ನೆಲ್ಲ ಸೂಕ್ಷ ್ಮವಾಗಿ ಗಮನಿಸಿದರೆ ನನ್ನನ್ನು ಸೋಲಿಸಲು ವ್ಯವಸ್ಥಿತ ಷಡ್ಯಂತ್ರ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇನ್ನು ಈ ವಿಷಯಕ್ಕೆ ಸಂಬಂಧಿಸಿ ಚುನಾವಣಾ ಆಯೋಗಕ್ಕೆ ಲಿಖಿತ ದೂರು ನೀಡುತ್ತೇನೆ ಎಂದರು ಶೆಟ್ಟರ್.

Follow Us:
Download App:
  • android
  • ios