ಈ ಬಾರಿ ಚುನಾವಣೆಯ ಕೌತುಕಗಳಿವು
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯು ಹಲವು ರೀತಿಯ ಕೌತುಕಗಳನ್ನು ಒಳಗೊಂಡಿತ್ತು. ಅಂತಹ ಕೌತುಕಗಳೇನು ಎನ್ನುವ ಬಗ್ಗೆ ಇಲ್ಲಿದೆ ವಿವರ
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯು ಹಲವು ರೀತಿಯ ಕೌತುಕಗಳನ್ನು ಒಳಗೊಂಡಿತ್ತು. ಅಂತಹ ಕೌತುಕಗಳೇನು ಎನ್ನುವ ಬಗ್ಗೆ ಇಲ್ಲಿದೆ ವಿವರ
ಮೊದಲ ಬಾರಿ ಕರ್ನಾಟಕ ವಿಧಾನಸಭೆಗೆ ಬಿಎಸ್ಪಿ ಪ್ರವೇಶ. ಕೊಳ್ಳೇಗಾಲದಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಮಹೇಶ್ಗೆ ಜಯ.
ಈ ಬಾರಿ ಪ್ರಮುಖ 3 ಪಕ್ಷ ಹೊರತುಪಡಿಸಿ ಇತರೆ ಇಬ್ಬರಿಗೆ ಮಾತ್ರ ಜಯಸಿಕ್ಕಿದೆ. ಮುಳಬಾಗಿಲಿನಲ್ಲಿ ಎಚ್.ನಾಗೇಶ್, ರಾಣೆಬೆನ್ನೂರಿನಲ್ಲಿ ಕೆಪಿಜೆಪಿ ಅಭ್ಯರ್ಥಿ ಆರ್.ಶಂಕರ್ಗೆ ಜಯ.
ಜೆಡಿಎಸ್ನಿಂದ ಬಂಡಾಯ ಎದ್ದು ಕಾಂಗ್ರೆಸ್ ಸೇರಿದ್ದ 7 ಜನರ ಪೈಕಿ ನಾಲ್ವರಿಗೆ ಸೋಲು, ಮೂವರಿಗೆ ಮಾತ್ರ
ಜಯ.
ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ವಿಧಾನಪರಿಷತ್ನ 9 ಹಾಲಿ ಸದಸ್ಯರ ಪೈಕಿ 5 ಜನರಿಗೆ ಗೆಲುವು ಸಿಕ್ಕಿದೆ. 7 ಈ ಬಾರಿ 264 ಮಹಿಳೆಯರು ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದರು. ಇವರ ಪೈಕಿ ಕಾಂಗ್ರೆಸ್ನ 4, ಬಿಜೆಪಿ ಮೂವರು ಆಯ್ಕೆಯಾಗಿದ್ದಾರೆ. ೧೨ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 75 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದರು. ಕಳೆದ ಬಾರಿ ಈ ಪೈಕಿ 43 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಇಲ್ಲಿ 12 ಸ್ಥಾನ ಕಳೆದುಕೊಂಡಿದೆ. 16 ಈ ಬಾರಿ ಕಣಕ್ಕೆ ಇಳಿದಿದ್ದ 32 ಸಚಿವರ ಪೈಕಿ 16 ಸಚಿವರು ಸೋಲನ್ನಪ್ಪಿದ್ದಾರೆ.
21 ಪ್ರಧಾನಿ ನರೇಂದ್ರ ಮೋದಿ 6 ದಿನಗಳ ಅವಧಿಯಲ್ಲಿ ಒಟ್ಟು 21 ಜಿಲ್ಲೆಗಳಲ್ಲಿ ಪ್ರಚಾರ ರ್ಯಾಲಿ ಕೈಗೊಂಡಿದ್ದರು.
38 ಮೋದಿ ಪ್ರಚಾರ ಮಾಡಿದ ಪ್ರದೇಶಗಳ ವ್ಯಾಪ್ತಿಯ160 ಕ್ಷೇತ್ರಗಳ ಪೈಕಿ ೮೪ರಲ್ಲಿ ಬಿಜೆಪಿಗೆ ಜಯ. ಕಳೆದ ಬಾರಿ ಇಲ್ಲಿ ಬಿಜೆಪಿ 38 ರಲ್ಲಿ ಗೆದ್ದಿತ್ತು. ಈ ಬಾರಿ 61 ಹೊಸಬರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಬಿಜೆಪಿಯ 31, ಕಾಂಗ್ರೆಸ್ನ 17, ಜೆಡಿಎಸ್ನ 16, ಇತರೆ ಇಬ್ಬರು ಸೇರಿದ್ದಾರೆ.
ಎಲೆಕ್ಷನ್ ಸುದ್ದಿಗಾಗಿ https://goo.gl/cKC2ii ಕ್ಲಿಕ್ ಮಾಡಿ
https://kannada.asianetnews.com/karnataka-assembly-election-2018/karnataka-election-congress-win-more-seats-p8swdd
https://kannada.asianetnews.com/karnataka-assembly-election-2018/karnataka-election-result-bjp-win-or-lose-p8suwj