Asianet Suvarna News Asianet Suvarna News

ಇಂಡಿಯಲ್ಲಿ ಕಾಂಗ್ರೆಸ್ - ಪಕ್ಷೇತರ ಜಿದ್ದಾಜಿದ್ದಿ

ದಯಾಸಾಗರ ಪಾಟೀಲ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಆದರೆ ಈಗ 7 ಜನರು ದಯಾಸಾಗರ ಪಾಟೀಲ ಅವರ ಬೆಂಬಲಕ್ಕೆ ಬಾರದೆ ಪಕ್ಷೇತರ ಅಭ್ಯರ್ಥಿ ರವಿಕಾಂತ ಪಾಟೀಲರಿಗೆ ಬೆಂಬಲ ನೀಡುತ್ತಿದ್ದಾರೆ. ಕುರುಬ ಸಮಾಜದ ಬಿ.ಡಿ.ಪಾಟೀಲ ಹಂಜಗಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

Indhi Constituency Story Tuff Competition

ಇಂಡಿ(ಮೇ.01): ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಪಕ್ಷೇತರರಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಮೇಲ್ನೋಟಕ್ಕೆ ಚತುಷ್ಕೋನ ಸ್ಪರ್ಧೆ ಕಂಡರೂ ಕಾಂಗ್ರೆಸ್, ಪಕ್ಷೇತರ ಮಧ್ಯೆ ಜಿದ್ದಾಜಿದ್ದಿ ನಡೆದಿದೆ. ಸಕ್ಕರೆ ಕಾರ್ಖಾನೆ, ಲಿಂಬೆ ನಿಗಮ ಹಾಲಿ ಶಾಸಕ ಯಶವಂತರಾಯಗೌಡ ಪಾಟೀಲರ ಕೈ ಹಿಡಿಯುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ 8 ಟಿಕೆಟ್ ಆಕಾಂಕ್ಷಿಗಳಿದ್ದರು.
ಒಬ್ಬರಿಗೆ ಟಿಕೆಟ್ ಸಿಕ್ಕರೂ ಸಾಕು. 7 ಜನರು ಪಕ್ಷದ ಟಿಕೆಟ್ ಪಡೆದವರ ಪರವಾಗಿ ಕೆಲಸ ಮಾಡುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ದಯಾಸಾಗರ ಪಾಟೀಲ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಆದರೆ ಈಗ 7 ಜನರು ದಯಾಸಾಗರ ಪಾಟೀಲ ಅವರ ಬೆಂಬಲಕ್ಕೆ ಬಾರದೆ ಪಕ್ಷೇತರ ಅಭ್ಯರ್ಥಿ ರವಿಕಾಂತ ಪಾಟೀಲರಿಗೆ ಬೆಂಬಲ ನೀಡುತ್ತಿದ್ದಾರೆ. ಕುರುಬ ಸಮಾಜದ ಬಿ.ಡಿ.ಪಾಟೀಲ ಹಂಜಗಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರು ಇತರೆ ಸಮುದಾಯಗಳ ಮತವನ್ನೂ ಗಳಿಸಬೇಕಾಗಿದೆ.

Follow Us:
Download App:
  • android
  • ios