ಪ್ರಮಾಣ ವಚನಕ್ಕೂ ಮುನ್ನ ಶ್ರೀರಂಗನ ದರ್ಶನ ಪಡೆಯಲಿರುವ ಎಚ್ ಡಿಕೆ
ಪ್ರಮಾಣ ವಚನಕ್ಕೂ ಮುನ್ನ ದೇವರ ಆಶೀರ್ವಾದ ಪಡೆಯಲಿದ್ದಾರೆ ಎಚ್ ಡಿಕೆ. ಇಂದು ಮಧ್ಯಾಹ್ಯ ಕೇರಳದ ಶ್ರೀರಂಗಮ್ ದೇವಸ್ಥಾನಕ್ಕೆ ಕುಮಾರಸ್ವಾಮಿ. ರೇವಣ್ಣ ಜೊತೆಯಾಗಿ ತೆರಳಿದ್ದಾರೆ.
ಬೆಂಗಳೂರು (ಮೇ. 20): ಪ್ರಮಾಣ ವಚನಕ್ಕೂ ಮುನ್ನ ದೇವರ ಆಶೀರ್ವಾದ ಪಡೆಯಲಿದ್ದಾರೆ ಎಚ್ ಡಿಕೆ. ಇಂದು ಮಧ್ಯಾಹ್ಯ ಕೇರಳದ ಶ್ರೀರಂಗಮ್ ದೇವಸ್ಥಾನಕ್ಕೆ ಕುಮಾರಸ್ವಾಮಿ. ರೇವಣ್ಣ ಜೊತೆಯಾಗಿ ತೆರಳಿದ್ದಾರೆ.
ದೇವೇಗೌಡರ ಕುಟುಂಬ ಅತಿಯಾಗಿ ನಂಬುವ ದೈವ ಶ್ರೀರಂಗಮ್. ಚುನಾವಣೆಗೂ ಮುನ್ನ ಜೆಡಿಎಸ್ ಅಭ್ಯರ್ಥಿಗಳ ಬಿ ಫಾರಂಗೂ ಸಹ ಇಲ್ಲಿಯೇ ಪೂಜೆ ಮಾಡಿಸಲಾಗಿತ್ತು. ದೇವೇಗೌಡರು ಸಹ ಈ ದೇವಸ್ಥಾನಕ್ಕೆ ಆಗಾಗ ಭೇಟಿ ಕೊಡುತ್ತಲೇ ಇರುತ್ತಾರೆ. ಕುಮಾರಸ್ವಾಮಿ ಹಾಗೂ ರೇವಣ್ಣ ಇಂದು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ.
ಚುನಾವಣೆ ಘೋಷಣೆಯಾದಾಗಿನಿಂದಲೂ ದೇವೇಗೌಡರ ಕುಟುಂಬ ಅನೇಕ ಪೂಜೆ, ಪುನಸ್ಕಾರಗಳ ಮೊರೆ ಹೋಗಿತ್ತು.