ಸಿಎಂ ಪರವಾರವಾಗಿ ಪ್ರಚಾರಕ್ಕೆ ಬಾರಬೇಡಿ ಎಂದು ಜೆಡಿಎಸ್ ಬಾವುಟ ಹಿಡಿದು ನಾಗನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಬಂದ‌‌ ಪೊಲೀಸರು, ವಾಹನವನ್ನು ಊರಿನಿಂದ ಹೊರಕ್ಕೆ ಕಳುಹಿಸಿ ರಕ್ಷಣೆ ನಡೆಸಿದರು.

ಮೈಸೂರು(ಮೇ.05): ಪ್ರತಿಭಟನೆ ಕಿಚ್ಚು ಹೆಚ್ಚಾದ ಕಾರಣ ಸಿಎಂ ಪರ ಪ್ರಚಾರ ಕಣದಿಂದ ಚಾಲೆಂಜಿಗ್ ಸ್ಟಾರ್ ದರ್ಶನ್ ಸ್ಥಳ ಬದಲಾಯಿಸಿದ್ದಾರೆ.
ಚಾಮುಂಡೇಶ್ವರಿ ವಿದಾನಸಭಾ ಕ್ಷೇತ್ರದ ನಾಗನಹಳ್ಳಿ ಗ್ರಾಮಸ್ಥರು ನಟ ದರ್ಶನ್ ವಿರುದ್ಧ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ತಮ್ಮ ಪ್ರಚಾರ ಕಾರ್ಯಕ್ರಮವನ್ನು ಬೇರೆಡೆಗೆ ಬದಲಾಯಿಸಿದ್ದಾರೆ.
ಸಿಎಂ ಪರವಾರವಾಗಿ ಪ್ರಚಾರಕ್ಕೆ ಬಾರಬೇಡಿ ಎಂದು ಜೆಡಿಎಸ್ ಬಾವುಟ ಹಿಡಿದು ನಾಗನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಬಂದ‌‌ ಪೊಲೀಸರು, ವಾಹನವನ್ನು ಊರಿನಿಂದ ಹೊರಕ್ಕೆ ಕಳುಹಿಸಿ ರಕ್ಷಣೆ ನಡೆಸಿದರು. ಸಿಎಂ ಸಿದ್ದರಾಮಯ್ಯ ರೈತರ ಸಮಸ್ಯೆಯನ್ನು ಪರಿಹರಿಸಿಲ್ಲ.ಹೀಗಾಗಿ ಅವರ ಪರವಾಗಿ ಪ್ರಚಾರ ಮಾಡದಂತೆ ಎಚ್ಚರಿಕೆ ನೀಡಿದರು.

Add Asianetnews Kannada as a Preferred SourcegooglePreferred