ಕೈ ಪಾಳಯದಲ್ಲಿ ಶುರುವಾಗಿದೆ ದಲಿತ ಸಿಎಂ ಚರ್ಚೆ
ಚುನಾವಣಾ ಫಲಿತಾಂಶ ಹೊರ ಬೀಳುವ ಮುನ್ನವೇ ಕಾಂಗ್ರೆಸ್ ವಲಯದಲ್ಲಿ ದಲಿತ ಸಿಎಂ ಚರ್ಚೆ ಶುರುವಾಗಿದೆ. ನಿನ್ನೆ ಸಿಎಂ ಸಿದ್ದರಾಮಯ್ಯ ದಲಿತ ಸಿಎಂ ವಿಚಾರವಾಗಿ ಕೊಟ್ಟಿರುವ ಹೇಳಿಕೆ ಕೈ ಪಾಳಯದಲ್ಲಿ ಸಂಚಲನ ಮೂಡಿಸಿದ್ದು ನಿನ್ನೆಯಿಂದಲೇ ಭಾರೀ ಚರ್ಚೆ ನಡೆಯುತ್ತದೆ.
ಬೆಂಗಳೂರು (ಮೇ.14): ಚುನಾವಣಾ ಫಲಿತಾಂಶ ಹೊರ ಬೀಳುವ ಮುನ್ನವೇ ಕಾಂಗ್ರೆಸ್ ವಲಯದಲ್ಲಿ ದಲಿತ ಸಿಎಂ ಚರ್ಚೆ ಶುರುವಾಗಿದೆ. ನಿನ್ನೆ ಸಿಎಂ ಸಿದ್ದರಾಮಯ್ಯ ದಲಿತ ಸಿಎಂ ವಿಚಾರವಾಗಿ ಕೊಟ್ಟಿರುವ ಹೇಳಿಕೆ ಕೈ ಪಾಳಯದಲ್ಲಿ ಸಂಚಲನ ಮೂಡಿಸಿದ್ದು ನಿನ್ನೆಯಿಂದಲೇ ಭಾರೀ ಚರ್ಚೆ ನಡೆಯುತ್ತದೆ.
ಸಿಎಂ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ದಲಿತ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಪ್ರತಿಕ್ರಿಯಿಸಿರುವುದು ಚರ್ಚೆಗೆ ಇನ್ನಷ್ಟು ಇಂಬು ಕೊಟ್ಟಿದೆ. ಈ ವಿಚಾರವಾಗಿ ನಮ್ಮ ದೆಹಲಿ ಪ್ರತಿನಿಧಿ ಪ್ರಶಾಂತ್ ನಾತು, ಹಾಗೂ ಜಯ ಪ್ರಕಾಶ್ ಶೆಟ್ಟಿ ವಿಶ್ಲೇಷಿಸಿದ್ದು ಹೀಗೆ.