ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುರುಡು ಕಾಂಚಾಣ ಮತ್ತೊಮ್ಮೆ ಸದ್ದಾಗಿದೆ. ಸಿಎಂ ಆಪ್ತ ಮರಿಗೌಡ ಮತದಾರರಿಗೆ ಆಮೀಷ ಒಡ್ಡಿದ್ದಾರೆ.  ಪ್ರತಿ ಬೂತ್ ಒಂದಕ್ಕೆ 50 ಸಾವಿರ ರೂ. ಹಣ ಹಂಚಿಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. 

ಮೈಸೂರು (ಮೇ. 07): ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುರುಡು ಕಾಂಚಾಣ ಮತ್ತೊಮ್ಮೆ ಸದ್ದಾಗಿದೆ. ಸಿಎಂ ಆಪ್ತ ಮರಿಗೌಡ ಮತದಾರರಿಗೆ ಆಮೀಷ ಒಡ್ಡಿದ್ದಾರೆ. ಪ್ರತಿ ಬೂತ್ ಒಂದಕ್ಕೆ 50 ಸಾವಿರ ರೂ. ಹಣ ಹಂಚಿಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. 

Add Asianetnews Kannada as a Preferred SourcegooglePreferred

ಹಣ ಹಂಚಿಕೆಗೆ ಸಂಬಂಧಿಸಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚುನಾವಣಾ ಓಡಾಟಕ್ಕೆ ಕಾರ್ಯಕರ್ತರ ನಡುವೆ ಕುಳಿತು ಪ್ರತಿ ಬೂತ್‌ಗೆ 50 ಸಾವಿರ ರೂ. ಹಣ ಹಂಚಿಕೆ ಮಾಡಿದ್ದಾರೆ. ಒಟ್ಟು ಚಾಮುಂಡೇಶ್ವರಿ 310 ಬೂತ್‌ಗಳಿವೆ.ಕಾಂಗ್ರೆಸ್ ಮುಖಂಡ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ವೈರಲ್ ಆಡಿಯೋ ಮೇರೆಗೆ ದೂರು ದಾಖಲಿಸುವಂತೆ ಜೆಡಿಎಸ್ ಮುಖಂಡ ಒತ್ತಾಯಿಸಿದ್ದಾರೆ.