ಮುಳುಬಾಗಿಲಿನಿಂದ ನಾಮಪತ್ರ ತಿರಸ್ಕೃತ; ಕೋಲಾರದಿಂದ ಸ್ಪರ್ಧಿಸಲು ಮಂಜು ನಿರ್ಧಾರ
ಕಾಂಗ್ರೆಸ್ ಶಾಸಕ ಮಂಜುನಾಥ್ ಜಾತಿ ಪ್ರಮಾಣ ಪತ್ರ ತಿರಸ್ಕೃತವಾದ ಹಿನ್ನೆಲೆಯಲ್ಲಿ ಕೋಲಾರದಿಂದ ಅಖಾಡಕ್ಕೆ ಧುಮುಕಲು ಮಂಜು ಮುಂದಾಗಿದ್ದಾರೆ.
ಕೋಲಾರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದಾರೆ.
ಮಂಜು ಪ್ರಮಾಣ ಪತ್ರ ತಿರಸ್ಕೃತವಾಗುವ ಬಗ್ಗೆ ಮೊದಲೇ ಮಾಹಿತಿ ತಿಳಿದಿದ್ದ ಮುನಿಯಪ್ಪ ತಮ್ಮ ಎರಡನೇ ಮಗಳು ನಂದಿನಿಯನ್ನು ಮುಳುಬಾಗಿಲಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ
ನಾಳೆ ಅಧಿಕೃತ ಘೋಷಣೆ ಮಾಡಲಿದ್ದಾರೆ. ಈಗಾಗಲೇ ಕೋಲಾರದಿಂದ ನಾಮಪತ್ರ ಸಲ್ಲಿಸಿರುವ ಸೈಯದ್ ಜಮೀರ್ ಪಾಷ ನಾಮಪತ್ರ ವಾಪಸ್ ತೆಗೆಸುವುದಕ್ಕೆ ಕಾಂಗ್ರೆಸ್ ಪ್ಲಾನ್ ನಡೆಸುತ್ತಿದೆ.
ಕೋಲಾರ (ಏ. 25): ಕಾಂಗ್ರೆಸ್ ಶಾಸಕ ಮಂಜುನಾಥ್ ಜಾತಿ ಪ್ರಮಾಣ ಪತ್ರ ತಿರಸ್ಕೃತವಾದ ಹಿನ್ನೆಲೆಯಲ್ಲಿ ಕೋಲಾರದಿಂದ ಅಖಾಡಕ್ಕೆ ಧುಮುಕಲು ಮಂಜು ಮುಂದಾಗಿದ್ದಾರೆ. ಕೋಲಾರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದಾರೆ.
ಮಂಜು ಪ್ರಮಾಣ ಪತ್ರ ತಿರಸ್ಕೃತವಾಗುವ ಬಗ್ಗೆ ಮೊದಲೇ ಮಾಹಿತಿ ತಿಳಿದಿದ್ದ ಮುನಿಯಪ್ಪ ತಮ್ಮ ಎರಡನೇ ಮಗಳು ನಂದಿನಿಯನ್ನು ಮುಳುಬಾಗಿಲಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಳೆ ಅಧಿಕೃತ ಘೋಷಣೆ ಮಾಡಲಿದ್ದಾರೆ. ಈಗಾಗಲೇ ಕೋಲಾರದಿಂದ ನಾಮಪತ್ರ ಸಲ್ಲಿಸಿರುವ ಸೈಯದ್ ಜಮೀರ್ ಪಾಷ ನಾಮಪತ್ರ ವಾಪಸ್ ತೆಗೆಸುವುದಕ್ಕೆ ಕಾಂಗ್ರೆಸ್ ಪ್ಲಾನ್ ನಡೆಸುತ್ತಿದೆ.
ರಾತ್ರಿಯಿಂದಲೇ ಕ್ಷೇತ್ರದಲ್ಲಿ ಮಾತುಕತೆ ನಡೆಯುತ್ತಿದೆ. 10 ಕೋಟಿ ಕೊಡ್ತೀನಿ ಚುನಾವಣೆಯಿಂದ ಹಿಂದೆ ಸರಿ ಅಂತ ಮಂಜು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.