Asianet Suvarna News Asianet Suvarna News

ಕಾಂಗ್ರೆಸ್-ಬಿಜೆಪಿ ಗಲಾಟೆಯಲ್ಲಿ ಈ ಊರಿಗೆ ನೀರೇ ಇಲ್ಲ!

ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನಡುವಿನ ಜಗಳದಿಂದಾಗಿ 2 ದಿನಗಳಿಂದ ಕುಷ್ಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ನೀರೇ ಇಲ್ಲ! ಶಾಸಕ ದೊಡ್ಡನಗೌಡ ಪಾಟೀಲ್ ಪ್ರಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿ ಪಡಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. 

Congress-BJP Fight in Koppala

ಕೊಪ್ಪಳ (ಏ. 29): ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನಡುವಿನ ಜಗಳದಿಂದಾಗಿ 2 ದಿನಗಳಿಂದ ಕುಷ್ಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ನೀರೇ ಇಲ್ಲ! ಶಾಸಕ ದೊಡ್ಡನಗೌಡ ಪಾಟೀಲ್ ಪ್ರಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿ ಪಡಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. 

ರೊಚ್ಚಿಗೆದ್ದ ಗ್ರಾಮ ಪಂಚಾಯತ್ ಕಾಂಗ್ರೆಸ್ ಸದಸ್ಯರು ಗ್ರಾಮಕ್ಕೆ ನೀರು ಕಟ್ ಮಾಡಿದ್ದಾರೆ.  ಕಾಂಗ್ರೆಸ್- ಬಿಜೆಪಿ ಇಬ್ಬರ ನಡುವಿನ ಗಲಾಟೆಯಿಂದ ಗ್ರಾಮಕ್ಕೆ ನೀರನ್ನು ಕಡಿತಗೊಳಿಸಲಾಗಿದ್ದು  ನೀರಿಗಾಗಿ 2 ದಿನಗಳಿಂದ ತುಮರಿಕೊಪ್ಪ ಗ್ರಾಮಸ್ಥರು  ಪರದಾಡುತ್ತಿದ್ದಾರೆ.  ಎರಡು ಪಕ್ಷಗಳ‌ ವಿರುದ್ಧ ಗ್ರಾಮಸ್ಥರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಗ್ರಾಮಕ್ಕೆ‌ ಹನುಮಸಾಗರ ಪೊಲೀಸರು ಭೇಟಿ ನೀಡಿದ್ದಾರೆ. 
 

Follow Us:
Download App:
  • android
  • ios