ವಿಶ್ವಾಸ ಮತ ಯಾಚನೆಗೆ ಕ್ಷಣಗಣನೆ; ಕೇಸರಿ ಪಾಳಯದಲ್ಲಿ ಶುರುವಾಗಿದೆ ಢವಢವ
ವಿಶ್ವಾಸ ಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿದೆ. ಯಡಿಯೂರಪ್ಪನವರಿಗೆ ಅಗ್ನಿಪರೀಕ್ಷೆ ಶುರುವಾಗಿದೆ. ಹೈವೋಲ್ಟೇಜ್ ಟೆನ್ಷನ್’ಗೆ ಸಾಕ್ಷಿಯಾಗಲಿದೆ ರಾಜ್ಯ ವಿಧಾನ ಸಭೆ. ಸರ್ಕಾರ ಉರುಳುತ್ತಾ, ಉಳಿಯುತ್ತಾ ಎಂಬುದು ಚಿದಂಬರ ರಹಸ್ಯವಾಗಿದೆ.
ಬೆಂಗಳೂರು (ಮೇ. 19): ವಿಶ್ವಾಸ ಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿದೆ. ಯಡಿಯೂರಪ್ಪನವರಿಗೆ ಅಗ್ನಿಪರೀಕ್ಷೆ ಶುರುವಾಗಿದೆ. ಹೈವೋಲ್ಟೇಜ್ ಟೆನ್ಷನ್’ಗೆ ಸಾಕ್ಷಿಯಾಗಲಿದೆ ರಾಜ್ಯ ವಿಧಾನ ಸಭೆ. ಸರ್ಕಾರ ಉರುಳುತ್ತಾ, ಉಳಿಯುತ್ತಾ ಎಂಬುದು ಚಿದಂಬರ ರಹಸ್ಯವಾಗಿದೆ.
ಬೆಳಿಗ್ಗೆ ನಡೆದ ವಿಧಾನ ಸಭಾ ಅಧಿವೇಶನದಲ್ಲಿ ಜೆಡಿಎಸ್ ನ 37, ಕಾಂಗ್ರೆಸ್ ನ 76 ಶಾಸಕರು ಹಾಜರಾಗಿದ್ದಾರೆ. ಎರಡೂ ಪಕ್ಷಗಳ ಸಂಖ್ಯಾಬಲ 122 ಆಗಿದೆ. ಆದರೆ ಬಿಜೆಪಿ ಸಂಖ್ಯಾ ಬಲ 104 ಇದ್ದು ಬಹುಮತಕ್ಕೆ 8 ಅಭ್ಯರ್ಥಿಗಳು ಬೇಕಾಗಿದ್ದಾರೆ. ವಿಶ್ವಾಸ ಮತಯಾಚನೆಗೆ ಕ್ಷಣಗಣನೆ ಆರಂಭವಾಗಿದ್ದು ಬಿಎಸ್ ವೈ ಆತಂಕ ಹೆಚ್ಚಾಗಿದೆ. ಏತನ್ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರೆ ಮಾಡಿ ಡೋಂಟ್ ವರಿ ಎಂದು ವಿಶ್ವಾಸ ತುಂಬಿದ್ದಾರೆ. 3 ಗಂಟೆವರೆಗೆ ಕಾದು ನೋಡುವ ತಂತ್ರ ಮಾಡಿದ್ದಾರೆ.
104 ಶಾಸಕರನ್ನು ಹೊಂದಿರುವ ಬಿಜೆಪಿ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗುತ್ತಾ? ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರೇ ಮುಂದುವರೆಯುತ್ತಾರಾ? ಎಂಬುದು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ.