Asianet Suvarna News Asianet Suvarna News

ಜೆಡಿಎಸ್ ಶಾಸಕರಿಗೆ ಬಿಜೆಪಿ ಗಾಳ?

ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದೇ ಸರ್ಕಾರ ರಚಿಸುವ ಬಗ್ಗೆ  ಕಾಂಗ್ರೆಸ್-ಜೆಡಿಎಸ್- ಬಿಜೆಪಿ ಸರ್ಕಸ್ ನಡೆಯುತ್ತಿದೆ. ಶತಾಯ ಗತಾಯ ಸರ್ಕಾರ ಮಾಡಿಯೇ ಸಿದ್ದ ಎಂದು ಹೊರಟಿರುವ ಬಿಜೆಪಿ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.  ಆಪರೇಶನ್ ಕಮಲ ಶುರು ಮಾಡಿದೆ. 

BJP Trying to Convince JDS MLAs

ಬೆಂಗಳೂರು (ಮೇ. 16): ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದೇ ಸರ್ಕಾರ ರಚಿಸುವ ಬಗ್ಗೆ  ಕಾಂಗ್ರೆಸ್-ಜೆಡಿಎಸ್- ಬಿಜೆಪಿ ಸರ್ಕಸ್ ನಡೆಯುತ್ತಿದೆ. ಶತಾಯ ಗತಾಯ ಸರ್ಕಾರ ಮಾಡಿಯೇ ಸಿದ್ದ ಎಂದು ಹೊರಟಿರುವ ಬಿಜೆಪಿ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.  ಆಪರೇಶನ್ ಕಮಲ ಶುರು ಮಾಡಿದೆ. 

ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ಮೂಲಕ ಜೆಡಿಎಸ್‌ಗೆ ಗಾಳ ಹಾಕಲು ಹೊರಟಿದೆ.  3 ಜೆಡಿಎಸ್ ಶಾಸಕರ ಆಪರೇಷನ್‌ಗೆ  ಬಸವರಾಜು ಹೊಣೆ ಹೊತ್ತಿದ್ದಾರೆ. ತಮ್ಮ ಭಾಗದ 3 ಜೆಡಿಎಸ್  ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ಜೆಡಿಎಸ್ ಶಾಸಕರು ನಿರಂತರವಾಗಿ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಅವರನ್ನು ನಾನು ಪಕ್ಷಕ್ಕೆ ಕರೆ ತರುತ್ತೇನೆ ಎಂದು ಬಿಎಸ್ ವೈಗೆ ಭರವಸೆ ನೀಡಿದ್ದಾರೆ. . ಒಂದು ಸುತ್ತಿನ ಮಾತುಕತೆ ಕೂಡ ಮುಗಿದಿದೆ ಎಂದು ಸುವರ್ಣನ್ಯೂಸ್‌ಗೆ ಬಿಜೆಪಿ ಉನ್ನತ ಮೂಲಗಳು ಮಾಹಿತಿ ನೀಡಿದೆ.  

Follow Us:
Download App:
  • android
  • ios