ಬಿಜೆಪಿ ಇಂದು ವಿಶ್ವಾಸ ಮತ ಯಾಚಿಸುವ ಅಗ್ನಿ ಪರೀಕ್ಷೆ ಎದುರಿಸಬೇಕಾಗಿದೆ. ಮಂಡ್ಯದಲ್ಲಿ ಯಡಿಯೂರಪ್ಪ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತುವ ಮೂಲಕ ಯಡಿಯೂರಪ್ಪ ಯಶಸ್ಸಿಗೆ ಪ್ರಾರ್ಥನೆ ಮಾಡಿದ್ದಾರೆ. ಮಂಡ್ಯ ನಗರದ ಕಾಳಿಕಾಂಬ ದೇವಾಲಯದದಲ್ಲಿ 112 ನಿಂಬೆ ಹಣ್ಣು ಹಾರ, 112 ತೆಂಗಿನಕಾಯಿ, 112 ಮೆಣಸಿನಕಾಯಿಯಿಂದ ಪೂಜೆ ಸಲ್ಲಿಸಿ ಬಿಎಸ್ ವೈ ಗೆಲುವಿಗೆ ಪ್ರಾರ್ಥಿಸಿದ್ದಾರೆ.
ಮೈಸೂರು (ಮೇ. 19): ಬಿಜೆಪಿ ಇಂದು ವಿಶ್ವಾಸ ಮತ ಯಾಚಿಸುವ ಅಗ್ನಿ ಪರೀಕ್ಷೆ ಎದುರಿಸಬೇಕಾಗಿದೆ. ಮಂಡ್ಯದಲ್ಲಿ ಯಡಿಯೂರಪ್ಪ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತುವ ಮೂಲಕ ಯಡಿಯೂರಪ್ಪ ಯಶಸ್ಸಿಗೆ ಪ್ರಾರ್ಥನೆ ಮಾಡಿದ್ದಾರೆ. ಮಂಡ್ಯ ನಗರದ ಕಾಳಿಕಾಂಬ ದೇವಾಲಯದದಲ್ಲಿ 112 ನಿಂಬೆ ಹಣ್ಣು ಹಾರ, 112 ತೆಂಗಿನಕಾಯಿ, 112 ಮೆಣಸಿನಕಾಯಿಯಿಂದ ಪೂಜೆ ಸಲ್ಲಿಸಿ ಬಿಎಸ್ ವೈ ಗೆಲುವಿಗೆ ಪ್ರಾರ್ಥಿಸಿದ್ದಾರೆ.
ಇತ್ತ ತುಮಕೂರಿನಲ್ಲಿಯೂ ಬಹುಮತ ಸಂಕಷ್ಟ ನಿವಾರಣೆಗೆ ಯಡಿಯೂರಪ್ಪ ಪರ ಸಿದ್ದಲಿಂಗೇಶ್ವರನಿಗೆ ವಿಶೇಷ ಪೂಜೆ, ಅಭಿಷೇಕ ಮಾಡಿದ್ದಾರೆ. ವಿಶೇಷ ಪೂಜೆಯಲ್ಲಿ ಯಡಿಯೂರಪ್ಪ ಪುತ್ರಿ ಉಮಾದೇವಿ ಭಾಗಿಯಾಗಿದ್ದಾರೆ. ಸಂಜೆವರೆಗೆ ಅಭಿಷೇಕ, ರುದ್ರಾಭಿಷೇಕ, ಅರ್ಚನೆ ಸಂಕಲ್ಪ ಸೇರಿ ಹಲವು ಪೂಜೆ ನಡೆಯಲಿದೆ.
