ಬಂಗಾರಪ್ಪ ಪುತ್ರರಿಬ್ಬರ ನಡುವೆ ಸೊರಬದಲ್ಲಿ ಜಟಾಪಟಿ
ಬಂಗಾರಪ್ಪ ಅವರ ಪರಂಪರೆ ಮುಂದುವರಿಸ ಬಯಸುವ ಅವರ ಇಬ್ಬರು ಪುತ್ರರು 4ನೇ ಬಾರಿ ಸೊರಬದಲ್ಲಿ ಖಾಮುಖಿಯಾಗಿದ್ದಾರೆ. ಬಂಗಾರಪ್ಪ ಅವರ ಪರಂಪರೆ ಮುಂದುವರಿಸ ಬಯಸುವ ಅವರ ಇಬ್ಬರು ಪುತ್ರರು 4ನೇ ಬಾರಿ ಸೊರಬದಲ್ಲಿ ಮುಖಾಮುಖಿಯಾಗಿದ್ದಾರೆ.
ಸೊರಬ : ಬಂಗಾರಪ್ಪ ಅವರ ಪರಂಪರೆ ಮುಂದುವರಿಸ ಬಯಸುವ ಅವರ ಇಬ್ಬರು ಪುತ್ರರು 4ನೇ ಬಾರಿ ಸೊರಬದಲ್ಲಿ ಮುಖಾಮುಖಿಯಾಗಿದ್ದಾರೆ. ಇದುವರೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುತ್ತಿದ್ದ ಕುಮಾರ್ ಬಂಗಾರಪ್ಪ ಅವರು ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.
ಮತ್ತೊಬ್ಬ ಪುತ್ರ ಹಾಲಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್ ಅಭ್ಯರ್ಥಿ. ಅಭ್ಯರ್ಥಿ ಕೊರತೆ ಎದುರಿಸುತ್ತಿದ್ದ ಕಾಂಗ್ರೆಸ್ ಪಕ್ಷವು ಡಿಸೆಂಬರ್ನಲ್ಲಿ ಬಿಜೆಪಿ ತೊರೆದು ಪಕ್ಷ ಸೇರಿದ್ದ ರಾಜು ಎಂ.ತಲ್ಲೂರು ಅವರನ್ನು ಕಣಕ್ಕಿಳಿಸಿದೆ. ಈ ಬಾರಿ ಸೊರಬ ಜನತೆ ಅಭಿವೃದ್ಧಿ ವಿಷಯ ಪ್ರಮುಖವಾಗಿಟ್ಟುಕೊಂಡಿದ್ದಾರೆ.
ಎಷ್ಟು ಬಾರಿ ಬಂಗಾರಪ್ಪ ಅವರ ಋಣ ತೀರಿಸಬೇಕು, ನಮಗೆ ಅಭಿವೃದ್ಧಿ ಬೇಕು ಎನ್ನುತ್ತಿದ್ದಾರೆ. ಅದಕ್ಕೆ ಮೂವರು ಅಭ್ಯರ್ಥಿಗಳಲ್ಲೂ ವಿಷಯಗಳಿವೆ. ಇಲ್ಲಿ ಈಡಿಗರೇ ಬಹುಸಂಖ್ಯಾತರು. ಲಿಂಗಾಯತರೂ ನಿರ್ಣಾಯಕರೇ. ಮಡಿವಾಳ, ಗಂಗಾಮತಸ್ಥರ ಸಂಖ್ಯೆಯೂ ಕಡಿಮೆ ಏನಿಲ್ಲ.