ಮಹಿಳಾ ಉದ್ಯಮಿ ಅಂಜನಾ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದ ಮಾಜಿ ಸಚಿವ ಬಾಬುರಾವ ಚಿಂಚನಸೂರ| ಅಂಜನ ಯಾರು ಎನ್ನುವುದೇ ನನಗೆ ಗೊತ್ತಿಲ್ಲ| ಆಕೆಯ ಮುಖ ನಾ ಜೀವನದಲ್ಲಿಯೇ ನೋಡಿಲ್ಲ| ಆ ಮಹಿಳೆಯಿಂದ ನಾ ನಯಾ ಪೈಸೆ ಸಾಲ ಪಡೆದಿಲ್ಲ| ನಾನು ಆಕೆಗೆ ಚೆಕ್ ಕೊಟ್ಟಿದ್ದೆ ಎನ್ನುವುದೇ ಶುದ್ದ ಸುಳ್ಳು|
ಕಲಬುರಗಿ[ನ.7]: ಮಹಿಳಾ ಉದ್ಯಮಿ ಅಂಜನಾ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ. ಅಂಜನ ಯಾರು ಎನ್ನುವುದೇ ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ಅವರು ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕೆಯ ಮುಖ ನಾ ಜೀವನದಲ್ಲಿಯೇ ನೋಡಿಲ್ಲ. ಆ ಮಹಿಳೆಯಿಂದ ನಾ ನಯಾ ಪೈಸೆ ಸಾಲ ಪಡೆದಿಲ್ಲ. ನಾನು ಆಕೆಗೆ ಚೆಕ್ ಕೊಟ್ಟಿದ್ದೆ ಎನ್ನುವುದೇ ಶುದ್ದ ಸುಳ್ಳು. ನನ್ನ ಚೆಕ್ ಕಳ್ಳತನ ಆಗಿತ್ತು. ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೆಲ ಪಟ್ಟಭದ್ರ ಹಿತಾಸಕ್ತಿಗಳು ನನ್ನ ಏಳ್ಗೆ ಸಹಿಸದೆ ಈ ಷಡ್ಯಂತ್ರ ರೂಪಿಸಿವೆ. ನ್ಯಾಯಾಲಯದಲ್ಲಿ ನನಗೆ ಜಯ ಸಿಗುತ್ತದೆ ಎಂಬ ವಿಶ್ವಾಸ ಇದೆ. ನ್ಯಾಯಾಲಯದಲ್ಲಿ ಗೆದ್ದು ಮತ್ತಷ್ಟು ಬಲಿಷ್ಠ ನಾಯಕನಾಗಿ ಹೊರಹೊಮ್ಮುವೆ ಎಂದು ಹೇಳಿದ್ದಾರೆ. ಚಿಂಚನಸೂರ್ಗೆ 11 ಕೋಟಿ ಸಾಲ ಕೊಟ್ಟಿದ್ದ ಮಹಿಳೆ ಆತ್ಮಹತ್ಯೆ
