ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಕನಸು ಸಾಕಾರಕ್ಕೆ ಮಹತ್ವದ ಅವಕಾಶ
ಸಾಧನೆ ಮಾಡುವ ಹಂಬಲ ಇರುವವರಿಗೆ ಮತ್ತೆ ಮತ್ತೆ ಅವಕಾಶಗಳು ತೆರೆದುಕೊಳ್ಳುತ್ತಲೇ ಇರುತ್ತದೆ. ಎಸ್ ಸಿ ಮತ್ತು ಎಸ್ ಟಿ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ಬಂದಿದೆ.
ಬೆಂಗಳೂರು[ಜು. 09] ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಯುಪಿಎಸ್ಸಿ/ಕೆಪಿಎಸ್ ಸಿ/ ಬ್ಯಾಂಕಿಂಗ್/ ಗ್ರೂಪ್-ಎಮತ್ತು ಬಿ/ ಗ್ರೂಪ್ ಸಿ/ ಎಸ್ ಎಸ್ ಎಲ್ ಸಿ ಮತ್ತು ಆರ್ ಆರ್ ಬಿ ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ಆಯ್ಕೆ ಮಾಡಲು ಅರ್ಜಿ ಕರೆದಿದೆ.
ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 22 ಕೊನೆಯ ದಿನವಾಗಿದೆ ಹೆಚ್ಚಿನ ಮಾಹಿತಿಗೆ https://sw.kar.nic.in/ ಸಂಪರ್ಕ ಮಾಡಬಹುದು. [ಸಾಂದರ್ಭಿಕ ಚಿತ್ರ]