ಆಂಧ್ರಪ್ರದೇಶದಲ್ಲಿ ಪಂಚಾಯತ್ ಚುನಾವಣೆ ಘೋಷಣೆ| ಚುನಾವಣೆಯಲ್ಲಿ ಗೆಲ್ಲಲು ತಿರುಪತಿ ಲಡ್ಡು ವಿತರಣೆ!
ಚಿತ್ತೂರು(ಫೆ.22): ಆಂಧ್ರಪ್ರದೇಶದಲ್ಲಿ ಪಂಚಾಯತ್ ಚುನಾವಣೆ ಘೋಷಣೆ ಆಗಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸರ್ಕಾರ ಜನಕ್ಕೆ ತಿರುಪತಿಯ ಪ್ರಸಾದದ ಲಡ್ಡುಗಳನ್ನು ಆಮಿಷದ ರೂಪದಲ್ಲಿ ವಿತರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಗೆಲುವಿಗಾಗಿ ಜಗನ್ ಸರ್ಕಾರವು ಇಡೀ ಆಡಳಿತ ಯಂತ್ರವನ್ನೇ ದುರುಪಯೋಗಪಡಿಸಿಕೊಳ್ಳುತ್ತಿದೆ. ಮತದಾರರಿಗೆ ಬೇಕಾಬಿಟ್ಟಿಯಾಗಿ ತಿರುಪತಿ ಲಡ್ಡು ಹಂಚುತ್ತಿದೆ ಎಂದು ವಿಪಕ್ಷ ತೆಲುಗುದೇಶಂ ದೂರಿದೆ.
ಪಡಿತರ ಪೂರೈಸುವ ವಾಹನಗಳಲ್ಲೇ ಲಡ್ಡುಗಳನ್ನು ವಿತರಿಸಲಾಗುತ್ತಿದ್ದು, ವೈಎಸ್ಆರ್ಪಿ ಪಕ್ಷಕ್ಕೆ ಮತ ಹಾಕುವಂತೆ ಸೂಚಿಸಲಾಗುತ್ತಿದೆ ಎಂದು ಟಿಡಿಪಿ ದೂರಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 22, 2021, 3:06 PM IST