‘ಸ್ವದೇಶಿ ಲಸಿಕೆ ಬಗ್ಗೆ ಆತಂಕ ಬೇಡ; ನಾನೇ ಮೊದಲು ಹಾಕಿಸಿಕೊಳ್ಳುವೆ’| ಜನ ಸಂವಾದ ಕಾರ‍್ಯಕ್ರಮದಲ್ಲಿ ಸಚಿವ ಡಾ.ಹರ್ಷವರ್ಧನ್‌| 2021ರ ಮೊದಲ ತ್ರೈಮಾಸಿಕದ ವೇಳೆಗೆ ದೇಶೀ ಲಸಿಕೆ ಬಳಕೆಗೆ

ನವದೆಹಲಿ(ಸೆ.14): ದೇಶದಲ್ಲಿ ದಿನಕ್ಕೆ ಸರಾಸರಿ 90 ಸಾವಿರಕ್ಕಿಂತ ಹೆಚ್ಚು ಕೊರೋನಾ ಪ್ರಕರಣ ಸಂಖ್ಯೆ ದಾಖಲಾಗುತ್ತಿರುವ ಬೆನ್ನಲ್ಲೇ, ಈ ವ್ಯಾಧಿಯ ನಿಗ್ರಹಕ್ಕೆ 2021ರ ಮೊದಲ ತ್ರೈಮಾಸಿಕ ಅವಧಿಯ ಒಳಗಾಗಿ ದೇಶೀ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ಭರವಸೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೆ, ಹೊಸ ಆವಿಷ್ಕಾರದ ಲಸಿಕೆಯ ಸುರಕ್ಷತೆ ಬಗ್ಗೆ ಜನರಲ್ಲಿನ ಭೀತಿ ನಿವಾರಣೆಗಾಗಿ ಆ ಲಸಿಕೆಯನ್ನು ಮೊದಲೇ ತಾವೇ ಸ್ವೀಕರಿಸುವುದು ಹರ್ಷದಾಯಕ ಸಂಗತಿಯಾಗಿದೆ ಎಂದಿದ್ದಾರೆ. ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಭಾನುವಾರ ನಡೆದ ‘ಜನ ಸಂವಾದ’ ಕಾರ್ಯಕ್ರಮದಲ್ಲಿ ಕೊರೋನಾ ಹಾಗೂ ಲಸಿಕೆಗೆ ಸಂಬಂಧಿಸಿದಂತೆ ಜನರು ಕೇಳಿದ ಹಲವು ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.

ಈ ವೇಳೆ ಭಾರತ ಸಿದ್ಧಪಡಿಸಿ ಪ್ರಯೋಗದ ಹಂತದಲ್ಲಿರುವ ಔಷಧಿಯ ಬಿಡುಗಡೆಗೆ ನಿರ್ದಿಷ್ಟದಿನಾಂಕ ಗುರಿಪಡಿಸಲಾಗಿಲ್ಲ. ಆದರೆ, 2021ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಈ ಕೊರೋನಾ ಲಸಿಕೆಯು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ. ಜೊತೆಗೆ, ಮೊದಲ ಹಂತದಲ್ಲಿ ಕೊರೋನಾದಿಂದ ಬಡವರು ಮತ್ತು ಶ್ರೀಮಂತರು ಎಂಬ ಯಾವುದೇ ಬೇಧವಿಲ್ಲದೆ ತೀವ್ರವಾಗಿ ಜರ್ಜರಿತರಾದವರಿಗೆ ಈ ಲಸಿಕೆ ಬಳಕೆಯಾಗುವಂತೆ ನೋಡಿಕೊಳ್ಳಲಾಗುತ್ತದೆ. ಈ ಪ್ರಕಾರ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.