ಅಕ್ರ​ಮ​ವಾಗಿ ನಿರ್ಮಿತ ದರ್ಗಾ ತೆರವಿಗೆ ಅಧಿ​ಕಾ​ರಿ​ಗ​ಳು ಯತ್ನಿಸಿದ ವೇಳೆ ಕಲ್ಲುತೂರಾಟ ನಡೆದಿದೆ. ಈ ಹಿಂಸಾಚಾರದಲ್ಲಿ ಒಬ್ಬ ವ್ಯಕ್ತಿ ಸಾವ​ನ್ನ​ಪ್ಪಿ​, ಉಪ ಪೊಲೀಸ್‌ ವರಿ​ಷ್ಠರು ಸೇರಿ 4 ಮಂದಿ ಗಾಯ​ಗೊಂಡಿದ್ದಾರೆ.

ಜುನಾ​ಗಢ (ಗು​ಜ​ರಾ​ತ್‌): ಅಕ್ರ​ಮ​ವಾಗಿ ನಿರ್ಮಿತ ದರ್ಗಾ ತೆರವಿಗೆ ಅಧಿ​ಕಾ​ರಿ​ಗ​ಳು ಯತ್ನಿಸಿದ ವೇಳೆ ನಡೆದ ಹಿಂಸಾಚಾರದಲ್ಲಿ ಒಬ್ಬ ವ್ಯಕ್ತಿ ಸಾವ​ನ್ನ​ಪ್ಪಿ​, ಉಪ ಪೊಲೀಸ್‌ ವರಿ​ಷ್ಠರು ಸೇರಿ 4 ಮಂದಿ ಗಾಯ​ಗೊಂಡ ಘಟನೆ ಇಲ್ಲಿ ನಡೆದಿದೆ. ಘಟನೆ ಸಂಬಂಧ 174 ಜನ​ರನ್ನು ವಶಕ್ಕೆ ತೆಗೆ​ದು​ಕೊ​ಳ್ಳ​ಲಾ​ಗಿ​ದೆ. ನಗ​ರದ ಮಜೇ​ವಾಡಿ ಗೇಟ್‌ ಬಳಿ ದರ್ಗಾ​ವೊಂದು ಅಕ್ರ​ಮ​ವಾಗಿ ನಿರ್ಮಾ​ಣ​ವಾ​ಗಿ​ದೆ. ಅದನ್ನು ತೆರವು ಮಾಡ​ಬೇಕು. ಅದು ಸಕ್ರ​ಮವೇ ಆಗಿ​ದ್ದರೆ ಸೂಕ್ತ ದಾಖ​ಲೆ​ಗ​ಳನ್ನು 5 ದಿನ​ದಲ್ಲಿ ನೀಡ​ಬೇ​ಕು ಎಂದು ನೋಟಿಸ್‌ ಅಂಟಿ​ಸಲು ಜುನಾ​ಗಢ ಪಾಲಿಕೆ ಅಧಿ​ಕಾ​ರಿ​ಗಳು ತೆರ​ಳಿ​ದ್ದರು. 

ಆಗ ರಾತ್ರಿ 9 ಗಂಟೆ ಸುಮಾ​ರಿಗೆ ಭಾರಿ ಪ್ರಮಾ​ಣದಲ್ಲಿ ದರ್ಗಾ ಬಳಿ ನೆರೆದ ಉದ್ರಿ​ಕ್ತರು ಅಧಿ​ಕಾ​ರಿ​ಗಳ ಮೇಲೆ ಕಲ್ಲು ಎಸೆ​ದಿ​ದ್ದಾರೆ. ಅಲ್ಲದೆ, ಪಹರೆ ಕಾಯಲು ಬಂದ ಪೊಲೀ​ಸರ ಮೇಲೆ ಸುಮಾರು 500-600 ಮಂದಿ ಕಲ್ಲು ತೂರಿ​ದ್ದಾ​ರೆ. ಆಗ ಒಬ್ಬ ನಾಗ​ರಿಕ ಕಲ್ಲೇ​ಟಿ​ನಿಂದ ಸಾವ​ನ್ನ​ಪ್ಪಿ​ದ್ದಾ​ನೆ. ಇದೇ ವೇಳೆ ಸಮೀ​ಪ​ದ​ಲ್ಲಿದ್ದ ಸರ್ಕಾರಿ ಬಸ್ಸು ಹಾಗೂ ಇತರ ವಾಹ​ನ​ಗ​ಳಿ​ಗೆ ಕಲ್ಲು ಎಸೆ​ಯ​ಲಾ​ಗಿದೆ. ರಸ್ತೆ ಪಕ್ಕ ನಿಲ್ಲಿ​ಸಿದ್ದ ಬೈಕ್‌​ಗ​ಳನ್ನು ಸೋಡಾ ಬಾಟಲಿ ಬಳಸಿ ಬೆಂಕಿ ಹಚ್ಚ​ಲಾ​ಗಿ​ದೆ. ಆಗ ಹೆಚ್ಚಿನ ಸಂಖ್ಯೆಯ ಪೊಲೀ​ಸರು ನೆರೆದು ಲಾಠಿ ಪ್ರಹಾರ ಮಾಡಿ ಹಾಗೂ ಅಶ್ರು​ವಾಯು ಸಿಡಿಸಿ ಉದ್ರಿ​ಕ್ತ​ರನ್ನು ಚದು​ರಿ​ಸಿ​ದ್ದಾರೆ.

ದೂಸ್ರಾ ಮಾತಾಡಿದ್ರೆ ಕೈ ಕಟ್‌, ಇಲ್ದಿದ್ರೆ ಕೊಲೆ; ಸಾಮಾಜಿಕ ಸಂಘಟನೆ ಹೆಸರಿನ ಪಿಎಫ್‌ಐನ ಅಸಲಿ ಮುಖ!