Asianet Suvarna News Asianet Suvarna News

ಸತ್ಯಮಂಗಲ ಕಾಡಲ್ಲಿ ವೀರಪ್ಪನ್‌ ಭಾರೀ ನಿಧಿ: ಪುತ್ರಿ ಮಾಹಿತಿ!

ಸತ್ಯಮಂಗಲ ಕಾಡಲ್ಲಿ ವೀರಪ್ಪನ್‌ ಭಾರೀ ನಿಧಿ: ಪುತ್ರಿ ಮಾಹಿತಿ!| ಕಾಡುಗಳ್ಳ ವೀರಪ್ಪನ್‌ ಪುತ್ರಿ ವಿಜಯಲಕ್ಷ್ಮಿ ಹೇಳಿಕೆ

Veerappan Daughter Claim Her Father Kept Huge Treasure In Sathyamangalam Forest pod
Author
Bangalore, First Published Apr 13, 2021, 8:01 AM IST

 

ಚೆನ್ನೈ: ತಮಿಳುನಾಡಿನ ಹುಲಿ ಸಂರಕ್ಷಿತಾರಣ್ಯ ಪ್ರದೇಶವಾದ ಸತ್ಯಮಂಗಲಂ ಅರಣ್ಯದಲ್ಲಿ ತಮ್ಮಪ್ಪ ಭಾರೀ ಪ್ರಮಾಣದ ನಿಧಿ ಅಡಗಿಸಿಟ್ಟಿದ್ದಾನೆ ಎಂದು ಕಾಡುಗಳ್ಳ ವೀರಪ್ಪನ್‌ ಪುತ್ರಿ ವಿಜಯಲಕ್ಷ್ಮೇ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ತಾವು ಅಭಿನಯಿಸಿದ ರನ್‌ ಪಿಳ್ಳೈ ಸಿನಿಮಾ ಬಗ್ಗೆ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯಲಕ್ಷ್ಮೇ ಅವರು, ನಮ್ಮ ತಂದೆ ವಾಸಿಸುತ್ತಿದ್ದ ಸತ್ಯಮಂಗಲಂ ಕಾಡಿನಲ್ಲಿ ಬೃಹತ್‌ ಫಂಡ್‌ ಡಂಪ್‌ ಇದೆ. ಇದನ್ನು ಪತ್ತೆ ಹಚ್ಚುವ ಅಗತ್ಯವಿದೆ. ಆದರೆ ಈ ಬಗ್ಗೆ ಮಾಹಿತಿ ಇರುವ ಅವರ ಯಾರೊಬ್ಬ ಅನುಯಾಯಿಗಳು ಬದುಕುಳಿದಿಲ್ಲ. ಹೀಗಾಗಿ ಈ ನಿಧಿ ಎಲ್ಲಿದೆ ಎಂದು ಯಾರಿಗೂ ಗೊತ್ತಿಲ್ಲ ಎಂದಿದ್ದಾರೆ.

ದಂತಚೋರ ವೀರಪ್ಪನ್‌ ಮತ್ತು ಅವರ ಪತ್ನಿ ಲಕ್ಷ್ಮೇ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಈ ಪೈಕಿ ಬಿಜೆಪಿ ಸೇರ್ಪಡೆಯಾಗಿರುವ ವಿದ್ಯಾರಾಣಿ ಅವರು ಪಕ್ಷದ ಯುವ ಘಟಕದ ನಾಯಕಿಯಾಗಿದ್ದಾರೆ. ಮತ್ತೋರ್ವ ಪುತ್ರಿಯಾದ ವಿಜಯಲಕ್ಷ್ಮೇ ಅವರು ಸಿನಿಮಾ ಜಗತ್ತಿನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಸತ್ಯಮಂಗಲಂ ಅರಣ್ಯವನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡಿದ್ದ ದಂತಚೋರ ವೀರಪ್ಪನ್‌ ಶ್ರೀಗಂಧದ ಮರಗಳು, ಆನೆ ದಂತಗಳು ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ. ಅಲ್ಲದೆ ಕನ್ನಡದ ವರನಟ ಡಾ. ರಾಜ್‌ಕುಮಾರ್‌ ಅವರನ್ನು ಅಪಹರಿಸಿದ್ದ ವೀರಪ್ಪನ್‌ ದೇಶಾದ್ಯಂತ ಸುದ್ದಿಯಾಗಿದ್ದ

Follow Us:
Download App:
  • android
  • ios