Asianet Suvarna News Asianet Suvarna News

ಪ್ರಮಾಣ ವಚನ ಸ್ವೀಕರಿಸುವ ಮೊದಲೇ ವಿವಾದಕ್ಕೀಡಾದ ಸಿಎಂ ಪುಷ್ಕರ್ ಸಿಂಗ್!

* ಉತ್ತರಾಖಂಡ್‌ನ ನೂತನ ಸಿಎಂ ಪುಷ್ಕರ್ ಸಿಂಗ್ ಧಾಮಿ

* ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮೊದಲೇ ವಿವಾದಕ್ಕೀಡಾದ ಪುಷ್ಕರ್ ಸಿಂಗ್

* 2015ರಲ್ಲಿ ಅಖಂಡ ಭಾರತದ ನಕ್ಷೆ ಶೇರ್ ಮಾಡಿದ್ದ ಪುಷ್ಕರ್ ಸಿಂಗ್

Uttarakhand New Chief Minister In Map Controversy As He Takes Over pod
Author
Bangalore, First Published Jul 4, 2021, 3:28 PM IST

ಡೆಹ್ರಾಡೂನ್(ಜು.04): ಉತ್ತರಾಖಂಡ್‌ನ ನೂತನ ಸಿಎಂ ಪುಷ್ಕರ್ ಸಿಂಗ್ ಧಾಮಿ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮೊದಲೇ ವಿವಾದಕ್ಕೀಡಾಗಿದ್ದಾರೆ. ಈ ವಿವಾದ ಆರು ವರ್ಷ ಹಳೆಯ ಟ್ವೀಟ್‌ನಿಂದಾಗಿ ಉಟ್ಟಿಕೊಂಡಿದೆ. ಧಾಮಿಯವರು 2015ರಲ್ಲಿ ಟ್ವೀಟ್‌ ಒಂದನ್ನು ಶೇರ್ ಮಾಡಿ ಅಖಂಡ ಭಾರತದ ನಕ್ಷೆ ಶೇರ್ ಮಾಡಿದ್ದರು. ಆದರೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಆರಂಭವಾಗಿದೆ. ಅಖಂಡ ಭಾರತ ಎಂದು ತೋರಿಸಲಾದ ಈ ನಕ್ಷೆಯಲ್ಲಿ ಲಡಾಖ್‌ನ ಕೆಲ ಭಾಗ ಹಾಗೂ ಪಾಕಿಸ್ತಾನ ಹಿಡಿತದಲ್ಲಿರುವ ಕೆಲ ಭಾಗಗಳು ಉಳಿದುಕೊಂಡಿವೆ. 

9lk6as8k

ಧಾಮಿಯವರ ಪ್ರಮಾಣವಚನ ಸ್ವೀಕಾರ ವಿಧಿಗೂ ಮುನ್ನ ಟ್ವಿಟರ್‌ ಬಳಕೆದಾರರು 2025ರಲ್ಲಿ ಟ್ವೀಟ್ ಮಾಡಲಾದ ಈ ಮ್ಯಾಪನ್ನು ಹುಡುಕಿ ತೆಗೆದು ಪುಷ್ಕರ್‌ರಿಗೆ ಸವಾಲುಗಳನ್ನೆಸೆದಿದ್ದಾರೆ.

ಧಾಮಿಯವರು ಇಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಾಜಿ ಸಿಎಂ ತೀರಥ್ ಸಿಂಗ್ ರಾವತ್‌ ರಾಜೀನಾಮೆ ನೀಡಿದ ಬೆನ್ನಲ್ಲೇ ಇವರನ್ನು ಸಿಎಂ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಧಾಮಿಯವರು ಜಕೇಂದ್ರ ಸಚಿವ ರಾಜನಾಥ್ ಸಿಂಗ್ ಆಪ್ತ ಹಾಗೂ ಆರ್‌ಎಸ್‌ಜೊತೆಯೂ ನಿಕಟ ಸಂಪರ್ಕ ಹೊಂದಿದ್ದಾರೆನ್ನಲಾಗಿದೆ. 

Follow Us:
Download App:
  • android
  • ios