CAA ದೇಶದಲ್ಲೇ ಮೊದಲು ಉ.ಪ್ರ. ಜಾರಿ| 40000 ಹಿಂದೂ ನಿರಾಶ್ರಿತರು ಪತ್ತೆ!

ಲಖನೌ[ಜ.14]: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸುತ್ತಿದ್ದಂತೆಯೇ ಈ ಕಾಯ್ದೆಯನ್ನು ದೇಶದಲ್ಲೇ ಮೊದಲ ಬಾರಿ ಬಿಜೆಪಿ ಆಳ್ವಿಕೆಯ ಉತ್ತರ ಪ್ರದೇಶ ಸರ್ಕಾರ ಜಾರಿಗೊಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಷ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ನಿರಾಶ್ರಿತರಾಗಿ ಬಂದು ರಾಜ್ಯದಲ್ಲಿ ನೆಲೆಸಿರುವ ಮುಸ್ಲಿಮೇತರರು ಎಷ್ಟು ಎಂಬ ಅಂಕಿ-ಅಂಶ ಸಲ್ಲಿಸಲು ಯೋಗಿ ಸರ್ಕಾರವು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಸೋಮವಾರದ ಮಾಹಿತಿ ಪ್ರಕಾರ ವಿವಿಧ ಜಿಲ್ಲೆಗಳಿಂದ ಈವರೆಗೆ 32 ಸಾವಿರ ನಿರಾಶ್ರಿತರು ರಾಜ್ಯದಲ್ಲಿದ್ದಾರೆ ಎಂಬ ಮಾಹಿತಿ ಸರ್ಕಾರಕ್ಕೆ ಬಂದಿದೆ.

CAA ವಿರೋಧಿಸಿ ಸುಪ್ರೀಂ ಕದ ತಟ್ಟಿದ ಕೇರಳ: ಕೇಂದ್ರಕ್ಕೆ ಸೆಡ್ಡು ಹೊಡೆದ ಮೊದಲ ರಾಜ್ಯ!

ಉತ್ತರಪ್ರದೇಶದಲ್ಲಿ ಇಂಥ 40 ಸಾವಿರ ನಿರಾಶ್ರಿತರು ಇದ್ದಾರೆ ಎನ್ನಲಾಗಿದ್ದು, ಇವರಲ್ಲಿ ಪೀಲಿಭೀತ್‌ ಜಿಲ್ಲೆಯೊಂದರಲ್ಲೇ ಸುಮಾರು 30-35 ಸಾವಿರ ಜನರಿದ್ದಾರೆ ಎನ್ನಲಾಗಿದೆ.