Asianet Suvarna News Asianet Suvarna News

ಸಿಎಂ ಯೋಗಿ ಆದಿತ್ಯನಾಥ್‌ಗೆ ಪಿತೃ ವಿಯೋಗ, ತಾಯಿಗೆ ಭಾವುಕ ಪತ್ರ!

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಪಿತೃ ವಿಯೋಗ| ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಯೋಗಿ ಆದಿತ್ಯನಾಥ್ ತಂದೆ| ಲಾಕ್‌ಡೌನ್ ಹಿನ್ನೆಲೆ ಅಂತ್ಯಕ್ರಿಯೆಯಲ್ಲಿ ಸಿಎಂ ಗೈರು

Uttar Pradesh Chief Minister Yogi Adityanath father passes away
Author
Bangalore, First Published Apr 20, 2020, 2:52 PM IST

ಲಕ್ನೋ(ಏ.20: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಂದೆ ಸೋಮವಾರದಂದು ಕೊನೆಯುಸಿರೆಳೆದಿದ್ದಾರೆ. ಆದರೆ ಲಾಕ್‌ಡೌನ್ ಘೋಷಣೆ ಹಿನ್ನೆಲೆ ಯೋಗಿ ಆದಿತ್ಯನಾಥ್ ತನ್ನ ತಂದೆ ಅಂತಿಮ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಸಿಎಂ ಯೋಗಿ ಆದಿತ್ಯನಾಥ್ ಲಾಕ್‌ಡೌನ್ ನಿಯಮ ಪಾಲಿಸುವುದಾಗಿ ನಿರ್ಧರಿಸಿದ್ದು, ತಾನು ತಂದೆಯ ಅಂತ್ಯ ದರ್ಶನ ಪಡೆಯಲು ಸಾಧ್ಯವಿಲ್ಲ ಎಂದು ಮನೆಯವರಿಗೂ ತಿಳಿಸಿದ್ದಾರೆ. ಅಲ್ಲದೇ ಲಾಕ್‌ಡೌನ್ ಇರುವ ಕಾರಣ ಅಂತ್ಯ ಕ್ರಿಯೆಯಲ್ಲಿ ಸಾಧ್ಯವಾದಷ್ಟು ಕಡಿಮೆ ಜನರು ಇರುವಂತೆ ನಿಗಾ ವಹಿಸಲು ಮನವಿಯನ್ನೂ ಮಾಡಿದ್ದಾರೆ.

ತನ್ನ ಬಾರ್‌ಗೆ ತಾನೇ ಕನ್ನ ಹಾಕಿದ ಮಾಲೀಕ: ಕಾರಣ?

ಯುಪಿ ಸಿಎಂ ತಂದೆ ಆದಿತ್ಯ ಸಿಂಗ್ ವಷ್ಟ್ ಸೋಮವಾರದಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಸಿಕ್ಕಾಗ ಅವರು ಕೊರೋನಾ ನಿಯಂತ್ರಣ ನಿಟ್ಟಿನಲ್ಲಿ ನಡೆಯುತ್ತಿದ್ದ ಸಭೆಯಲ್ಲಿದ್ದರೆನ್ನಲಾಗಿದೆ. ಅಧಿಕಾರಿಗಳು ಯೋಗಿ ಆದಿತ್ಯನಾಥ್ ಅಂತಿಮ ದರ್ಶನಕ್ಕೆ ತೆರಳುತ್ತಾರೆಂದು ತಯಾರಿ ಮಾಡಿದ್ದರು. ಆದರೆ ಸಿಎ ಮಾತ್ರ ಸಭೆ ಮುಂದುವರೆಸಿದ್ದಾರೆ.

ಈ  ಸಂಬಂಧ ನೊಟ್‌ ಒಂದನ್ನು ಬಿಡುಗಡೆ ಮಾಡಿರುವ ಯೋಗಿ ಆದಿತ್ಯನಾಥ್ ನನ್ನ ತಂದೆ ಮೃತಪಟ್ಟಿದ್ದು, ಬಹಳ ದುಃಖವಾಗುತ್ತಿದೆ. ಕೊನೆಯ ಬಾರಿ ಒಮ್ಮೆ ನೋಡಬೇಕೆಂಬ ಇಚ್ಛೆ ಇತ್ತು. ಆದರೆ ಮಾಮಾರಿ ಕೊರೋನಾದಿಂದಾಗಿ ಇದು ಸಾಧ್ಯವಾಗಿಲ್ಲ ಎಂದಿದ್ದಾರೆ. ತಾಯಿಗೆ ಭಾವುಕ ಪತ್ರವೊಂದನ್ನು ಬರೆದಿರುವ ಸಿಎಂ ಸದ್ಯ ತನ್ನ ವೈಯುಕ್ತಿಕ ಜೀವನಕ್ಕಿಂತಲೂ ಕರ್ತವ್ಯವೇ ಪ್ರಮುಖವಾದದ್ದು, ಈ ನಿಟ್ಟಿನಲ್ಲಿ ತನಗೆ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. 

Follow Us:
Download App:
  • android
  • ios