ಕೊರೋನಾತಂಕ ನಡುವೆ ಶಾಕ್ ಕೊಟ್ಟಿದೆ ಏಮ್ಸ್ ನಿರ್ದೇಶಕರ ಹೇಳಿಕೆ| ಡಿಸೆಂಬರ್‌ ಅಲ್ಲ ಮೊದಲೇ ಭಾರತಕ್ಕೆ ಎಂಟ್ರಿ ಕೊಟ್ಟಿದೆ ಹೊಸ ತಳಿಯ ಕೊರೋನಾ?| 

ನವದೆಹಲಿ(ಡಿ.31): ಭಾರತದಲ್ಲಿ ಕೊರೋನಾ ಹೊಸ ಮಾದರಿ ಸೋಂಕು ತಗುಲಿದ ಸುಮಾರು ಇಪ್ಪತ್ತು ಪ್ರಕರಣಗಳು ದಾಖಲಾಗಿವೆ. ಇದನ್ನು ಆಧಾರವಾಗಿಟ್ಟುಕೊಂಡು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿಕೆಯೊಂದನ್ನು ನೀಡಿದ್ದು, ಇದು ಭಾರತೀಯರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

Add Asianetnews Kannada as a Preferred SourcegooglePreferred

ಹೌದು ಭಾರತಕ್ಕೆ ಡಿಸೆಂಬರ್‌ಗೂ ಮೊದಲೇ ಹೊಸ ತಳಿಯ ಕೊರೋನಾ ಎಂಟ್ರಿ ಕೊಟ್ಟಿರಬಹುದು. ಉಯಾಕೆಂದರೆ ಬ್ರಿಟನ್‌ನಲ್ಲಿ ಈ ರೂಪಾಂತರಿ ವೈರಸ್ ಸಪ್ಟೆಂಬರ್‌ ತಿಂಗಳಲ್ಲೇ ಹಬ್ಬಿಕೊಳ್ಳಲಾರಂಭಿಸಿತ್ತು. ಹೀಗಿರುವಾಗ ಅಲ್ಲಿಂದ ಭಾರತಕ್ಕೆ ಮರಳಿದವರಲ್ಲಿ ಈ ಸೋಂಕು ಇರುವ ಸಾಧ್ಯತೆಗಳಿವೆ ಎಂದು ಗುಲೇರಿಯಾ ತಿಳಿಸಿದ್ದಾರೆ. ಈಗಾಗಲೇ ಹೊಸ ವೈರಸ್‌ನಿಂದ ಆತಂಕಕ್ಕೀಡಾಗಿರುವ ಮಂದಿಗೆ ಈ ವಿಚಾರ ಮತ್ತಷ್ಟು ಭೀತಿ ಹುಟ್ಟಿಸಿದೆ.

ಆದರೆ ಇದು ಕೇವಲ ಅನುಮಾನವಷ್ಟೇ ಆದರೆ ಡೇಟಾ ಇಲ್ಲದೇ ನಿಖರವಾಗಿ ಹೇಳುವುದು ಅಸಾಧ್ಯವೆಂದಿದ್ದಾರೆ.