Asianet Suvarna News Asianet Suvarna News

ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮಣಿಪುರ ವಿದ್ಯಾರ್ಥಿಗಳ ಹತ್ಯೆ, ಚಿತ್ರ ವೈರಲ್‌, ದೇಹಕ್ಕಾಗಿ ಪೊಲೀಸರ ಶೋಧ!

ಕಳೆದ ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮಣಿಪುರ ವಿದ್ಯಾರ್ಥಿಗಳ ಹತ್ಯೆಯಾಗಿದೆ. ಈ ಕುರಿತಾದ ಚಿತ್ರಗಳು ಪ್ರಕಟವಾಗಿದ್ದು, ಈ ವಿದ್ಯಾರ್ಥಿಗಳ ದೇಹವನ್ನು ಶೋಧಿಸುವ ಕಾರ್ಯ ಆರಂಭವಾಗಿದೆ.

Two students missing since July in Manipur murdered Pictures surfaced bodies not found yet san
Author
First Published Sep 26, 2023, 4:38 PM IST | Last Updated Sep 26, 2023, 4:38 PM IST

ನವದೆಹಲಿ ಸೆ.26): ಕಳೆದ ಜುಲೈನಿಂದ ನಾಪತ್ತೆಯಾಗಿದ್ದ ಇಬ್ಬರು ಮಣಿಪು ವಿದ್ಯಾರ್ಥಿಗಳು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಬ್ಬರ ಮೃತದೇಹಗಳ ಫೋಟೋಗಳು ಹೊರಬಿದ್ದಿವೆ. ಫೋಟೋದಲ್ಲಿ, ಅವರಿಬ್ಬರ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ. ಚಿತ್ರದಲ್ಲಿ ಒಬ್ಬ ಬಾಲಕನ ತಲೆಯನ್ನು ಕತ್ತರಿಸಲಾಗಿದೆ. ಆದರೆ, ಇಬ್ಬರ ಶವ ಇನ್ನೂ ಪತ್ತೆಯಾಗಿಲ್ಲ. ಜುಲೈನಲ್ಲಿ ಅಂಗಡಿಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ವಿದ್ಯಾರ್ಥಿಗಳಿಬ್ಬರೂ ಕಾಣಿಸಿಕೊಂಡಿದ್ದು, ಅಂದಿನಿಂದ ಇವರು ಪತ್ತೆಯಾಗಿರಲಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ. ಈ ವಿಚಾರದಲ್ಲಿ ಸಂಯಮ ವಹಿಸಿ ತನಿಖಾ ಸಂಸ್ಥೆಗಳಿಗೆ ತಮ್ಮ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.

ವೈರಲ್‌ ಆದ ಎರಡು ಚಿತ್ರಗಳ ಮೊದಲದರಲ್ಲಿ, ಇಬ್ಬರು ವಿದ್ಯಾರ್ಥಿಗಳು, 17 ವರ್ಷದ ಹಿಜಾಮ್ ಲಿಂಥೋಯಿಂಗಂಬಿ ಮತ್ತು 20 ವರ್ಷದ ಫಿಜಾಮ್ ಹೇಮ್‌ಜೀತ್ ಕುಳಿತುಕೊಂಡಿದ್ದಾರೆ ಈ ಚಿತ್ರದಲ್ಲಿ, ವಿದ್ಯಾರ್ಥಿಯು ಬಿಳಿ ಟಿ-ಶರ್ಟ್‌ನಲ್ಲಿದ್ದರೆ, ಹೇಮ್‌ಜೀತ್ ಚೆಕ್ ಶರ್ಟ್‌ ಧರಿಸಿದ್ದು, ಬ್ಯಾಕ್‌ಪಾಕ್‌ಅನ್ನು ಹೊಂದಿದ್ದಾರೆ. ಅವರ ಹಿಂದೆ ಇಬ್ಬರು ಬಂದೂಕುಧಾರಿಗಳು ನಿಂತಿದ್ದರು. 2ನೇ ಚಿತ್ರದಲ್ಲಿ ಇಬ್ಬರು ವಿದ್ಯಾರ್ಥಿಗಳ ಶವಗಳು ಪೊದೆಗಳ ನಡುವೆ ಬಿದ್ದಿರುವುದು ಕಂಡು ಬಂದಿದೆ. ಆದಾಗ್ಯೂ, ಈ ಫೋಟೋ ಮಣಿಪುರದ ಯಾವ ಪ್ರದೇಶದಲ್ಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಮತ್ತು ತನಿಖಾ ಸಂಸ್ಥೆ ಶವ ಪತ್ತೆಗೆ ಪ್ರಯತ್ನಿಸುತ್ತಿದೆ.

ಈ ವಿಷಯ ಬೆಳಕಿಗೆ ಬಂದ ನಂತರ ತಕ್ಷಣವೇ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಘಟನೆಯ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲಾಗುವುದು. ಅಪರಾಧಿಗಳ ಪತ್ತೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನೂ ಆರಂಭಿಸಿವೆ. ಶಾಂತಿ ಕಾಪಾಡಲು ಮತ್ತು ತನಿಖಾಧಿಕಾರಿಗಳು ತಮ್ಮ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಾತನಾಡಿ, ಮಣಿಪುರದಲ್ಲಿ ಮಕ್ಕಳು ಜಾತಿ ಹಿಂಸಾಚಾರಕ್ಕೆ ಹೆಚ್ಚು ಬಲಿಪಶುಗಳಾಗಿದ್ದಾರೆ. ಅವುಗಳನ್ನು ರಕ್ಷಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುವುದು ನಮ್ಮ ಕರ್ತವ್ಯ. ಮಣಿಪುರದಲ್ಲಿ ನಡೆಯುತ್ತಿರುವ ಅಪರಾಧಗಳು ಪದಗಳಿಗೆ ಮೀರಿದ್ದು, ಆದರೂ ರಾಜ್ಯದಲ್ಲಿ ಯಾವುದೇ ತಡೆಯಿಲ್ಲದೆ ಅಪರಾಧಗಳು ಮುಂದುವರಿಯಲು ಅವಕಾಶ ನೀಡಲಾಗುತ್ತಿದೆ. ಕೇಂದ್ರದ ನಿಷ್ಕ್ರಿಯತೆಗೆ ನಾಚಿಕೆಯಾಗಬೇಕು ಎಂದು ಟೀಕಿಸಿದ್ದಾರೆ.

 

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಕರ್ಫ್ಯೂ ವಿರೋಧಿಸಿ ಸಾವಿರಾರು ಮಹಿಳೆಯರು ಬೀದಿಗೆ

ಮೇ 4 ರಂದು, ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ ತೌಬಲ್ ಜಿಲ್ಲೆಯಲ್ಲಿ ನಡೆದಿತ್ತು. ಇದರ ವೀಡಿಯೋ ಜುಲೈ 19 ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೆಲವರು ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಅವರೊಂದಿಗೆ ಅಶ್ಲೀಲ ಕೃತ್ಯಗಳನ್ನು ಎಸಗಿರುವುದು ವಿಡಿಯೋದಲ್ಲಿದೆ. ಸಂತ್ರಸ್ತ ಮಹಿಳೆಯ ಪತಿ ಮಾತನಾಡಿ, 'ಸಾವಿರ ಜನರ ಗುಂಪು ಗ್ರಾಮದ ಮೇಲೆ ದಾಳಿ ನಡೆಸಿತ್ತು. ನನ್ನ ಹೆಂಡತಿ ಮತ್ತು ಗ್ರಾಮಸ್ಥರನ್ನು ಗುಂಪಿನಿಂದ ರಕ್ಷಿಸಲು ನನಗೆ ಸಾಧ್ಯವಾಗಲಿಲ್ಲ. ಪೊಲೀಸರೂ ನಮಗೆ ಭದ್ರತೆ ನೀಡಿಲ್ಲ. ಗುಂಪು ಮೂರು ಗಂಟೆಗಳ ಕಾಲ ದೌರ್ಜನ್ಯವನ್ನು ಮುಂದುವರೆಸಿತು. ನನ್ನ ಹೆಂಡತಿ ಹೇಗೋ ಒಂದು ಹಳ್ಳಿಯಲ್ಲಿ ಆಶ್ರಯ ಪಡೆದಳು ಎಂದು ಹೇಳಿದ್ದರು.

ಮಣಿಪುರದ ಕುರಿತ ವಿಶ್ವಸಂಸ್ಥೆ ಹೇಳಿಕೆಗೆ ಭಾರತದ ತೀವ್ರ ಆಕ್ಷೇಪ

Latest Videos
Follow Us:
Download App:
  • android
  • ios