ಲಷ್ಕರ್ನ ಟಾಪ್ ಉಗ್ರವಾದಿ ಮುದಾಸಿರ್ ಪಂಡಿತ್ ಸೇರಿ ಮೂವರ ಎನ್ಕೌಂಟರ್!
* ಕಣಿವೆ ನಾಡು ಕಾಶ್ಮೀರದಲ್ಲಿ ಎನ್ಕೌಂಟರ್
* ಲಷ್ಕರ್ನ ಟಾಪ್ ಉಗ್ರವಾದಿ ಮುದಾಸಿರ್ ಪಮಡಿತ್ ಸೇರಿ ಮೂವರ ಹತ್ಯೆ
* ಅನೇಕರ ಹತ್ಯೆಗೈದಿದ್ದ ಮುದಾಸಿರ್
ಶ್ರೀನಗರ(ಜೂ.21): ಕಣಿವೆ ನಾಡು ಕಾಶ್ಮೀರದಲ್ಲಿ ಭಯೋತ್ಪಾದನೆ ಮಟ್ಟ ಹಾಕಲು ನಿರಂತರ ಶ್ರಮಿಸುತ್ತಿರುವ ಭದ್ರತಾ ಪಡೆ ಮತ್ತೊಂದು ಯಶಸ್ಸು ಗಳಿಸಿದೆ. ಭಾನುವಾರ ರಾತ್ರಿ ನಡೆದ ಎನ್ಕೌಂಟರ್ನಲ್ಲಿ ಲಷ್ಕರ್ನ ಟಾಪ್ ಉಗ್ರವಾದಿ ಮುದಾಸಿರ್ ಪಮಡಿತ್ ಸೇರಿ ಮೂವರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಸೋಮವಾರ ಈ ಪ್ರದೇಶದಲ್ಲಿ ಮತ್ತೆ ಸರ್ಚ್ ಆಪರೇಷನ್ ನಡೆಯುತ್ತಿದೆ. ಕಣಿವೆ ನಾಡಿನಲ್ಲಿ ಪ್ರತಿ ಎರಡು ಮೂರು ದಿನಕ್ಕೊಬ್ಬ ಭಯೋತ್ಪಾದಕನನ್ನು ಸದೆಬಡಿಯಲಾಗುತ್ತಿದೆ.
ಅನೇಕರ ಹತ್ಯೆಗೈದಿದ್ದ ಮುದಾಸಿರ್
ಕಾಶ್ಮೀರದ ಐಜಿ ವಿಜಯ್ ಕುಮಾರ್ ಈ ಬಗ್ಗೆ ಮಾಹಿತಿ ನೀಡುತ್ತಾ ಮುದಾಸಿರ್ ಲಷ್ಕರ್- ಏ-ತೊಯ್ಬಾದ ಪ್ರಮುಖ ಭಯೋತ್ಪಾದಕನಾಗಿದ್ದ. ಆತ ಮೂವರು ಪೊಲೀಸ್ ಸಿಬ್ಬಂದಿ, ಇಬ್ಬರು ಕೌನ್ಸಿಲರ್ ಹಾಗೂ ಇಬ್ಬರು ನಾಗರಿಕರ ಹತ್ಯೆಗೈದಿದ್ದ.
ಭದ್ರತಾ ಪಡೆಗೆ ಕೆಲ ಭಯೋತ್ಪಾದಕರು ಸೋಪೋರ್ ಜಿಲ್ಲೆಯ ಗುಂಡ್ ಬ್ರಥ್ ಪ್ರದೇಶದಲ್ಲಿ ಅಡಗಿದ್ದಾರೆಂಬ ಮಾಹಿತಿ ಸಿಕ್ಕಿತ್ತು. ಇದಾದ ಬಳಿಕ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರೆದಿದ್ದಾರೆ. ಇದರಿಂದ ಭಯಭೀತರಾದ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ. ಆದರೆ ಭದ್ರತಾ ಪಡೆ ಅವರನ್ನು ಹೊಡೆದುರುಳಿಸಿದೆ ಎಂದಿದ್ದಾರೆ.