ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ಎಸ್ಎಲ್ಬಿಸಿ ಸುರಂಗದಲ್ಲಿ ಸಿಲುಕಿದ್ದ ಎಂಟು ಕಾರ್ಮಿಕರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದೆ. 15 ದಿನಗಳ ರಕ್ಷಣಾ ಕಾರ್ಯಾಚರಣೆಯಲ್ಲಿ, ತರಬೇತಿ ಪಡೆದ ಶ್ವಾನಗಳು ಮೃತದೇಹದ ಇರುವಿಕೆಯನ್ನು ಸೂಚಿಸಿದವು. ಫೆಬ್ರವರಿ 22 ರಿಂದ ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದರು. ಸುರಂಗದ ಉತ್ಖನನದ ವೇಳೆ ಮೇಲ್ಛಾವಣಿ ಕುಸಿದು ದುರಂತ ಸಂಭವಿಸಿದೆ. (50 words)
Telangana Tunnel Tragedy: ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ಎಸ್ಎಲ್ಬಿಸಿ ಸುರಂಗದಲ್ಲಿ ಸಿಲುಕಿದ್ದ ಎಂಟು ಕಾರ್ಮಿಕರಲ್ಲಿ ಒಬ್ಬರ ಮೃತದೇಹವನ್ನು ಭಾನುವಾರ ಹೊರತೆಗೆಯಲಾಗಿದೆ. ಮೃತದೇಹವು ಯಂತ್ರದಲ್ಲಿ ಸಿಲುಕಿಕೊಂಡಿತ್ತು. ಹೀಗಾಗಿ ಅದನ್ನು ಹೊರತೆಗೆಯಲು ಯಂತ್ರವನ್ನು ಕತ್ತರಿಸಲಾಗುತ್ತಿದೆ ಎಂದು ರಕ್ಷಣಾ ತಂಡ ತಿಳಿಸಿದೆ.
8 ಕಾರ್ಮಿಕರಲ್ಲಿ ಒಬ್ಬರ ಮೃತದೇಹ ಪತ್ತೆ:15 ದಿನಗಳಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗೆ ರವಿವಾರ ವೇಗ ಸಿಕ್ಕಿದೆ. ಕೇರಳದಿಂದ ಬಂದ ವಿಶೇಷ ತರಬೇತಿ ಪಡೆದ ಶೋಧನಾ ನಾಯಿಗಳು ಮಣ್ಣಿನಡಿ ಮೃತದೇಹ ಇರುವ ಬಗ್ಗೆ ಸೂಚನೆ ನೀಡಿವೆ. ಸುರಂಗದ ಕೊನೆಯ ಭಾಗದಲ್ಲಿರುವ ಡಿ-2 ಪಾಯಿಂಟ್ ಬಳಿ ನಾಯಿಗಳು ಕಾರ್ಮಿಕರ ಇರುವಿಕೆಯನ್ನು ಪತ್ತೆ ಮಾಡಿವೆ. ಇದು ಅಪಘಾತ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿದೆ.
ತೆಲಂಗಾಣ ಸುರಂಗ ದುರಂತ, ಮಣ್ಣಿನಲ್ಲಿ ಸಿಲುಕಿರುವ 8 ಜನರ ರಕ್ಷಣೆಗೆ ಮೊಣಕಾಲುದ್ದ ಕೆಸರು ಅಡ್ಡಿ!
ಫೆಬ್ರವರಿ 22 ರಿಂದ 8 ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದರು:ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯಲ್ಲಿರುವ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್ಎಲ್ಬಿಸಿ) ಯೋಜನಾ ಸುರಂಗದಲ್ಲಿ ಫೆಬ್ರವರಿ 22 ರಿಂದ 8 ಕಾರ್ಮಿಕರು ಸಿಲುಕಿದ್ದಾರೆ. ತರಬೇತಿ ಪಡೆದ ಶ್ವಾನಗಳು ಮೃತದೇಹದ ಇರುವಿಕೆಯನ್ನು ಸೂಚಿಸಿದ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ ಎಚ್ಚರಿಕೆಯಿಂದ ಮಣ್ಣನ್ನು ಅಗೆಯುತ್ತಿದ್ದರು. ಇದೇ ಸ್ಥಳದಲ್ಲಿ ಮಣ್ಣಿನಡಿ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ. ಶನಿವಾರ ರಾತ್ರಿ ಮಣ್ಣಿನಡಿ ಆರು ಅಡಿ ಆಳದಲ್ಲಿ ವ್ಯಕ್ತಿಯ ದೇಹದ ಭಾಗಗಳು ಪತ್ತೆಯಾಗಿವೆ. ಮೃತದೇಹವನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಆ ಪ್ರದೇಶವನ್ನು ಅಗೆದರು.
ಚಿತ್ರರಂಗದ ನಟ್ಟು ಬೋಲ್ಟು ಟೈಟ್ ಮಾಡಿದ ದಕ್ಷಿಣ ಭಾರತದ ಸಿಎಂಗಳು
ಫೆಬ್ರವರಿ 22 ರಿಂದ ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯಲ್ಲಿರುವ ಶ್ರೀಶೈಲಂ ಎಡದಂಡೆ ಕಾಲುವೆ ಯೋಜನಾ ಸುರಂಗದಲ್ಲಿ ಎಂಟು ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಸುರಂಗದ ಉತ್ಖನನದ ವೇಳೆ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ. ಈ ದುರಂತದಲ್ಲಿ ಜಾರ್ಖಂಡ್, ಉತ್ತರ ಪ್ರದೇಶ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದ ನಾಲ್ವರು ಕಾರ್ಮಿಕರು, ಇಬ್ಬರು ಇಂಜಿನಿಯರ್ಗಳು ಮತ್ತು ಇಬ್ಬರು ಯಂತ್ರ ನಿರ್ವಾಹಕರ ಜೀವಕ್ಕೆ ಅಪಾಯವಾಗಿದೆ.
