Asianet Suvarna News Asianet Suvarna News

Krishna Janmabhoomi case: ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದ: ಅಕ್ಟೋಬರ್‌ 3 ರಿಂದ ವಿಚಾರಣೆ ಆರಂಭ

ಶ್ರೀಕೃಷ್ಣ ಜನ್ಮಸ್ಥಾನ-ಈದ್ಗಾ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ವಿಚಾರಣೆ ವೇಳೆ ಸುನ್ನಿ ವಕ್ಫ್ ಮಂಡಳಿಯ ವಕೀಲರು ಹಾಜರಾಗದ ಕಾರಣ ವಿಚಾರಣೆ ನಡೆಯಲಿಲ್ಲ. ಮತ್ತೊಂದೆಡೆ, ಹಿಂದು ಕಡೆಯ ವಕೀಲರು ಮುಸ್ಲಿಂ ಕಡೆಯವರು ಪ್ರಕರಣವನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
 

Shri Krishna Janmasthan Shahi Idgah dispute Hearing to be held on October 3 san
Author
First Published Sep 13, 2022, 6:55 PM IST

ಮಥುರಾ (ಸೆ.13): ಶ್ರೀ ಕೃಷ್ಣ ಜನ್ಮಸ್ಥಳ ಮತ್ತು ಶಾಹಿ ಈದ್ಗಾ ವಿವಾದ ಪ್ರಕರಣದ ಜಿಲ್ಲಾ ನ್ಯಾಯಾಲಯದಲ್ಲಿ ಈಗ ಅಕ್ಟೋಬರ್ 3 ರಂದು ವಿಚಾರಣೆ ನಡೆಯಲಿದೆ. ವಾಸ್ತವವಾಗಿ ಮಂಗಳವಾರ ಪ್ರಕರಣದ ವಿಚಾರಣೆ ನಡೆಯಬೇಕಿತ್ತು. ಆದರೆ. ಸುನ್ನಿ ವಕ್ಫ್ ಮಂಡಳಿಯ ವಕೀಲರು ಹಾಜರಾಗಲಿಲ್ಲ. ಮತ್ತೊಂದೆಡೆ, ಶ್ರೀಕೃಷ್ಣ ಜನ್ಮಭೂಮಿ ಪರ ವಕೀಲರು ಮುಸ್ಲಿಂ ಕಡೆಯವರು ಪ್ರಕರಣವನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಪ್ರಕರಣದಲ್ಲಿ ಬಗ್ಗೆ ಆಯುಕ್ತರನ್ನು ನೇಮಿಸಿ ಸರ್ವೆ ನಡೆಸಬೇಕು ಎಂಬುದು ಅರ್ಜಿದಾರರ ಆಗ್ರಹವಾಗಿದೆ. ಮತ್ತೊಂದೆಡೆ, ಮುಸ್ಲಿಂ ಕಡೆಯವರು ಇದನ್ನು ಬಲವಾಗಿ ವಿರೋಧಿಸುತ್ತಿದ್ದಾರೆ. ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಸ್ಥಳದ ವಿಷಯ ವಿಚಾರಣೆ ನಡೆಯುತ್ತಿದೆ ಎಂದು ಹಿಂದೂ ಕಡೆಯವರ ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ. ಮುಸ್ಲಿಂ ಕಡೆಯವರು ಉದ್ದೇಶಪೂರ್ವಕವಾಗಿ ಈ ವಿಷಯವನ್ನು ವಿಳಂಬ ಮಾಡಲು ಬಯಸಿದ್ದಾರೆ. ಹಾಗಾಗಿಯೇ ಸುನ್ನಿ ಮಂಡಳಿ ಈ ವಿಚಾರದಲ್ಲಿಈವರೆಗೂ ಕಾಣಿಸಿಕೊಂಡಿಲ್ಲ. ಅದೇ ಸಮಯದಲ್ಲಿ, ಸುನ್ನಿ ವಕ್ಫ್ ಮಂಡಳಿಯು ಪ್ರತಿವಾದವನ್ನು ಈವರೆಗೂ ಸಲ್ಲಿಸಿಲ್ಲ ಈದ್ಗಾ ಪರ ವಕೀಲ ತನ್ವೀರ್ ಅಹ್ಮದ್ ಹೇಳುತ್ತಾರೆ. ನಾವು ಎಲ್ಲಾ ಕಕ್ಷಿದಾರರನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದೇವೆ. ಈಗ ಅಕ್ಟೋಬರ್ 3 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

ಈ ಎಲ್ಲದರ ವಿಚಾರಣೆಗಳ ನಡುವೆ, ಅಖಿಲ ಭಾರತ ಹಿಂದೂ ಮಹಾಸಭಾವು (All India Hindu Mahasabha) ಶ್ರೀ ಕೃಷ್ಣನ ಜನ್ಮಸ್ಥಳದ ಬಳಿ ಇರುವ ಮತ್ತೊಂದು ಮಸೀದಿಯನ್ನು ಠಾಕೂರ್ ಕೇಶವ್ ದೇವ್ ಅವರ 13.37 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ವಿವರಿಸಿದೆ. ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮಹಾಸಭಾದ ರಾಷ್ಟ್ರೀಯ ಖಜಾಂಚಿ ದಿನೇಶ್ ಶರ್ಮಾ ಅವರು ತಮ್ಮ ಪ್ರಕರಣದಲ್ಲಿ ಮಸೀದಿ ಅಕ್ರಮ ಅತಿಕ್ರಮಣ ಎಂದು ಪ್ರತಿಪಾದಿಸಿದ್ದಾರೆ. ಔರಂಗಜೇಬನು ಶ್ರೀ ಕೃಷ್ಣ ಜನ್ಮಸ್ಥಳದ ದೇವಾಲಯವನ್ನು ಕೆಡವಿ ಶಾಹಿ ಈದ್ಗಾವನ್ನು ಅಕ್ರಮವಾಗಿ ಅತಿಕ್ರಮಿಸಿದನು. ಅದರ ನಂತರ ಅವರು ಶ್ರೀ ಕೃಷ್ಣನ ಪೂರ್ವ ಗಡಿಯಲ್ಲಿರುವ ಮೀನಾ ಮಸೀದಿಯನ್ನು(Meena Masjid) ನಿರ್ಮಿಸಿದ ಎಂದು ಹೇಳಿದ್ದಾರೆ.

ಇದರ ವಿಚಾರಣೆಯನ್ನು ನ್ಯಾಯಾಲಯವು ಅಕ್ಟೋಬರ್ 26 ರಂದು ವಿಚಾರಣೆ ನಡೆಸಲಿದೆ. ಅರ್ಜಿದಾರ ದಿನೇಶ್ ಶರ್ಮಾ ಅವರು ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗದ ನ್ಯಾಯಾಲಯದಲ್ಲಿ ಮಸೀದಿಯನ್ನು ತೆಗೆದುಹಾಕುವ ಬಗ್ಗೆ ಹಕ್ಕನ್ನು ಮಂಡಿಸಿದ್ದಾರೆ ಎಂದು ಹೇಳುತ್ತಾರೆ. 

Krishna Janmabhoomi case: ಮಸೀದಿ ತೆರವು ಮಾಡುವ ಅರ್ಜಿ ವಿಚಾರಣೆಗೆ ಒಪ್ಪಿದ ಮಥುರಾ ಕೋರ್ಟ್!

ನ್ಯಾಯಾಲಯದ ಆಯುಕ್ತರ (court commissioner.) ನೇಮಕಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ (district judge’s court) ವಿಚಾರಣೆ ನಡೆಯಬೇಕಿತ್ತು. ಮಹೇಂದ್ರ ಪ್ರತಾಪ್ ಸಿಂಗ್ ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಬೇಕಿತ್ತು. ಇದಕ್ಕೂ ಮುನ್ನ ಜುಲೈ 5 ರಂದು ಸಿವಿಲ್ ಕೋರ್ಟ್ ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಅರ್ಜಿಗಳನ್ನು ವಿಚಾರಣೆ ನಡೆಸಿತು. ವಿವಾದಿತ ಸ್ಥಳದಿಂದ ಶಾಹಿ ಈದ್ಗಾವನ್ನು ತೆರವುಗೊಳಿಸಿ ಅದನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕೆಂದು ಅರ್ಜಿಯೊಂದು ಒತ್ತಾಯಿಸಿದೆ. ಮಸೀದಿಯಲ್ಲಿರುವ ದೇಗುಲದ ಪುರಾವೆಗಳ ರಕ್ಷಣೆಗೆ ನ್ಯಾಯಾಲಯ ಆದೇಶ ನೀಡಬೇಕೆಂದು ಇತರ ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

ಶ್ರೀಕೃಷ್ಣ ಜನ್ಮಭೂಮಿ ವಶ ಕೋರಿದ್ದ ಅರ್ಜಿ ವಜಾ!

ಜ್ಞಾನವಾಪಿ ಮಸೀದಿಯ ಹೊರಗೋಡೆಯಲ್ಲಿರುವ ಹಿಂದು ದೇವರನ್ನು ವರ್ಷಪೂರ್ತಿ ಆರಾಧನೆ ಮಾಡುವ ನಿಟ್ಟಿನಲ್ಲಿಅನುಮತಿ ನೀಡಬೇಕು ಎಂದು ಐವರು ಮಹಿಳೆಯರು ವಾರಣಾಸಿ ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಈ ಮನವಿಯ ವಿಚಾರಣೆಯನ್ನೇ ಮಾಡಬಾರದು ಎಂದು ಮಸೀದಿ ಸಮಿತಿಯು ಅರ್ಜಿಯನ್ನು ಸಲ್ಲಿಕೆ ಮಾಡಿತ್ತು. ಇದರ ಸಂಪೂರ್ಣ ವಿಚಾರಣೆ ನಡೆಸಿದ ವಾರಣಾಸಿ ಕೋರ್ಟ್‌, ಸೆ. 12 ರಂದು ನೀಡಿದ ತೀರ್ಪಿನಲ್ಲಿ ಇದು ವಿಚಾರಣೆಗೆ ಅರ್ಹವಾದ ಅರ್ಜಿ ಎಂದು ಪುರಸ್ಕಾರ ಮಾಡಿದೆ. ಇದರ ಬೆನ್ನಲ್ಲಿಯೇ ಮಥುರಾದಲ್ಲಿ ಶ್ರೀಕೃಷ್ಣ ಜನ್ಮಭೂಮಿ ಹಾಗೂ ಶಾಹಿ ಈದ್ಗಾ ಮಸೀದಿಯ ವಿಚಾರಣೆಯೂ ಆರಂಭವಾಗಿದ್ದು ಹಿಂದುಗಳ ಸಂಭ್ರಮಕ್ಕೆ ಕಾರಣವಾಗಿದೆ.

Follow Us:
Download App:
  • android
  • ios