ಹಿರಿಯ ವಿಜ್ಞಾನಿ ಸಮೀರ್‌ ವಿ. ಕಾಮತ್‌ ಅವರನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಮುಖ್ಯಸ್ಥರನ್ನಾಗಿ ಗುರುವಾರ ನೇಮಕ ಮಾಡಲಾಗಿದೆ.

ನವದೆಹಲಿ: ಹಿರಿಯ ವಿಜ್ಞಾನಿ ಸಮೀರ್‌ ವಿ. ಕಾಮತ್‌ ಅವರನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಮುಖ್ಯಸ್ಥರನ್ನಾಗಿ ಗುರುವಾರ ನೇಮಕ ಮಾಡಲಾಗಿದೆ. ಇದುವರೆಗೂ ಈ ಸ್ಥಾನದಲ್ಲಿದ್ದ ಜಿ.ಸತೀಶ್‌ ರೆಡ್ಡಿ ಅವರು ಹುದ್ದೆಯಿಂದ ನಿವೃತ್ತರಾಗಿ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅವರಿಗೆ ವೈಜ್ಞಾನಿಕ ಸಲಹೆಗಾರರಾಗಿ ನೇಮಕಗೊಂಡ ಬೆನ್ನಲ್ಲೇ ಕಾಮತ್‌ ಅವರನ್ನು ಈ ಹುದ್ದೆಗೆ ನೇಮಿಸಲಾಗಿದೆ. 1989ರಲ್ಲಿ ಡಿಆರ್‌ಡಿಒಗೆ ಸೇರ್ಪಡೆಯಾಗಿದ್ದ ಕಾಮತ್‌, ನಂತರದ ಮೂರೂವರೆ ದಶಕಗಳಲ್ಲಿ ಹಲವು ಹಿರಿಯ ಹುದ್ದೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಸಂಪುಟದ ನೇಮಕಾತಿ ಸಮಿತಿಯು(ಎಸಿಸಿ) ಸಮೀರ್ ವಿ ಕಾಮತ್ ಅವರ ನೇಮಕಕ್ಕೆ ಅನುಮೋದನೆ ನೀಡಿದೆ. ಸಮೀರ್ ಅವರು ತಾವು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಅವರಿಗೆ 60 ವರ್ಷ ಪೂರೈಸುವವರೆಗೂ ಈ ಹುದ್ದೆಯಲ್ಲಿರಲಿದ್ದಾರೆ. ಸತೀಶ್ ರೆಡ್ಡಿ ಅವರನ್ನು 2018ರ ಆಗಸ್ಟ್‌ನಲ್ಲಿ ಎರಡು ವರ್ಷಗಳ ಕಾಲ ಡಿಆರ್‌ಡಿಒ ಮುಖ್ಯಸ್ಥರಾಗಿ ನೇಮಿಸಲಾಗಿತ್ತು. ನಂತರ 2020ರ ಆಗಸ್ಟ್ ನಲ್ಲಿ ಅವರ ಸೇವಾವಧಿಯನ್ನು ಮತ್ತೆರಡು ವರ್ಷಕ್ಕೆ ವಿಸ್ತರಿಸಲಾಗಿತ್ತು.

ಡಿಆರ್‌ಡಿಒ ಮುಖ್ಯಸ್ಥರಾಗಿ ಸಮೀರ್‌ ಕಾಮತ್‌ ನೇಮಕ

ಜೀವನದಲ್ಲಿ ದೊಡ್ಡ ಗುರಿ ಬೆನ್ನಟ್ಟಿ
ಕೆ.ಆರ್‌.ಪುರ: ಜೀವನದಲ್ಲಿ ದೊಡ್ಡ ಗುರಿ ಇಟ್ಟುಕೊಂಡು ಅದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಮನೋ ಸ್ಥೈರ್ಯ ಬೆಳೆಸಿಕೊಂಡಾಗ ಮಾತ್ರ ನೀವು ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ ಎಂದು ಡಿಆರ್‌ಡಿಒ ನಿವೃತ್ತ ಡೈರೆಕ್ಟರ್‌ ಜನರಲ್‌ ಡಾ ಜಿ.ಅತೀತನ್‌ ಸಲಹೆ ನೀಡಿದರು. ಕೇಂಬ್ರಿಡ್ಜ್‌ ಕಾಲೇಜಿನಲ್ಲಿ ಸ್ಮಾರ್ಟ್‌ ಇಂಡಿಯಾ ಕೇಂದ್ರ ಮಾನವ ಸಂಪನ್ಮೂಲ ಇನ್ನೋವೇಷನ್‌ ಸೆಲ್‌ ಮತ್ತು ಅಖಿಲ ಭಾರತ ತಾಂತ್ರಿಕ ಪರಿಷತ್‌ ಸಹಯೋಗದಲ್ಲಿ ಆಯೋಜಿಸಿದ್ದ ಹ್ಯಾಕಥಾನ್‌-2022 ಅನ್ನು ಉದ್ಘಾಟಿಸಿ ಮಾತನಾಡಿದರು.

ಯಶಸ್ವಿ ಕ್ಷಿಪಣಿ ಪರೀಕ್ಷೆ ನಡೆಸಿದ ಡಿಆರ್‌ಡಿಓ-ನೌಕಾಸೇನೆ

ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌-2022 ದೇಶದ 75 ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿದ್ದು, ಕರ್ನಾಟಕದಿಂದ ಈ ಕಾರ್ಯಕ್ರಮವನ್ನು ನಡೆಸಿಕೊಡಲು ಆಯ್ಕೆಯಾಗಿರುವ ಕಾಲೇಜುಗಳ ಪೈಕಿ ಕೇಂಬ್ರಿಡ್ಜ್‌ ತಾಂತ್ರಿಕ ಮಹಾವಿದ್ಯಾಲಯವು ಒಂದಾಗಿದೆ. ಇಲ್ಲಿ 30 ತಂಡಗಳು ಭಾಗವಹಿಸಿದ್ದು, 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಿಂದ ಈ ಹ್ಯಾಕಥಾನ್‌ನಲ್ಲಿ ಸ್ಪರ್ಧಿಸಿದ್ದಾರೆ. ವಿಪ್ರೋ ಸಂಸ್ಥೆಯ ಆಡ್ವಿಜ್‌ ವಿಭಾಗದ ಕಾರ್ಯಕ್ರಮ ನಿರ್ದೇಶಕ ಡಾ.ಯು.ಚಂದ್ರಶೇಖರ್‌, ಕೇಂಬ್ರಿಡ್ಜ್‌ ಸಮೂಹ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಾದ ಡಿ.ಕೆ.ಮೋಹನ್‌, ಪ್ರಾಂಶುಪಾಲೆ ಡಾ ಜಿ.ಇಂದುಮತಿ, ರಿಜಿಸ್ಟಾರ್‌ ಪ್ರೊ.
ಕೃಷ್ಣಕುಮಾರ್‌, ನೋಡಲ್‌ ಆಫೀಸರ್‌ ಡಾ. ವರಲಕ್ಷ್ಮಿ ಭಾಗವಹಿಸಿದ್ದರು.