Asianet Suvarna News Asianet Suvarna News

ಬನ್ನಂಜೆ ಸ್ಮರಿಸಿದ ಪ್ರಧಾನಿ.. ಸಾಹಿತ್ಯ-ಸಂಸ್ಕೃತಕ್ಕೆ ಕೊಡುಗೆ ಅಪಾರ

ಹಿರಿಯ ವಿದ್ವಾಂಸ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಅಗಲಿಕೆಗೆ ಮೋದಿ ಸಂತಾಪ/ ಸಾಹಿತ್ಯ ಮತ್ತು ಸಂಸ್ಕೃತ ಭಾಷೆಗೆ ಅವರು ನೀಡಿರುವ ಕೊಡುಗೆ ಅಜರಾಮರ / ಜಗತ್ತು ಅವರನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ

 

Renowned Sanskrit Scholar Bannanje Govindacharya Passes Away PM Modi Expresses Grief mah
Author
Bengaluru, First Published Dec 13, 2020, 10:25 PM IST

ನವದೆಹಲಿ (ಡಿ.13):  ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಸಾಹಿತ್ಯ ಮತ್ತು ಸಂಸ್ಕೃತ ಭಾಷೆಗೆ ಅವರು ನೀಡಿರುವ ಕೊಡುಗೆ ಅಜರಾಮರ  ಎಂದು ಸ್ಮರಿಸಿದ್ದಾರೆ.

ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ..ಜೀವನ ಸಾಧನೆ

ಟ್ವೀಟ್‌ ಮಾಡಿರುವ ನರೇಂದ್ರ ಮೋದಿ, ಸಂಸ್ಕೃತ, ಕನ್ನಡ ಸಾಹಿತ್ಯದ ಪರ ಗೋವಿಂದಾಚಾರ್ಯ ಅವರ ಒಲವು, ಶ್ರದ್ಧೆಯ ಕೆಲಸ  ಜಗತ್ತಿಗೆ ಗೊತ್ತಿದೆ. ಮುಂದಿನ ತಲೆಮಾರಿಗೂ ಪ್ರೇರಣಾದಾಯಕ, ಅವರ ಅಗಲಿಕೆ ನೋವು ತಂದಿದೆ ಎಂದಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಗಣ್ಯರು ಆಚಾರ್ಯರ ಕೊಡುಗೆ ಸ್ಮರಿಸಿದ್ದಾರೆ. 

ಇಂದೋರ್‌ ಐಐಟಿಯಲ್ಲಿ ಸಂಸ್ಕೃತ ಬೋಧನೆ: ಇದೊಂದು ಹೊಸ ಹೆಜ್ಜೆ ...

ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯರು ಉಡುಪಿಯ ಅಂಬಲಪಾಡಿ ನಿವಾಸದಲ್ಲಿಂದು ಕೊನೆಯುಸಿರೆಳೆದಿದ್ದರು. ಪ್ರವಚನಕಾರ, ಮಧ್ವ ಸಿದ್ಧಾಂತದ ಪ್ರತಿಪಾದಕ ಹಾಗೂ ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದ ಅವರು ನಟ ಡಾ.ವಿಷ್ಣುವರ್ಧನ್ ಗೆ ಆಧ್ಯಾತ್ಮಿಕ ಗುರುಗಳಾಗಿದ್ದರು.  ಹಲವಾರು ಕೃತಿಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ್ದು, ಕನ್ನಡದ ಪ್ರಮುಖ ಮೂರು ಚಲನಚಿತ್ರಗಳಾದ ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾಚಾರ್ಯಕ್ಕೆ ಸಂಭಾಷಣೆಯನ್ನು ಬರೆದಿದ್ದರು. 

Follow Us:
Download App:
  • android
  • ios