Asianet Suvarna News Asianet Suvarna News

Kalicharan Maharaj: 'ದೇಶ ವಿಭಜನೆಗೆ ಗಾಂಧೀಜಿಯೇ ಕಾರಣ, ಮೋದಿ- ಯೋಗಿ ವಿಷ್ಣುವಿನ ಅವತಾರ!'

* ಚುನಾವಣಾ ಹೊಸ್ತಿಲಲ್ಲಿ ಮತ್ತೆ ಸದ್ದು ಮಾಡುತ್ತಿದೆ ದೇಶ ವಿಭಜನೆ ವಿಚಾರ

* ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ನಿಂದಿಸಿದ ಕಾಳಿಚರಣ್ ಮಹಾರಾಜ್ 

* ದೇಶ ವಿಭಜನೆಗೆ ಗಾಂಧೀಜಿಯೇ ಕಾರಣ, ಮೋದಿ- ಯೋಗಿ ವಿಷ್ಣುವಿನ ಅವತಾರ

Remarks on Mahatma Gandhi I don not regret my statement says seer Kalicharan Maharaj pod
Author
Bangalore, First Published Dec 29, 2021, 10:41 AM IST

ಲಕ್ನೋ(ಡಿ.29): ರಾಯ್‌ಪುರದ ಧರ್ಮ ಸಂಸದ್‌ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ನಿಂದಿಸಿದ ಕಾಳಿಚರಣ್ ಮಹಾರಾಜ್ ವಿರುದ್ಧ ಎಫ್‌ಐಆರ್ ದಾಖಲಾದ ನಂತರವೂ ಅವರ ಹೇಳಿಕೆಗಳು ನಿಲ್ಲುತ್ತಿಲ್ಲ. ಒಂದೆಡೆ ದೇಶದ ವಿಭಜನೆ ಮತ್ತು ಕುಟುಂಬ ರಾಜಕೀಯಕ್ಕೆ ಮಹಾತ್ಮ ಗಾಂಧಿಯವರನ್ನು ಕಾಳಿಚರಣ್ ಹೊಣೆಗಾರರನ್ನಾಗಿಸಿದರೆ, ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಿದ್ದಾರೆ.

ಸೋಮವಾರ ರಾಯಪುರದಲ್ಲಿ ಕಾಳಿಚರಣ್ ಮಹಾರಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಖಾಸಗಿ ಸುದ್ದಿವಾಹಿನಿ ನಡೆಸಿದ ಕಾರ್ಯಕ್ರಮವೊಂದರಲ್ಲಿ ತಾವು ಮಹಾತ್ಮ ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಪರಿಗಣಿಸುವುದಿಲ್ಲ, ಅಲ್ಲದೇ ತನ್ನ ಈ ಮಾತಿಗೆ ಪಶ್ಚಾತ್ತಾಪವಿಲ್ಲ ಎಂದಿದ್ದಾರೆ. ಗಾಂಧೀಜಿ ಹಿಂದೂ ಮತ್ತು ಹಿಂದುತ್ವಕ್ಕಾಗಿ ಏನನ್ನೂ ಮಾಡಿಲ್ಲ ಎಂದು ಕಾಳಿಚರಣ್ ಹೇಳಿದ್ದಾರೆ. ಗಾಂಧೀಜಿ ಸಾರ್ವಜನಿಕರಿಗೆ ದ್ರೋಹ ಬಗೆದಿದ್ದಾರೆ ಎಂದೂ ಆರೋಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ತಪ್ಪನ್ನು ಒಪ್ಪಿಕೊಳ್ಳುವ ಬಗ್ಗೆಗ್ಗೆ ಕೇಳಿದಾಗ ಅವರು ಸಾರಾಸಗಟಾಗಿ ನಿರಾಕರಿಸಿದರು. ನನಗೆ ನನ್ನ ಹೇಳಿಕೆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದರು. ಮನಸ್ಸಿನಲ್ಲಿ ಯಾವುದೋ ಒಂದು ವಿಷಯದ ಬಗ್ಗೆ ಮನಸ್ಸಿನಲ್ಲಿ ಉದ್ವೇಗವಿದ್ದಾಗ ಬೈಗುಳ ಬರುತ್ತವೆ. ಹೀಗಾಗಿ ನಾನು ಏನೇ ಹೇಳಿದರೂ ಅದು ನನ್ನ ಮನದಾಳದ ನೋವಾಗಿತ್ತು ಎಂದಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ವಿಷ್ಣುವಿನ ಅವತಾರ ಎಂದು ಪರಿಗಣಿಸುವುದಾಗಿ ಕಾಳಿಚರಣ್ ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿರುವ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವವರನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸುವುದಾಗಿ ಪ್ರಮಾಣ ಮಾಡಿರುವುದಾಗಿ ಕಾಳಿಚರಣ್ ಹೇಳಿದ್ದಾರೆ. ಮೋದಿ ಮತ್ತು ಯೋಗಿಯ ಪ್ರಯತ್ನದಿಂದ ಮಂದಿರ ನಿರ್ಮಾಣ ಆರಂಭವಾಗಿದೆ ಹೀಗಾಗಿ ನನ್ನ ಪಾಲಿಗೆ ಅವರು ವಿಷ್ಣುವಿನ ಅವತಾರವೇ ಸರಿ ಎಂದಿದ್ದಾರೆ.

ಕಾಳಿಚರಣ್ ಮಂಗಳವಾರ ಬೆಳಗ್ಗೆ ಮತ್ತೆ ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿ ಇದೇ ವಿಷಯವನ್ನು ಪುನರುಚ್ಚರಿಸಿದ್ದಾರೆ. ತಮ್ಮ ಮಾತಿಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ನೇಣುಗಂಬಕ್ಕೆ ನೇತು ಹಾಕಿದರೂ ನನ್ನ ಮಾತು ಬದಲಾಗುವುದಿಲ್ಲ. ನಾನು ಗಾಂಧಿ ವಿರೋಧಿ ಎಂದು ಕಾಳಿಚರಣ್ ಹೇಳಿದ್ದಾರೆ. ನಾನು ಗಾಂಧಿಯನ್ನು ದ್ವೇಷಿಸುತ್ತೇನೆ. ಇದಕ್ಕಾಗಿ ನನ್ನನ್ನು ಗಲ್ಲಿಗೇರಿಸಬೇಕು, ಅದು ಸಹ ಸ್ವೀಕಾರಾರ್ಹ. ವಿಡಿಯೋದಲ್ಲಿ ಕಾಳಿಚರಣ್ ಅವರು ಮಹಾತ್ಮ ಗಾಂಧಿ ಅವರನ್ನು ಕಾಂಗ್ರೆಸ್ ರಾಜವಂಶದ ಪಿತಾಮಹ ಎಂದು ಕರೆದಿದ್ದಾರೆ ಮತ್ತು ಅವರು ರಾಷ್ಟ್ರೀಯತೆಯ ಪಿತಾಮಹ ಅಲ್ಲ, ಆದ್ದರಿಂದ ಅವರನ್ನು ರಾಷ್ಟ್ರದ ಪಿತಾಮಹ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. ದೇಶ ವಿಭಜನೆಗೆ ಗಾಂಧಿಯವರನ್ನೂ ಹೊಣೆಗಾರರನ್ನಾಗಿಸಿದ್ದಾರೆ.

ವೀಡಿಯೊ ವೈರಲ್ ಆದ ಬೆನ್ನಲ್ಲೇ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಕಾಳಿಚರಣ್ ತುಂಬಾ ಧೈರ್ಯಶಾಲಿ, ಹಾಗಾದರೆ ಏಕೆ ಶರಣಾಗಬಾರದು, ಹೊರಗಿನಿಂದ ಏಕೆ ವಾಕ್ಚಾತುರ್ಯ ಮಾಡುತ್ತಿದ್ದೀರಿ ಎಂದು ಬಾಘೇಲ್ ಹೇಳಿದ್ದರು. ಧರ್ಮ ಸಂಸದ್ ಸಂಘಟಕರಿಗೂ ಉತ್ತರ ನೀಡುವಂತೆ ಮುಖ್ಯಮಂತ್ರಿ ಸವಾಲೆಸೆದಿದ್ದಾರೆ.

ಮುಖ್ಯಮಂತ್ರಿಗಳ ಎಚ್ಚರಿಕೆಯ ಬೆನ್ನಲ್ಲೇ ಧರ್ಮ ಸಂಸದ್ ಸಂಘಟಕರು ಕೂಡ ಅವರ ಹೇಳಿಕೆಯಿಂದ ದೂರ ಉಳಿದಿದ್ದಾರೆ. ನೀಲಕಂಠ ಸೇವಾ ಸಂಸ್ಥಾನದ ಸಂಸ್ಥಾಪಕ ನೀಲಕಂಠ ತ್ರಿಪಾಠಿ ಅವರು ಕಾಳಿಚರಣ್ ಹೇಳಿಕೆಯನ್ನು ಖಂಡಿಸಿದ್ದಾರೆ ಮತ್ತು ಈ ವಿಷಯದಲ್ಲಿ ಆಡಳಿತದಿಂದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ವೇದಿಕೆಯಿಂದ ಯಾವುದೇ ರಾಜಕೀಯ ಚರ್ಚೆ ನಡೆಸುವುದಿಲ್ಲ ಎಂದು ಈಗಾಗಲೇ ಎಲ್ಲಾ ಸಂತರಿಗೆ ತಿಳಿಸಲಾಗಿದೆ ಎಂದು ತ್ರಿಪಾಠಿ ಹೇಳಿದ್ದು, ಸನಾತನ ಧರ್ಮದ ಬಗ್ಗೆ ಮಾತ್ರ ಮಾತನಾಡುವಂತೆ ಕೇಳಿಕೊಂಡಿದ್ದಾರೆ. ವೇದಿಕೆಯಲ್ಲಿಯೇ ಕಾಳಿಚರಣ್‌ಗೆ ಅಡ್ಡಿಪಡಿಸಿದ್ದೆವು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಕಾಳಿಚರಣ್ ಅವನನ್ನು ಗದರಿಸಿ ಪಕ್ಕಕ್ಕೆ ಸರಿಸಿ, ಕುಳಿತುಕೊಳ್ಳಿ ಎಂದು ಹೇಳಿರುವುದಾಗಿಯೂ ತಿಳಿಸಿದ್ದಾರೆ

Follow Us:
Download App:
  • android
  • ios