Asianet Suvarna News Asianet Suvarna News

UP Elections: ಅಖಿಲೇಶ್ ಜೊತೆ ಗುರಾಣಿಯಂತಿದ್ದ ಪತ್ನಿ ಡಿಂಪಲ್ ಈ ಬಾರಿ ಮಿಸ್ಸಿಂಗ್, ಕಾರಣ ಹೀಗಿದೆ!

* ಉತ್ತರ ಪ್ರದೇಶ ಚುನಾವಣೆಗೆ ದಿನಗಣನೆ

* ಯಾವತ್ತೂ ಗುರಾಣಿಯಂತೆ ಅಖಿಲೇಶ್ ಜೊತೆಗಿರುತ್ತಿದ್ದ ಪತ್ನಿ ಡಿಂಪಲ್

* ಈ ಬಾರಿ ಚುನಾವಣಾ ಪ್ರಚಾರದಲ್ಲಿ ಡಿಂಪಲ್ ಮಾಯ

Reason Why Dimple Yadav Is Away From Akhilesh Yadav In UP Election Campaign Pod
Author
Bangalore, First Published Feb 6, 2022, 1:59 PM IST | Last Updated Feb 6, 2022, 2:00 PM IST

ಲಕ್ನೋ(ಫೆ.06): ಯುಪಿ ಚುನಾವಣೆ 2022 ರಲ್ಲಿ ಎಸ್‌ಪಿ ಮೈತ್ರಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಮಾಜವಾದಿ ಪಕ್ಷಕ್ಕೆ ಈ ಚುನಾವಣೆ ಹಲವು ವಿಧಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ. ಆದರೆ, ಅಖಿಲೇಶ್ ಯಾದವ್ ಜೊತೆಗಿನ ಪ್ರಚಾರದಲ್ಲಿ ಅವರ ಪತ್ನಿ ಡಿಂಪಲ್ ಕಾಣಿಸಿಕೊಂಡಿಲ್ಲ, ಯಾವುದೇ ಸಭೆ ಅಥವಾ ಭಾಷಣ ಮಾಡುತ್ತಿಲ್ಲ ಎಂಬುದು ಈ ಚುನಾವಣೆಯಲ್ಲಿ ಕಂಡು ಬಂದ ದೊಡ್ಡ ಬದಲಾವಣೆಯಾಗಿದೆ. ಹೆಚ್ಚಿನ ಸಭೆಗಳು ಮತ್ತು ಪತ್ರಿಕಾಗೋಷ್ಠಿಯಲ್ಲಿ ಅಖಿಲೇಶ್ ಜಯಂತ್ ಚೌಧರಿ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಯಾವತ್ತೂ ಗುರಾಣಿಯಂತೆ ಅಖಿಲೇಶ್ ಜೊತೆಗಿರುತ್ತಿದ್ದ ಪತ್ನಿ ಡಿಂಪಲ್

ಸಮಸ್ಯೆ ಕುಟುಂಬದ್ದಾಗಿರಲಿ ಅಥವಾ ಯುಪಿ ಚುನಾವಣೆಯದ್ದಾಗಿರಲಿ, ಡಿಂಪಲ್ ಯಾವಾಗಲೂ ಅಖಿಲೇಶ್ ಯಾದವ್ ಅವರೊಂದಿಗೆ ನಿಂತಿರುವುದು ಕಂಡುಬರುತ್ತದೆ. ಸಮಾಜವಾದಿ ಪಕ್ಷದಲ್ಲಿ ಅಖಿಲೇಶ್-ಶಿವಪಾಲ್ ನಡುವಿನ ದೊಡ್ಡ ಪೈಪೋಟಿ ಮುನ್ನೆಲೆಗೆ ಬಂದಾಗಲೂ ಡಿಂಪಲ್ ತನ್ನ ಪತಿಯೊಂದಿಗೆ ಗುರಾಣಿಯಂತೆ ನಿಂತಿದ್ದರು ಎಂದು ತಜ್ಞರು ಹೇಳುತ್ತಾರೆ. ಕಳೆದ ಚುನಾವಣೆಯಲ್ಲೂ ಅವರು ಸಾರ್ವಜನಿಕ ಸಭೆಗಳಲ್ಲಿ ಮತ್ತು ಜನರ ನಡುವೆ ಕಾಣಿಸಿಕೊಂಡಿದ್ದರು. ಆದಾಗ್ಯೂ, 2022 ರ ಚುನಾವಣೆಯಲ್ಲಿ, ಡಿಂಪಲ್ ಸಂಪೂರ್ಣವಾಗಿ ದೂರವಿದ್ದಾರೆ.

ಚುನಾವಣೆಯಿಂದ ದೂರ ಉಳಿಯಲು ಹಲವು ಕಾರಣಗಳನ್ನು ರಾಜಕೀಯ ತಜ್ಞರು ನೀಡುತ್ತಿದ್ದಾರೆ. ಅದೇ ಸಮಯದಲ್ಲಿ, ರಾಜ್ಯದ ಜನರು ಹಿಂದಿನ ಚುನಾವಣೆಗಳು ಮತ್ತು ಸಾಮಾನ್ಯವಾಗಿ ನಡೆದ ಕೆಲವು ಘಟನೆಗಳನ್ನು ಉಲ್ಲೇಖಿಸುತ್ತಿದ್ದಾರೆ. ಆದರೆ ಮಹಿಳಾ ವಿಭಾಗದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿರುವ ಡಿಂಪಲ್ ಮಹಿಳಾ ಅಭ್ಯರ್ಥಿಗಳ ಹೆಸರು ಘೋ‍ಷಿಸುವಾಗಲೂ ಕಾಣಿಸುತ್ತಿಲ್ಲ ಏಕೆ ಎಂಬುದು ಎಲ್ಲರ ಮನದಲ್ಲಿ ಮೂಡಿರುವ ಪ್ರಶ್ನೆ. ಈ ನಿಟ್ಟಿನಲ್ಲಿ ಯೋಚಿಸಿದಾಗ ಹಲವು ಪ್ರಮುಖ ಅಂಶಗಳೂ ಹೊರಬೀಳುತ್ತಿವೆ. ಈ ಪ್ರಮುಖ ಕಾರಣಗಳು ಯಾವುವು? ಎಂಬ ಬಗ್ಗೆ ಒಂದಷ್ಟು ಮಾಹಿತಿ

ಹುಡ್ಡಾಂಗ್ನಲ್ಲಿ ಅಸಮಾಧಾನ

ಚುನಾವಣಾ ಪ್ರಚಾರದಿಂದ ಡಿಂಪಲ್ ದೂರವಾಗಲು ಪ್ರಮುಖ ಕಾರಣವೆಂದರೆ ಗಲಭೆಗಳಿಂದ ಉಂಟಾಗಿರುವ ಅಸಮಾಧಾನ ಎಂದು ಹೇಳಲಾಗಿದೆ. 2017ರ ಫೆಬ್ರವರಿಯಲ್ಲಿ ನಡೆದ ರ್ಯಾಲಿಯಲ್ಲಿ 'ನೀವು ಚೀರಾಡಿದರೆ ನನಗೆ ಭಯವಾಗುತ್ತದೆ. ಶಿಸ್ತಿನಲ್ಲಿ ಇರಿ ಇಲ್ಲದಿದ್ದರೆ ಅಖಿಲೇಶ್ ಹೇಳ್ತಾರೆ ಎಂದು ವೇದಿಕೆಯಿಂದಲೇ ಹೇಳಿದ್ದರು.

ಕುಟುಂಬದ ಜವಾಬ್ದಾರಿಯನ್ನು ನೋಡಿಕೊಳ್ಳುವುದು

ಯುಪಿ ಚುನಾವಣೆಯ ಸಮಯದಲ್ಲಿ ಅಖಿಲೇಶ್ ಅವರು ಪಕ್ಷ ಮತ್ತು ಮೈತ್ರಿಕೂಟದ ಪ್ರಚಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಡಿಂಪಲ್ ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ಡಿಂಪಲ್ ಮನೆಯಲ್ಲೇ ಉಳಿದುಕೊಂಡು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ ಮತ್ತು ಎಲ್ಲಾ ವಿಷಯಗಳ ಜವಾಬ್ದಾರಿ ವಹಿಸಿದ್ದಾರೆನ್ನಲಾಗಿದೆ.

ಡಿಂಪಲ್ ಏಕಾಂಗಿಯಾಗುವ ಸಾಧ್ಯತೆ

ಅಖಿಲೇಶ್ ಅವರು 2022 ರ ಯುಪಿ ಚುನಾವಣೆಯಲ್ಲಿ ಜಯಂತ್ ಚೌಧರಿ ಅವರೊಂದಿಗೆ ಪ್ರಚಾರ ಮಾಡುತ್ತಿದ್ದಾರೆ. ಈ ಹಿಂದೆ ಡಿಂಪಲ್ ಅವರು ಅಖಿಲೇಶ್ ಅವರೊಂದಿಗೆ ಪ್ರಚಾರಕ್ಕೆ ಹೋಗುತ್ತಿದ್ದರು. ಆದರೆ ಈ ಬಾರಿ ಅಖಿಲೇಶ್ ಅವರು ಜಯಂತ್ ಮತ್ತು ಮೈತ್ರಿಕೂಟದ ಇತರ ದೊಡ್ಡ ಮುಖಗಳ ಜೊತೆಗೆ ಹೆಚ್ಚಿನ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಡಿಂಪಲ್ ಪ್ರಚಾರಕ್ಕೆ ಹೋದರೆ ಒಂಟಿಯಾಗಿಗಿರಬೇಕಾಗುತ್ತದೆ. ಡಿಂಪಲ್ ಏಕಾಂಗಿಯಾಗಿ ಪ್ರಚಾರಕ್ಕೆ ಹೋಗುವುದು ಅಖಿಲೇಶ್‌ಗೂ ಇಷ್ಟವಿಲ್ಲ.

ಅಪರ್ಣಾ ಯಾದವ್ ಕೂಡಾ ಕಾರಣ

ಡಿಂಪಲ್ ಪ್ರಚಾರದಿಂದ ದೂರವಿರಲು ಅಪರ್ಣಾ ಯಾದವ್ ಪ್ರಮುಖ ಕಾರಣ ಎಂದು ಹೇಳಲಾಗಿದೆ. ವಾಸ್ತವವಾಗಿ, ಅಪರ್ಣಾ ಅವರು ಬಿಜೆಪಿ ಪರ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಹೀಗಿರುವಾಗ ಡಿಂಪಲ್ ಕೂಡ ಚುನಾವಣಾ ಪ್ರಚಾರಕ್ಕೆ ಬಂದರೆ ಇಬ್ಬರೂ ಸೊಸೆಯಂದಿರು ಮುಖಾಮುಖಿಯಾಗುವ ಸಾಧ್ಯತೆ ಇದೆ.

ಕೊರೋನಾ ಕೂಡ ಪ್ರಮುಖ ಕಾರಣ

ಡಿಂಪಲ್ ಚುನಾವಣಾ ಪ್ರಚಾರದಿಂದ ದೂರ ಉಳಿಯಲು ಕೊರೋನಾ ಕೂಡ ಒಂದು ಪ್ರಮುಖ ಕಾರಣ. ಇದೀಗ ಅಖಿಲೇಶ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ಡಿಂಪಲ್ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಕೋವಿಡ್ ಪ್ರಕರಣಗಳನ್ನು ನೋಡಿ, ಡಿಂಪಲ್ ತನ್ನ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿದ್ದಾರೆ.

ಯುಪಿ ಚುನಾವಣಾ ಮಾಹಿತಿ: 

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2022 ರಲ್ಲಿ 403 ವಿಧಾನಸಭಾ ಸ್ಥಾನಗಳಿಗೆ ಮೊದಲ ಹಂತದ ಮತದಾನ ಫೆಬ್ರವರಿ 10 ರಂದು, ಎರಡನೇ ಹಂತ ಫೆಬ್ರವರಿ 14 ರಂದು, ಮೂರನೇ ಹಂತ ಫೆಬ್ರವರಿ 20 ರಂದು, ನಾಲ್ಕನೇ ಹಂತ ಫೆಬ್ರವರಿ 23 ರಂದು, ಐದನೇ ಹಂತ ಫೆಬ್ರವರಿ 27 ರಂದು, ಆರನೇ ಮಾರ್ಚ್ 3 ರಂದು ಹಂತ ಮತ್ತು ಕೊನೆಯ ಹಂತ ಮಾರ್ಚ್ 7 ರಂದು ಮತದಾನ. ಯುಪಿಯಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Latest Videos
Follow Us:
Download App:
  • android
  • ios