ದೇವಾಲಯದ ಭೂಮಿಗಾಗಿ ಅರ್ಚಕನಿಗೆ ಬೆಂಕಿ ಇಟ್ಟರು!| ರಾಜಸ್ಥಾನದಲ್ಲಿ ಭೂಗಳ್ಳರ ಘೋರ ಕೃತ್ಯ

 ಜೈಪುರ(ಅ.10): ದೇವಾಲಯದ ಭೂಮಿಯ ಮೇಲಿನ ಆಸೆಗೆ ಐವರು ದುರುಳರು ಅರ್ಚಕರೊಬ್ಬರನ್ನು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಂದಿರುವ ಭೀಕರ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ

Add Asianetnews Kannada as a Preferred SourcegooglePreferred

ಸುಟ್ಟಗಾಯಗಳಿಂದ ತೀವ್ರವಾಗಿ ಗಾಯಗೊಂಡಿದ್ದ ಬುಕ್ನಾ ಗ್ರಾಮದಲ್ಲಿರುವ ರಾಧಾಕೃಷ್ಣ ದೇವಾಲಯದ ಅರ್ಚಕ ಬಾಬುಲಾಲ್‌ ವೈಷ್ಣವ್‌ ಚಿಕಿತ್ಸೆ ಫಲಿಸದೇ ಜೈಪುರದ ಎಸ್‌ಎಂಎಸ್‌ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನರಾಗಿದ್ದಾರೆ.

"

ದೇವಾಲಯಕ್ಕೆ ಸಂಬಂಧಿಸಿದ 5.2 ಎಕರೆ ಜಮೀನನ್ನು ಬಾಬುಲಾಲ್‌ ನೋಡಿಕೊಳ್ಳುತ್ತಿದ್ದರು. ಈ ಜಮೀನಿನ ಪಕ್ಕದಲ್ಲಿ ತಮಗಾಗಿ ಒಂದು ಸಣ್ಣ ಮನೆ ನಿರ್ಮಿಸಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಈ ಜಮೀನನ್ನು ಅತಿಕ್ರಮಿಸಲು ಅದೇ ಗ್ರಾಮದ ಇನ್ನೊಂದು ಗುಂಪು ಬಯಸಿತ್ತು. ಈ ಕಾರಣಕ್ಕೆ ಕಲಹ ಏರ್ಪಟ್ಟಿತ್ತು. ಬುಧವಾರ ಐವರು ಆರೋಪಿಗಳು ಅರ್ಚಕರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದರು.

ಆಸ್ಪತ್ರೆಗೆ ದಾಖಲಾಗಿದ್ದ ಅವರು ಗುರುವಾರ ನಿಧನರಾಗಿದ್ದಾರೆ. ಘಟನೆ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.