Asianet Suvarna News Asianet Suvarna News

ವಧುವಿಗೆ ಗಿಫ್ಟ್ ನೀಡಿ ವರನ ಮೇಲೆ ಚಾಕುವಿನಿಂದ ದಾಳಿ ಮಾಡಿದ ಮದುಮಗಳ ಎಕ್ಸ್ ಬಾಯ್‌ಫ್ರೆಂಡ್

ತನ್ನ ಮಾಜಿ ಗೆಳತಿಯ ಮದುವೆಗೆ ಬಂದ ಭಗ್ನ ಪ್ರೇಮಿಯೊಬ್ಬ ಮದುಮಗಳಾಗಿ ನಿಂತಿದ್ದ ತನ್ನ ಗೆಳತಿಗೆ ಗಿಫ್ಟ್ ನೀಡಿ ಆಕೆಯನ್ನು ವರಿಸಲು ಮುಂದಾಗಿದ್ದ ವರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಆಘಾತಕಾರಿ ಘಟನೆ ರಾಜಸ್ಥಾನದ ಬಿಲ್ವಾರದಲ್ಲಿ ನಡೆದಿದೆ.

Rajasthan Groom attacked by brides ex Boyfriend with a knife in wedding stage at Bhilwara video viral akb
Author
First Published May 21, 2024, 2:40 PM IST | Last Updated May 21, 2024, 2:48 PM IST

ಬಿಲ್ವಾರ: ತನ್ನ ಮಾಜಿ ಗೆಳತಿಯ ಮದುವೆಗೆ ಬಂದ ಭಗ್ನ ಪ್ರೇಮಿಯೊಬ್ಬ ಮದುಮಗಳಾಗಿ ನಿಂತಿದ್ದ ತನ್ನ ಗೆಳತಿಗೆ ಗಿಫ್ಟ್ ನೀಡಿ ಆಕೆಯನ್ನು ವರಿಸಲು ಮುಂದಾಗಿದ್ದ ವರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಆಘಾತಕಾರಿ ಘಟನೆ ರಾಜಸ್ಥಾನದ ಬಿಲ್ವಾರದಲ್ಲಿ ನಡೆದಿದೆ. ಈ ಬೆಚ್ಚಿ ಬೀಳಿಸುವ ದೃಶ್ಯದ ವೀಡಿಯೋ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ವರ ಮದುವೆ ದಿನ ಧರಿಸುವಂತಹ ಸಂಪ್ರದಾಯಿಕ ವಸ್ತುಗಳಾದ ಪಗಡಿ, ಬಾಸಿಂಗ, ಪೇಟ ಧರಿಸಿದಿದ್ದರಿಂದಾಗಿ ಅದೃಷ್ಟವಶಾತ್ ಮದುಮಗನ ಜೀವ ಉಳಿದಿದೆ. ಗಂಭೀರ ಗಾಯಗಳಿಂದ ಆತ ಪಾರಾಗಿದ್ದಾನೆ. 

ರಾಜಸ್ಥಾನದ ಚಿತ್ತೋರ್‌ಘಡ ಜಿಲ್ಲೆಯ ಬಿಲ್ವಾರದಲ್ಲಿ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮದುವೆ ವೀಡಿಯೋದಲ್ಲಿ ಕಾಣಿಸುವಂತೆ ತರುಣ ಮದುಮಕ್ಕಳು ನಿಂತಿರುವ ಸ್ಟೇಜ್ ಮೇಲೆ ಏರಿದ್ದು,  ಮದುಮಕ್ಕಳ ಬಳಿ ಹೋಗಿ ಮೊದಲಿಗೆ ವಧುವಿಗೆ ಉಡುಗೊರೆಯೊಂದನ್ನು ನೀಡುತ್ತಾನೆ. ಇದಾದ ನಂತರ ಆತ ಮದುಮಗನ ಬಳಿ ತಿರುಗಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿ ಚಾಕುವಿನಿಂದ ಹಲ್ಲೆ ಮಾಡುತ್ತಾನೆ. ಆದರೆ ಅದೃಷ್ಟವಶಾತ್ ಆತ ಮಧುಮಗ ಧರಿಸುವ ಪೇಟ ಧರಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಈ ವೇಳೆ ವಧು ಈ ಯುವಕನನ್ನು ತಡೆಯಲು ಪ್ರಯತ್ನಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. 

ಮಾಜಿ ಗರ್ಲ್ ಫ್ರೆಂಡ್ ಕೆಂಡಾಮಂಡಲ… ಭಯಕ್ಕೆ ಬೆಡ್ ರೂಮ್ ಸೇರಿದ ಬಾಯ್ ಫ್ರೆಂಡ್

ಹೀಗೆ ವರನ ಮೇಲೆ ದಾಳಿ ಮಾಡಿದ ಯುವಕನನ್ನು ಶಂಕರ್‌ ಲಾಲ್ ಭಾರ್ತಿ ಎಂದು ಗುರುತಿಸಲಾಗಿದೆ. ಈತ ವಧು ವಾಸ ಮಾಡುವ ಊರಿನವನೇ ಆಗಿದ್ದಾನೆ.  ಎರಡು ವರ್ಷಗಳ ಈ ಹಿಂದೆ ಒಂದೇ ಶಾಲೆಯಲ್ಲಿ  ಈ ಇಬ್ಬರು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರಿಂದ  ಇವರಿಬ್ಬರಿಗೂ ಮೊದಲಿನಿಂದಲೂ ಪರಿಚಯವಿತ್ತು.  

ಘಟನೆಗೆ ಸಂಬಂಧಿಸಿದಂತೆ ವಧುವಿನ ಸೋದರ ವಿಶಾಲ್ ಸೈಲ್ ಪೊಲೀಸರಿಗೆ ದೂರು ನೀಡಿದ್ದು,  ಅದರ ಪ್ರಕಾರ, ತನ್ನ ಸೋದರಿ ಕ್ರಿಶಾನ್ ಮೇ 12 ರಂದು ಮಹೇಂದ್ರ ಸೇನ್ ಎಂಬಾತನನ್ನು ಮದುವೆಯಾಗಿದ್ದು, ಮದುವೆ ದಿನ ಶಂಕರ್‌ ಲಾಲ್  ಮದುವೆ ನಡೆಯುತ್ತಿದ್ದ ವೇದಿಕೆಗೆ ಹೋಗಿ ವಧುವಿಗೆ ಗಿಫ್ಟ್ ನೀಡಿ ಫೋಟೋಗೂ ಪೋಸ್ ಕೊಟ್ಟಿದ್ದಾನೆ. ನಂತರ ಇದ್ದಕ್ಕಿದ್ದಂತೆ ಆತ ವರನ ಮೇಲೆ ಸ್ಟೇಜ್‌ನಲ್ಲೇ ಹಲ್ಲೆ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. 

ಆರೋಪಿ ಶಂಕರ್ ವರನ ಮೇಲೆ ದಾಳಿ ಮಾಡಿ ಬಳಿಕ ಪರಾರಿಯಾಗಿದ್ದಾನೆ. ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಆತನನ್ನು ಬೆನ್ನಟ್ಟಿದರೂ ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಗೆ ಪೊಲೀಸರು  ತಂಡ ರಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮದ್ವೆಯಾದ್ರೂ ಎಕ್ಸ್​ ಬಾಯ್​ಫ್ರೆಂಡ್​ ಜತೆಗಿನ ಸವಿಸವಿ ನೆನಪು ಮೆಲುಕು ಹಾಕಿದ್ರು ಈ ಬಾಲಿವುಡ್​ ನಟಿಯರು!

 

Latest Videos
Follow Us:
Download App:
  • android
  • ios