ಕೋಟಾ ಸರ್ಕಾರಿ ಆಸ್ಪತ್ರೆಯಲ್ಲಿ 77 ನವಜಾತ ಶಿಶುಗಳ ಮರಣ| ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅಮಾನವೀಯ ಹೇಳಿಕೆ|  'ಹುವಾ ತೋ ಹುವಾ'(ಆಗಿದ್ದಾಯ್ತು) ಎಂದು ಉಡಾಫೆಯ ಉತ್ತರ ನೀಡಿದ ಅಶೋಕ್ ಗೆಹ್ಲೋಟ್| 'ಮಕ್ಕಳು ಪ್ರತಿವರ್ಷ ಸಾಯುತ್ತಾರೆ ಇದರಲ್ಲೇನು ವಿಶೇಷ..' ಎಂದು ಪ್ರಶ್ನಿಸಿದ ಗೆಹ್ಲೋಟ್| ಅಶೋಕ್ ಗೆಹ್ಲೋಟ್ ಹೇಳಿಕೆಯನ್ನು ಖಂಡಿಸಿದ ಪ್ರತಿಪಕ್ಷ ಬಿಜೆಪಿ| ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಸಿಎಂ|

ಕೋಟಾ(ಡಿ.28): ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ 10 ನವಜಾತ ಶಿಶುಗಳ ಅಕಾಲಿಕ ಮರಣದ ಕುರಿತು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ 'ಹುವಾ ತೋ ಹುವಾ'(ಆಗಿದ್ದಾಯ್ತು) ಎಂದು ಉಡಾಫೆಯ ಪ್ರತಿಕ್ರಿಯೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋಟಾ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 10ಕ್ಕೂ ಅಧಿಕ ನವಜಾತ ಶಿಶುಗಳು ಮರಣ ಹೊಂದಿದ್ದು, ಇದಕ್ಕೆ ರಾಜಸ್ಥಾನ ಸಿಎಂ ನೀಡಿರುವ ಪ್ರತಿಕ್ರಿಯೆ ತೀವ್ರ ವಿವಾದ ಸೃಷ್ಟಿಸಿದೆ.

Scroll to load tweet…

'ಮಕ್ಕಳು ಪ್ರತಿವರ್ಷ ಸಾಯುತ್ತಾರೆ ಇದರಲ್ಲೇನು ವಿಶೇಷ..' ಎಂದು ಸಿಎಂ ಅಶೋಕ್ ಗೆಹ್ಲೋಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ರಾಜಸ್ಥಾನದ ಆಸ್ಪತ್ರೇಲಿ 48 ಗಂಟೆಯಲ್ಲಿ 10 ನವಜಾತ ಮಕ್ಕಳ ಸಾವು!

ಇನ್ನು ಅಶೋಕ್ ಗೆಹ್ಲೋಟ್ ಹೇಳಿಕೆಯನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಇದು ಅಮಾನವೀಯ ಹೇಳಿಕೆ ಎಂದು ಕಿಡಿಕಾರಿದೆ.

Scroll to load tweet…

ಸದ್ಯ ಘಟನೆಯ ಕುರಿತು ವಿಸ್ತೃತ ತನಿಖೆಗೆ ಆದೇಶ ನೀಡಿರುವ ಅಶೋಕ್ ಗೆಹ್ಲೋಟ್, ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.