* ರಾಜಸ್ಥಾನದ ಪುಷ್ಕರ್‌ನಲ್ಲಿ ಶಾಕಿಂಗ್ ಘಟನೆ* ಮೂರೂವರೆ ಲಕ್ಷ ಪಡೆದು ಬಂದ ಸೊಸೆ* ಅತ್ತೆ ಮಾವನ ಕೂಡಿ ಹಾಕಿ ನಾದಿನಿ ಜೊತೆ ಎಸ್ಕೇಪ್

ಜೈಪುರ(ಜೂ.13): ರಾಜಸ್ಥಾನದ ಪುಷ್ಕರ್‌ನಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ನವವಧು ಅಪ್ರಾಪ್ತ ನಾದಿನಿ ಜೊತೆ ಓಡಿ ಹೋಗಿದ್ದಾಳೆ. ಮೇ 27 ರಂದು ಜಾರ್ಖಂಡ್‌ನ ಜುಮ್ಮಾ ರಾಮಗಢ ನಿವಾಸಿ 25 ವರ್ಷದ ಪೂಜಾ ಅವರು ಪುಷ್ಕರ್‌ನ ಪಂಚಕುಂಡ್ ರಸ್ತೆಯ ನಿವಾಸಿ 28 ವರ್ಷದ ಯತು ಶ್ರೀವಾಸ್ತವ ಅವರನ್ನು ವಿವಾಹವಾಗಿದ್ದರು ಎಂದು ಹೇಳಲಾಗುತ್ತಿದೆ.

Add Asianetnews Kannada as a Preferred SourcegooglePreferred

ಯತುವಿನ ಮದುವೆಗಾಗಿ ಕುಟುಂಬದವರು ಕಳೆದ 4 ತಿಂಗಳಿಂದ ಮಧ್ಯವರ್ತಿ ಪಂಕಜ್ ಕುಮಾರ್ ಜೊತೆ ಸಂಪರ್ಕದಲ್ಲಿದ್ದರು. ಪಂಕಜ್ ಕುಮಾರ್ ಕೂಡ ಜಾರ್ಖಂಡ್ ನಿವಾಸಿ. ಮದುವೆ ಖರ್ಚಿಗಾಗಿ ಶ್ರೀವಾಸ್ತವ್ ಕುಟುಂಬ ಪಂಕಜ್ ಗೆ 3 ಲಕ್ಷ 50 ಸಾವಿರ ರೂ ನೀಡಿತ್ತು. .

ಮದುವೆ ವಿಜೃಂಭಣೆಯಿಂದ ನಡೆಯಿತು. ಮದುವೆಯಾದ ಕೆಲ ದಿನಗಳ ನಂತರ ಪತಿ ಯಾತು ಕೆಲಸದ ನಿಮಿತ್ತ ಹೊರಗೆ ಹೋಗಿದ್ದ. ಹೀಗಾಗಿ ಜೂನ್ 10 ರಂದು ವಧು ಪೂಜಾ ತನ್ನ 13 ವರ್ಷದ ನಾದಿನಿಯನ್ನು ಮನೆಯಲ್ಲಿ ಯಾರಿಗೂ ತಿಳಿಸದೆ ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾಳೆ. ಇದಾದ ಬಳಿಕ ಮರಳಿ ಬಂದಿಲ್ಲ. ಅಲ್ಲದೇ ಅತ್ತೆ ಶಶಿಬಾಲಾ ಹಾಗೂ ಮಾವ ದಯಾಪ್ರಕಾಶ್ ಅವರನ್ನು ಬೀಗ ಹಾಕಿ ಕೊಠಡಿಯಲ್ಲಿ ಕೂಡಿ ಹಾಕಿದ್ದಾಳೆ.

ಮಾವ ದಯಾ ಪ್ರಕಾಶ್ ಮನೆಯಲ್ಲಿ ಹುಡುಕಾಟ ನಡೆಸಿದಾಗ ಮದುವೆ ಸಂದರ್ಭದಲ್ಲಿ ವಧುವಿನ ಬಳಿಯಿದ್ದ 5 ತೊಲ ಚಿನ್ನಾಭರಣ, ಮೊಬೈಲ್, ಕ್ಯಾಮರಾ ನಾಪತ್ತೆಯಾಗಿದ್ದವು. ಕುಟುಂಬದ ಸದಸ್ಯರು ಮೊದಲು ಸೊಸೆ ಮತ್ತು ಮಗಳನ್ನು ತಮ್ಮ ಮೂಲಗಳಿಂದ ಹುಡುಕಲು ಯತ್ನಿಸಿದರು. ಇಬ್ಬರೂ ಸಿಗದಿದ್ದಾಗ ಮಾವ ಪುಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಧು ಪೂಜಾ ಮತ್ತು ನಾದಿನಿಯ ಪತ್ತೆಗಾಗಿ ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗಿದೆ ಎಂದು ಪುಷ್ಕರ್ ಪೊಲೀಸ್ ಠಾಣೆಯ ಎಎಸ್‌ಐ ಅಮರಚಂದ್ ತಿಳಿಸಿದ್ದಾರೆ. ಇದರೊಂದಿಗೆ ಪುಷ್ಕರ್ ಬಸ್ ನಿಲ್ದಾಣ ಮತ್ತು ಅಜ್ಮೀರ್ ರೈಲ್ವೆ ನಿಲ್ದಾಣದಲ್ಲಿ ಛಾಯಾಚಿತ್ರಗಳ ಮೂಲಕವೂ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರ ಇದುವರೆಗಿನ ತನಿಖೆಯಲ್ಲಿ ಪೂಜಾ ಮತ್ತು ಅತ್ತಿಗೆ ಜಾರ್ಖಂಡ್ ಗೆ ತೆರಳಿರುವ ವಿಷಯ ಬಯಲಿಗೆ ಬರುತ್ತಿದೆ. ಈ ಸಂಬಂಧ ಪುಷ್ಕರ್ ಪೊಲೀಸರು ಜುಮ್ಮಾ ರಾಮಗಢ ಪೊಲೀಸರನ್ನು ಕೂಡ ಸಂಪರ್ಕಿಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.

ವರ ಯತು ವಿಕಲಚೇತನ ಎಂದು ಹೇಳಲಾಗುತ್ತಿದೆ. ಆತನಿಗೆ ಮಾತನಾಡಲು ಆಗುವುದಿಲ್ಲ, ಕಿವಿಯೂ ಕೇಳುವುದಿಲ್ಲ ಎನ್ನಲಾಗಿದೆ. ಈ ಕಾರಣಕ್ಕಾಗಿ ಶ್ರೀವಾಸ್ತವ್ ಕುಟುಂಬದವರು ಮದುವೆಗಾಗಿ ಪಂಕಜ್ ಕುಮಾರ್ ಜೊತೆ ಸಂಪರ್ಕಕ್ಕೆ ಬಂದಿದ್ದರು. ಪಂಕಜ್ ತನ್ನ ಅತ್ತಿಗೆ ರಕ್ಷಾ ಮತ್ತು ಪರಿಚಯಸ್ಥ ಜಾರ್ಖಂಡ್ ನಿವಾಸಿ ಊರ್ಮಿಳಾ ಅವರನ್ನು ಪರಿಚಯಿಸಿ ಮದುವೆಯಾಗಲು ನಿರ್ಧರಿಸಿದ್ದರು. ತಮ್ಮ 13 ವರ್ಷದ ಮಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಶ್ರೀವಾಸ್ತವ್ ಕುಟುಂಬ ಸ್ಥಳೀಯ ಆಡಳಿತ ಮತ್ತು ಪೊಲೀಸರಿಗೆ ಮನವಿ ಮಾಡಿದೆ. ಈಗ ವಧು ಓಡಿ ಹೋಗಿದ್ದಾಳೆಯೇ ಅಥವಾ ಇನ್ನೇನಾದರೂ ಇದೆಯಾ ಎಂಬುವುದು ವಧು ಪೂಜಾ ಪತ್ತೆಯಾದ ಬಳಿಕವೇ ತಿಳಿಯಲಿದೆ.