ಫೋನ್ ಹ್ಯಾಕ್ ಮಾಡಲು ಸರ್ಕಾರದ ಪ್ರಯತ್ನ, ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರ ಆರೋಪ!
ವಿರೋಧ ಪಕ್ಷಗಳ ನಾಯಕರು ಮಂಗಳವಾರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರ ತಮ್ಮ ಫೋನ್ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಹೇಳಿದ್ದಾರೆ.

ನವದೆಹಲಿ (ಅ.31): ಹಣ ಪಡೆದು ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಟಿಎಂಸಿ ಸಂಸದ ಮಹುವಾ ಮೊಯಿತ್ರಾ, ಕೇಂದ್ರ ಸರ್ಕಾರ ತನ್ನ ಫೋನ್ ಮತ್ತು ಇಮೇಲ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ದೇಶದ ಗೃಹ ಸಚಿವಾಲಯಕ್ಕೆ ಬೇರೆ ಕೆಲಸವಿಲ್ಲ ಎಂದು ಬರೆದಿರುವ ಮೊಯಿತ್ರಾ, ಅದಾನಿ ಮತ್ತು ಪ್ರಧಾನಮಂತ್ರಿ ಕಚೇರಿಯ ಗೂಂಡಾಗಳ ಭಯವನ್ನು ನೋಡಿ ನನಗೆ ಕರುಣೆ ಬರುತ್ತಿದೆ ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್, ಪವನ್ ಖೇಡಾ, ಎಎಪಿ ಸಂಸದ ರಾಘವ್ ಚಡ್ಡಾ, ಶಿವಸೇನೆ (ಉದ್ಧವ್ ಬಣ) ಸಂಸದ ಪ್ರಿಯಾಂಕಾ ಚತುರ್ವೇದಿ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಕೂಡ ತಮ್ಮ ಮೊಬೈಲ್ಗಳಿಗೂ ಹ್ಯಾಕ್ ಕುರಿತಾದ ಅಲರ್ಟ್ ಬಂದಿದೆ ಎಂದು ಹೇಳಿದ್ದಾರೆ. ಕೆಲ ಸಮಯದ ನಂತರ ರಾಹುಲ್ ಗಾಂಧಿ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ನನ್ನ ಕಚೇರಿಯಲ್ಲಿ ಎಲ್ಲರಿಗೂ ಈ ಎಚ್ಚರಿಕೆ ಬಂದಿದೆ ಎಂದಿದ್ದಾರೆ. ಈ ಕುರಿತಾಗಿ ಕಾಂಗ್ರೆಸ್ ಕೂಡ ಒಂದು ಲಿಸ್ಟ್ ಮಾಡಿದೆ. ಪವನ್ ಖೇಡಾ, ಸುಪ್ರಿಯಾ, ಪ್ರಿಯಾಂಕಾ ಸೇರಿದಂತೆ ಎಲ್ಲರಿಗೂ ಈ ರೀತಿಯ ಅಲರ್ಟ್ ಮಾಡಿದೆ. ಸರ್ಕಾರಕ್ಕೆ ಬೇಕಿದ್ದಲ್ಲಿ ನನ್ನ ಫೋನ್ ತೆಗೆದುಕೊಳ್ಳಬಹುದು. ಆದರೆ, ನಾನು ಅದಕ್ಕೆ ಹೆದರೋದಿಲ್ಲ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಟ್ವೀಟ್ನಲ್ಲಿ ಕೆಲವು ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿರುವ ಮಹುವಾ ಮೊಯಿತ್ರಾ, ದೇಶದ ಗೃಹ ಸಚಿವಾಲಯಕ್ಕೆ ಬೇರೆ ಕೆಲಸವಿಲ್ಲ ಎನ್ನುವುದು ಗೊತ್ತಾಗುತ್ತಿದೆ. ಪ್ರಿಯಾಂಕಾ ಚತುರ್ವೇದಿ ನೀವು, ನಾನು ಮತ್ತು ಇಂಡಿ ಮೈತ್ರಿಕೂಟದ ಇತರ ಮೂವರು ನಾಯಕರಿಗೆ ಈ ಇದೇ ರೀತಿಯ ಸಂದೇಶಗಳು ಬಂದಿದೆ ಎಂದು ಮಹುವಾ ಬರೆದಿದ್ದಾರೆ. ಇದಾದ ನಂತರ, ಅಖಿಲೇಶ್ ಯಾದವ್ ಅವರಿಗೂ ಅಂತಹ ಸಂದೇಶ ಬಂದಿದೆ ಎಂದು ಮಹುವಾ ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ. ಅದೇ ಸಮಯದಲ್ಲಿ, ರಾಹುಲ್ ಗಾಂಧಿಯವರ ಕಚೇರಿಯ ಅನೇಕ ಜನರಿಗೆ ಇಂತಹ ಅಲರ್ಟ್ಗಳು ಬಂದಿವೆ. ಫೋನ್ ಟ್ಯಾಪಿಂಗ್ ಮಾಡುವ ಮೂಲಕ ದೇಶವನ್ನು ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ನಾನು ಅಧಿಕೃತವಾಗಿ ಪತ್ರ ಬರೆದಿದ್ದೇನೆ ಎಂದು ಮಹುವಾ ಟ್ವೀಟ್ ಮಾಡಿದ್ದಾರೆ, ವಿರೋಧ ಪಕ್ಷದ ಸಂಸದರನ್ನು ರಕ್ಷಿಸುವ ಅವರ ಕರ್ತವ್ಯವನ್ನು ಮಾಡುವಂತೆ ಕೇಳಿಕೊಳ್ಳುತ್ತೇನೆ. ಅಲ್ಲದೆ ಕೂಡಲೇ ಗೃಹ ಸಚಿವಾಲಯದ ಅಧಿಕಾರಿಗಳಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿ. ಈ ಬಗ್ಗೆ ವಿಶೇಷಾಧಿಕಾರ ಸಮಿತಿ ಗಮನಹರಿಸಬೇಕಿದೆ. ಅಶ್ವಿನಿ ವೈಷ್ಣವ್ ಅವರೇ ಇದು ನಿಜವಾದ ಕಳ್ಳತನ, ಇದರ ಬಗ್ಗೆ ನೀವು ಯೋಚನೆ ಮಾಡಬೇಕಿದೆ ಎಂದಿದ್ದಾರೆ.
ಮಹುವಾ ಟ್ವೀಟ್ ಮಾಡಿದ ಸ್ವಲ್ಪ ಸಮಯದ ನಂತರ, ಶಶಿ ತರೂರ್ ಅವರು ಕೆಲವು ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದಾರೆ ಮತ್ತು ನಾನು ಆಪಲ್ ಐಡಿಯಿಂದ ಈ ಸ್ಕ್ರೀನ್ಶಾಟ್ಗಳನ್ನು ಸ್ವೀಕರಿಸಿದ್ದೇನೆ ಎಂದು ಬರೆದಿದ್ದಾರೆ, ಅದನ್ನು ನಾನು ಪರಿಶೀಲಿಸಿದ್ದೇನೆ. ಈ ಇಮೇಲ್ಗಳು ಸರಿಯಾಗಿವೆ. ಕೆಲವು ಕೆಲಸವಿಲ್ಲದ ಸರ್ಕಾರಿ ನೌಕರರು ನನ್ನಂತಹ ತೆರಿಗೆದಾರರ ಮೇಲೆ ಬೇಹುಗಾರಿಕೆಯಲ್ಲಿ ನಿರತರಾಗಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಅವರಿಗೆ ಬೇರೆ ಕೆಲಸವಿಲ್ಲ ಎಂದು ಬರೆದುಕೊಂಡಿದ್ದಾರೆ.
ಮಣಿಪುರಕ್ಕಿಂತ ಇಸ್ರೇಲ್ ಮೇಲೆ ಮೋದಿಗೆ ಕಾಳಜಿ ರಾಹುಲ್ ವಾಗ್ದಾಳಿ, ಬೆತ್ತಲೆ ಮೆರವಣಿಗೆ 7 ಜನರ ವಿರುದ್ಧ ಕೇಸ್
ಆಪಲ್ ಪ್ರತಿಕ್ರಿಯೆ ಬರುವವರೆಗೂ ಯಾಕೆ ಕಾಯಬಾರದು: ಇನ್ನೊಂದೆಡೆ ಬಿಜೆಪಿ ಕೂಡ ಈ ಬಗ್ಗೆ ವಿರೋದ ಪಕ್ಷದವರನ್ನು ಟೀಕಿಸಿದೆ. ಈ ಹಿಂದೆಯೂ ಅದೇ ರೀತಿಯ ಹಲವಾರು ವಿಚಾರಗಳಲ್ಲಿ ಸರ್ಕಾರವನ್ನು ಟೀಕೆ ಮಾಡಲಾಗಿತ್ತು. ಬಳಿಕ ಅಂಥ ಯಾವುದೇ ವಿಚಾರವಿಲ್ಲ ಅನ್ನೋದು ಗೊತ್ತಾಗಿತ್ತು. ಈ ಬಾರಿಯೂ ಕೂಡ ಆಪಲ್ನಿಂದ ಅಧಿಕೃತವಾಗಿ ಹೇಳಿಕೆ ಬರುವವರೆಗೂ ಇವರು ಯಾಕೆ ಕಾಯಬಾರದು ಎಂದು ಪ್ರಶ್ನೆ ಮಾಡಿದೆ.
ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಭಯ ಹುಟ್ಟಿರುವುದು ಪೋಸ್ಟರ್ನಿಂದ ಸ್ಪಷ್ಟ: ಡಿಕೆಶಿ
ಆಪಲ್ನಿಂದ ಸ್ಪಷ್ಟನೆ: ಯಾವುದೇ ನಿರ್ದಿಷ್ಟ ರಾಜ್ಯ-ಪ್ರಾಯೋಜಿತ ದಾಳಿಕೋರರಿಗೆ ಆಪಲ್ ಬೆದರಿಕೆ ಸೂಚನೆಗಳನ್ನು ನೀಡುವುದಿಲ್ಲ. ಆದರೆ, ಈ ಅಲರ್ಟ್ಗಳನ್ನಿ ನೀಡಲು ಕಾರಣವೇನು ಅನ್ನೋದನ್ನು ತಿಳಿಸಲು ಸಾಧ್ಯವಿಲ್ಲ. ವಿಶ್ವದ 150ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಈ ಅಲರ್ಟ್ಗಳನ್ನು ನೀಡಲಾಗಿದೆ. ಕಂಪನಿಯು ಅಂತಹ ಅಧಿಸೂಚನೆಗಳನ್ನು ನೀಡಲು ಕಾರಣವೇನು ಎಂಬುದರ ಕುರಿತು ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಆಪಲ್ ಉಲ್ಲೇಖಿಸಿದೆ, ಏಕೆಂದರೆ ಇದು ಆಕ್ರಮಣಕಾರರಿಗೆ "ಭವಿಷ್ಯದಲ್ಲಿ ಪತ್ತೆಹಚ್ಚುವಿಕೆಯಿಂದ ತಪ್ಪಿಸಿಕೊಳ್ಳಲು ಅವರ ನಡವಳಿಕೆಯನ್ನು ಹೊಂದಿಕೊಳ್ಳಲು" ಸಹಾಯ ಮಾಡುತ್ತದೆ ಎಂದು ತಿಳಿಸಿದೆ.