Asianet Suvarna News Asianet Suvarna News

ಜಿ20 ಶೃಂಗಸಭೆ ಡಿನ್ನರ್‌ಗೆ ಅದಾನಿ, ಅಂಬಾನಿ; ರಾಯಿಟರ್ಸ್‌ ಪ್ರಕಟಿಸಿದ್ದು 'ತಪ್ಪು ಮಾಹಿತಿ' ಎಂದ ಸರ್ಕಾರ

ಭಾರತದ ಆತಿಥ್ಯದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಅಧಿಕೃತ ಔತಣಕೂಟದಲ್ಲಿ ದೇಶದ ಪ್ರಮುಖ ವಾಣಿಜ್ಯೋದ್ಯಮಿಗಳು ಇರಲಿದ್ದಾರೆ ಎಂದು ರಾಯಿಟರ್ಸ್‌ ಪ್ರಕಟಿಸಿದ್ದ ಸುದ್ದಿಯನ್ನು ಕೇಂದ್ರ ಸರ್ಕಾರ ತಪ್ಪು ಮಾಹಿತಿ ಎಂದು ತಿಳಿಸಿದೆ.
 

prominent  business leaders have been invited at G20 India Dinner Misleading report of Reuters san
Author
First Published Sep 8, 2023, 6:23 PM IST

ನವದೆಹಲಿ (ಸೆ.8): ಭಾರತದ ಶ್ರೀಮಂತ ಉದ್ಯಮಿಗಳು ಜಿ20 ಶೃಂಗಸಭೆಯ ಅಧಿಕೃತ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ರಾಯಿಟರ್ಸ್ ಸುದ್ದಿ ಸಂಸ್ಥೆಯ ವರದಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇದು ಸಂಪೂರ್ಣ ತಪ್ಪು ಮಾಹಿತಿಯಿಂದ, ತಪ್ಪು ದಾರಿಗೆ ಎಳೆಯುವಂಥ ಸುದ್ದಿಯಾಗಿದೆ ಎಂದು ಪಿಐಬಿ ತನ್ನ ಫ್ಯಾಕ್ಟ್‌ಚೆಕ್‌ ಟ್ವಿಟರ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಿದೆ. ಉದ್ಯಮಿಗಳಾದ ಅದಾನಿ ಗ್ರೂಪ್‌ನ ಚೇರ್ಮನ್‌ ಗೌತಮ್‌ ಅದಾನಿ, ಟಾಟಾ ಸನ್ಸ್‌ನ ಚೇರ್ಮನ್‌ ಎನ್‌.ಚಂದ್ರಶೇಖರನ್‌, ರಿಲಯನ್ಸ್‌ ಇಂಡಸ್ಟ್ರೀಸ್‌ನ ಚೇರ್ಮನ್‌ ಮುಖೇಶ್‌ ಅಂಬಾನಿ, ಭಾರ್ತಿ ಏರ್‌ಟೆಲ್‌ನ ಸಂಸ್ಥಾಪಕಮ ಚೇರ್ಮನ್‌ ಸುನೀಲ್‌ ಭಾರತಿ ಮಿತ್ತಲ್‌ ಹಾಗೂ ಆದಿತ್ಯ ಬಿರ್ಲಾ ಗ್ರೂಪ್‌ನ ಕುಮಾರ ಮಂಗಲಂ ಬಿರ್ಲಾ ಸೇರಿದಂತೆ ಇನ್ನೂ ಕೆಲವರು ಜಿ20 ಶೃಂಗಸಭೆಯ ಅಧಿಕೃತ ಔತಣಕೂಟಕ್ಕೆ ಸರ್ಕಾರದಿಂದ ಅಧಿಕೃತ ಆಹ್ವಾನ ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಸುದ್ದಿಗೆ ಪ್ರತಿಕ್ರಿಯಿಸಿರುವ ಸರ್ಕಾರ, 'ಸೆಪ್ಟೆಂಬರ್ 9 ರಂದು ಭಾರತ್ ಮಂಟಪದಲ್ಲಿ ಆಯೋಜಿಸಲಾಗುತ್ತಿರುವ ಜಿ20 ಇಂಡಿಯಾ ವಿಶೇಷ ಔತಣಕೂಟಕ್ಕೆ ಪ್ರಮುಖ ಉದ್ಯಮಿಗಳನ್ನು ಆಹ್ವಾನಿಸಲಾಗಿದೆ ಎಂದು ರಾಯಿಟರ್ಸ್‌ನ ನ ಲೇಖನವನ್ನು ಆಧರಿಸಿ ಮಾಧ್ಯಮ ವರದಿಗಳು ಬಂದಿವೆ. ಆದರೆ, ರಾಯಿಟರ್ಸ್‌ನ ಈ ವರದಿ ಮಿಸ್‌ ಲೀಡಿಂಗ್‌ ಆಗಿದೆ. ಯಾವುದೇ ಉದ್ಯಮಿಗಳಿನ್ನೂ ಈವರೆಗೂ ಔತಣಕೂಟಕ್ಕೆ ಆಹ್ವಾನಿಸಲಾಗಿಲ್ಲ ಎಂದು ತಿಳಿಸಿದೆ.

ಜಿ20 ಕುರಿತಾಗಿ ವರದಿ ಮಾಡಿದ್ದ ರಾಯಿಟರ್ಸ್‌, ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ನೇತೃತ್ವದ ಭಾರತದ ಶ್ರೀಮಂತ ಉದ್ಯಮಿಗಳು ಶನಿವಾರ ರಾಜಧಾನಿಯಲ್ಲಿ ನಡೆಯಲಿರುವ ಜಿ20 ಔತಣ ಕೂಟದಲ್ಲಿ ವಿಶ್ವ ನಾಯಕರನ್ನು ಕೂಡಿಕೊಳ್ಳಲಿದ್ದಾರೆ. ಏಕೆಂದರೆ ದಕ್ಷಿಣ ಏಷ್ಯಾದ ರಾಷ್ಟ್ರವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಸ್ಥಾನವನ್ನು ಪ್ರದರ್ಶಿಸುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತವನ್ನು ವ್ಯಾಪಾರ ಮತ್ತು ಹೂಡಿಕೆಯ ತಾಣವಾಗಿ ಉತ್ತೇಜಿಸಲು, ವಿಶೇಷವಾಗಿ ಚೀನಾದ ಆರ್ಥಿಕತೆಯು ನಿಧಾನವಾಗುತ್ತಿರುವಾಗ ವಿಶ್ವದ ಅತ್ಯಂತ ಶಕ್ತಿಶಾಲಿ ಆರ್ಥಿಕತೆಗಳ ಜಿ20 ಗುಂಪಿನ ನಾಯಕತ್ವವನ್ನು ಚಲಾಯಿಸಲು ಪ್ರಯತ್ನಿಸಿದ್ದಾರೆ.

ಯುಎಸ್ ಅಧ್ಯಕ್ಷ ಜೋ ಬಿಡೆನ್, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ನವದೆಹಲಿಗೆ ಈಗಾಗಲೇ ಆಗಮಿಸಿದ್ದಾರೆ. ಆಹ್ವಾನಿತ 500 ಉದ್ಯಮಿಗಳಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್, ಬಿಲಿಯನೇರ್ ಕುಮಾರ್ ಮಂಗಳಂ ಬಿರ್ಲಾ, ಭಾರ್ತಿ ಏರ್‌ಟೆಲ್  ಸಂಸ್ಥಾಪಕ-ಅಧ್ಯಕ್ಷ ಸುನಿಲ್ ಮಿತ್ತಲ್, ರಿಲಯನ್ಸ್ ಇಂಡಸ್ಟ್ರೀಸ್ನ ಅಂಬಾನಿ ಮತ್ತು ಅದಾನಿ ಗ್ರೂಪ್ ಅಧ್ಯಕ್ಷರು ಇದರಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ವರದಿ ಪ್ರಕಟಿಸಿತ್ತು.

G20 ಶೃಂಗಸಭೆ: ಭಾರತದ ಡಿಜಿಟಲ್ ಮೂಲಸೌಕರ್ಯ ಶ್ಲಾಘಿಸಿದ ವಿಶ್ವಬ್ಯಾಂಕ್;ಮೋದಿ ಸರ್ಕಾರಕ್ಕೆ ಮೆಚ್ಚುಗೆ

"ಈ ಔತಣಕೂಟವು ವಿವಿಧ ರಾಜ್ಯಗಳ ಮುಖ್ಯಸ್ಥರಿಗೆ ಆತಿಥ್ಯ ವಹಿಸುತ್ತದೆ' ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಈ ಕಾರ್ಯಕ್ರಮದ ಕುರಿತು ಮಾತನಾಡಿದ ಭಾರತೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ. ಔತಣಕೂಟವು ಭಾರತದಲ್ಲಿನ ವ್ಯಾಪಾರ ಮತ್ತು ಹೂಡಿಕೆಯ ಅವಕಾಶಗಳನ್ನು ಹೈಲೈಟ್ ಮಾಡಲು ಮೋದಿ ಅವರಿಗೆ ಮತ್ತೊಂದು ಅವಕಾಶವನ್ನು ನೀಡುತ್ತದೆ ಎಂದು ರಾಯಿಟರ್ಸ್‌ ವರದಿ ಮಾಡಿತ್ತು.

ಜಿ-20 ಸಭೆ: ಹೆಲಿಕಾಪ್ಟರ್‌ನಿಂದ ಲಕ್ಸುರಿ ಕಾರ್ ತನಕ..ಹೇಗಿರಲಿದೆ ಭದ್ರತೆ ?

Follow Us:
Download App:
  • android
  • ios