* ಕಾಂಗ್ರೆಸ್‌ ಆಳ್ವಿಕೆಯಲ್ಲಿ ಆದಿವಾಸಿ ಪ್ರದೇಶ ಅಭಿವೃದ್ಧಿ ಆಗಲೇ ಇಲ್ಲ* ಆದಿವಾಸಿಗಳ ಬಗ್ಗೆ ಕಾಂಗ್ರೆಸ್‌ಗೆ ಅಸಡ್ಡೆ: ಮೋದಿ ಕಿಡಿ* ಆದರೆ 8 ವರ್ಷದಲ್ಲಿ ಮಹತ್ತರ ಅಭಿವೃದ್ಧಿ ಕಾರ್ಯ: ಪ್ರಧಾನಿ* ಗುಜರಾತ್‌ನಲ್ಲಿ ಆದಿವಾಸಿಗಳ ಪ್ರದೇಶ ಅಭಿವೃದ್ಧಿಗೆ ಮೋದಿ ಶಂಕು

 ನವಸಾರಿ(ಜೂ,11): ‘ಸ್ವಾತಂತ್ರ್ಯದ ನಂತರ ದೇಶವನ್ನು ಬಹುಕಾಲ ಆಳಿದವರು ಆದಿವಾಸಿ ಪ್ರದೇಶಗಳ ಅಭಿವೃದ್ಧಿಯ ಕಡೆ ಗಮನವನ್ನೇ ಕೊಡಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ಈ ಮೂಲಕ ಹಿಂದಿನ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.

Add Asianetnews Kannada as a Preferred SourcegooglePreferred

ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿರುವ ಬುಡಕಟ್ಟು ಪ್ರದೇಶದ 3050 ಕೋಟಿ ರು. ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ನೆರವೇರಿಸಿ ‘ಗುಜರಾತ್‌ ಗೌರವ ಅಭಿಯಾನ’ ರಾರ‍ಯಲಿಯಲ್ಲಿ ಮಾತನಾಡಿದ ಅವರು, ‘ಅಭಿವೃದ್ಧಿ ತೀರಾ ಅಗತ್ಯವಾಗಿದ್ದ ಹಿಂದುಳಿದ ಆದಿವಾಸಿ ಪ್ರದೇಶಗಳ ಕಡೆಗೆ ಈ ಹಿಂದೆ ಬಹುಕಾಲ ದೇಶ ಆಳಿದವರು ಗಮನವನ್ನೇ ಹರಿಸಲಿಲ್ಲ. ಈ ಪ್ರದೇಶಗಳಲ್ಲಿ ಸರಿಯಾದ ರಸ್ತೆ ಕೂಡ ಇರಲಿಲ್ಲ. ಆದರೆ ನಮ್ಮ ಸರ್ಕಾರ ಬಂದ ನಂತರ ಈ ಪ್ರದೇಶಗಳ ಅಭಿವೃದ್ಧಿಯ ದಿಕ್ಕನ್ನೇ ಬದಲಿಸಿದೆ’ ಎಂದು ಹೇಳಿದರು.

‘ಆದಿವಾಸಿ ಕುಗ್ರಾಮಗಳಿಗೆ ಈ ಹಿಂದೆ ಲಸಿಕಾಕರಣ ಮಾಡಲು ವರ್ಷಗಳೇ ಬೇಕಾಗಿದ್ದವು. ಆದರೆ ಈಗ ಈ ಪ್ರದೇಶಗಳತ್ತ ಕೂಡ ನಾವು ಗಮನ ಹರಿಸಿದ್ದೇವೆ. ಬಹುತೇಕ ಎಲ್ಲರಿಗೂ 1 ವರ್ಷದಲ್ಲಿ ಇಲ್ಲಿ ಲಸಿಕಾಕರಣವಾಗಿದೆ’ ಎಂದು ಹರ್ಷೋದ್ಗಾರದ ಮಧ್ಯೆ ಹೇಳಿದರು.

ಇದೇ ಭಾಗದ ಮುಖ್ಯಮಂತ್ರಿಯೊಬ್ಬರು ಈ ಹಿಂದೆ ಇದ್ದರು. ಅವರ ಊರಿನಲ್ಲಿ ನೀರಿನ ಟ್ಯಾಂಕ್‌ ಕೂಡ ಇರಲಿಲ್ಲ. ಹ್ಯಾಂಡ್‌ಪಂಪ್‌ ಬಳಸಿ ಜನರು ನೀರು ತರುತ್ತಿದ್ದರು. ಆದರೆ ನಾನು ಮುಖ್ಯಮಂತ್ರಿ ಆದ ನಂತರ ಆ ಊರಿಗೆ ನೀರಿನ ಟ್ಯಾಂಕ್‌ ಕಟ್ಟಿಸಿದೆ’ ಎಂದು ಮೋದಿ ಸ್ಮರಿಸಿದರು.

ಇನ್ನು ಪ್ರತ್ಯೇಕ ಸಮಾರಂಭವೊಂದರಲ್ಲಿ ಆಸ್ಪತ್ರೆಯೊಂದನ್ನು ಉದ್ಘಾಟಿಸಿದ ಮೋದಿ, ‘ನಮ್ಮ ಸರ್ಕಾರ 8 ವರ್ಷದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟುಆದ್ಯತೆ ನೀಡಿದ್ದೇವೆ’ ಎಂದರು.