ಬಿಹಾರದ ಇಬ್ಬರು ಮಕ್ಕಳ ಖಾತೆಯಲ್ಲಿ 900 ಕೋಟಿ ಠೇವಣಿ
- ಪುಟ್ಟ ಬಾಲಕರ ಖಾತೆಯಲ್ಲಿ ಸಾವಿರಗಳಲ್ಲ, ಲಕ್ಷಗಳಲ್ಲ, ಕೋಟಿ ಕೋಟಿ ರೂಪಾಯಿ
- ಬಿಹಾರದ ಮಕ್ಕಳ ಖಾತೆಯಲ್ಲಿ 900 ಕೋಟಿ ಠೇವಣಿ
ಬಿಹಾರ(ಸೆ.16): ಬಿಹಾರದಲ್ಲಿ ಇಬ್ಬರು ಬಾಲಕರ ಖಾತೆಯಲ್ಲಿ ಸುಮಾರು 900 ಕೋಟಿ ರೂಪಾಯಿ ಠೇವಣಿಯಾಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಮಕ್ಕಳ ಕುಟುಂಬ ಮಾತ್ರವಲ್ಲ ಇಡೀ ಗ್ರಾಮವೇ ಈ ಸುದ್ದಿ ಕೇಳಿ ಅಚ್ಚರಿಗೊಳಗಾಗಿದೆ. ಗುರುಚಂದ್ರ ವಿಶ್ವಾಸ್ ಹಾಗೂ ಅಸಿಟ್ ಕುಮಾರ್ ಎಂಬ ಇಬ್ಬರು ಬಾಲಕರ ಖಾತೆಯಲ್ಲಿ 900 ಕೋಟಿಗೂ ಅಧಿಕ ಹಣ ಠೇವಣಿಯಾಗಿದೆ. ಬಿಹಾರದ ಕಟಿಹಾರ್ ಜಿಲ್ಲೆಯ ಬಗೌರ ಪಂಚಾಯತ್ನ ಪಾಸ್ಟಿಯಾ ಗ್ರಾಮದಲ್ಲಿ ಈ ಬಾಲಕರು ವಾಸಿಸುತ್ತಿದ್ದಾರೆ.
ರಾಜ್ಯ ಸರ್ಕಾರವು ಶಾಲಾ ಸಮವಸ್ತ್ರಕ್ಕಾಗಿ ಠೇವಣಿ ಇಟ್ಟ ಮೊತ್ತದ ಬಗ್ಗೆ ತಿಳಿದುಕೊಳ್ಳಲು ಹುಡುಗರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಥಳೀಯ ಕೇಂದ್ರೀಕೃತ ಸಂಸ್ಕರಣಾ ಕೇಂದ್ರಕ್ಕೆ (CPC) ಭೇಟಿ ನೀಡಿದ್ದರು. ಆದರೆ ಭಾರೀ ಮೊತ್ತದ ಹಣದ ಬಗ್ಗೆ ತಿಳಿದುಕೊಂಡ ನಂತರ ಇಬ್ಬರೂ ಶಾಕ್ ಆಗಿದ್ದಾರೆ.
ಮೋದಿ, ದೀದಿ, ಅದಾರ್ಗೆ ಟೈಮ್ಸ್ ವರ್ಷದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ!
ಹುಡುಗರು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾರೆ. ವಿಶ್ವಾಸ್ ಖಾತೆಯಲ್ಲಿ ₹ 60 ಕೋಟಿ ಇದ್ದರೆ, ಕುಮಾರ್ ಅವರ ಖಾತೆಯಲ್ಲಿ ಇದ್ದಕ್ಕಿದ್ದಂತೆ ₹ 900 ಕೋಟಿ ಇತ್ತು ಎಂದು ವರದಿಯಾಗಿದೆ.
ಶಾಖೆಯ ಮ್ಯಾನೇಜರ್ ಮನೋಜ್ ಗುಪ್ತಾ ಈ ವಿಷಯ ತಿಳಿದು ಅಚ್ಚರಿಗೊಂಡರು. ಹಾಗೆಯೇ ಹಣವನ್ನು ಡ್ನಿರಾ ಮಾಡುವುದನ್ನು ತಡೆ ಹಿಡಿದಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಮತ್ತು ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ.
ಖಗರಿಯಾ ಜಿಲ್ಲೆಯಲ್ಲಿ ಇದೇ ರೀತಿ ರಂಜಿತ್ ದಾಸ್ ಎಂಬ ಖಾಸಗಿ ಟ್ಯೂಟರ್ ಖಾತೆಗೆ ಬ್ಯಾಂಕ್ ದೋಷದಿಂದಾಗಿ ₹ 5.5 ಲಕ್ಷ ಜಮೆಯಾಗಿತ್ತು. ಆದರೆ ಅವರಿಗೆ ನೋಟಿಸ್ ನೀಡಿದರೂ ಮೊತ್ತವನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ. ಆ ವ್ಯಕ್ತಿ ಸರ್ಕಾರದಿಂದ ಕಳುಹಿಸಿದ ಹಣವನ್ನು ಸುಲಿಗೆ ಮಾಡುವ ತಂತ್ರ ಎಂದು ಭಾವಿಸಿದ್ದರು.
ಕೋವಿಡ್ -19 ಲಾಕ್ಡೌನ್ನಿಂದಾಗಿ, ಸರ್ಕಾರವು ನನ್ನ ಖಾತೆಗೆ ಮೊತ್ತವನ್ನು ಕಳುಹಿಸಿದೆ ಎಂದು ನಾನು ಭಾವಿಸಿದೆ. ಈ ದಿನಗಳಲ್ಲಿ, ಬಹಳಷ್ಟು ಬ್ಯಾಂಕಿಂಗ್ ವಂಚನೆಗಳು ನಡೆಯುತ್ತವೆ. ಹಾಗಾಗಿ ನಾನು ಹಣ ಹಿಂತಿರುಗಿಸಲಿಲ್ಲ. ನಾನು ಕೆಲವು ಅಗತ್ಯಗಳನ್ನು ಹೊಂದಿದ್ದರಿಂದ ಸ್ವಲ್ಪ ಖರ್ಚು ಮಾಡಿದೆ. ನನಗೆ ಬೇಕಾದಾಗ ಸರ್ಕಾರವು ಸ್ವಲ್ಪ ಹಣವನ್ನು ಕಳುಹಿಸಿರುವುದಕ್ಕೆ ನನಗೆ ಸಂತೋಷವಾಯಿತು ಎಂದಿದ್ದರು.