Asianet Suvarna News Asianet Suvarna News

ನಕ್ಸಲರು ಇರಿಸಿದ್ದ ಐಇಡಿ ಸ್ಫೋಟ : ಯೋಧ ಹುತಾತ್ಮ

ಮಾವೋವಾದಿಗಳು ಇರಿಸಿದ್ದ ಸುಧಾರಿತ ಬಾಂಬ್‌ ಸಾಧನ ಐಇಡಿ ಸ್ಫೋಟಗೊಂಡು ಓರ್ವ ಸಿಆರ್‌ಪಿಎಫ್‌ ಯೋಧ ಹುತಾತ್ಮನಾಗಿ ಮತ್ತೋರ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.

One CRPF jawan was martyred and another seriously injured After IED blast which planted by Maoists in Jharkhand's Kolhan akb
Author
First Published Sep 29, 2023, 10:42 AM IST

ರಾಂಚಿ: ಮಾವೋವಾದಿಗಳು ಇರಿಸಿದ್ದ ಸುಧಾರಿತ ಬಾಂಬ್‌ ಸಾಧನ ಐಇಡಿ ಸ್ಫೋಟಗೊಂಡು ಓರ್ವ ಸಿಆರ್‌ಪಿಎಫ್‌ ಯೋಧ ಹುತಾತ್ಮನಾಗಿ ಮತ್ತೋರ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಜಾರ್ಖಂಡಿನ ಕೊಲ್ಹಾನ್‌ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆಯ 209 ಕೋಬ್ರಾ ತುಕಡಿ (Cobra Squad), ಜಾರ್ಖಂಡ್‌ ಜಾಗ್ವಾರ್‌ ಪಡೆ ಹಾಗೂ ರಾಜ್ಯ ಸಶಸ್ತ್ರಪಡೆಗಳು ಮಾವೋವಾದಿಗಳಿಗಾಗಿ ಶೋಧಕಾರ್ಯ ನಡೆಸುತ್ತಿತ್ತು. ಈ ವೇಳೆ ಇಬ್ಬರು ಸಿಆರ್‌ಪಿಎಫ್‌ (CRPF) ಸಿಬ್ಬಂದಿ ನೆಲದಲ್ಲಿ ಅವಿತಿಟ್ಟಿದ್ದ ಐಇಡಿಯನ್ನು ಮೆಟ್ಟಿದ ಪರಿಣಾಮ ಸ್ಫೋಟಗೊಂಡಿತು. ಇದರಿಂದಾಗಿ ತೀವ್ರವಾಗಿ ಗಾಯಗೊಂಡ ಯೋಧ ರಾಜೇಶ್‌ ಕುಮಾರ್‌ (Rajesh Kumar) ಅವರನ್ನು ರಾಂಚಿಗೆ ಏರ್‌ಲಿಫ್ಟ್‌ ಮಾಡಲಾಗಿತ್ತು. 

ಆದರೆ ರಾಜೇಶ್‌ ಕುಮಾರ್‌ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದರು. ಭೂಪೇಂದ್ರ ಕುಮಾರ್‌ (Bhupendra Kumar)ಎಂಬ ಮತ್ತೋರ್ವ ಯೋಧರಿಗೆ ತೀವ್ರಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ವಿದೇಶಗಳಲ್ಲಿ 1 ಕೋಟಿಗೂ ಹೆಚ್ಚು ಪಾಕಿಸ್ತಾನಿಯರಿಂದ ಭಿಕ್ಷಾಟನೆ: ವಲಸಿಗರ ಬಗ್ಗೆ ಸೌದಿ, ಇರಾಕ್ ಆಕ್ಷೇಪ

ಮಣಿಪುರ ಹಿಂಸಾಚಾರಕ್ಕೆ ಹೆಚ್ಚಿದ ಉಗ್ರರ ಪ್ರಚೋದನೆ ಕಾರಣ

ಇಂಫಾಲ್‌: ಇಬ್ಬರು ವಿದ್ಯಾರ್ಥಿಗಳು ಹತ್ಯೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media)ವೈರಲ್‌ ಆದ ಬಳಿಕ ಉಗ್ರಗಾಮಿಗಳು ಮಣಿಪುರದಲ್ಲಿ ಬಹಿರಂಗವಾಗಿ ಓಡಾಡುತ್ತಿದ್ದು, ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಇವರು ಭದ್ರತಾ ಪಡೆಗಳಿಗೆ ಹೆಚ್ಚಿನ ತಲೆನೋವು ತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ನಡೆದ ಭದ್ರತಾ ಪಡೆಗಳ ಮೇಲೆ ದಾಳಿ  ಸಮಯದಲ್ಲಿ ಕಪ್ಪು ಬಟ್ಟೆ ಧರಿಸಿದ್ದ ವ್ಯಕ್ತಿಗಳು, ಪೊಲೀಸರು ಹಾಗೂ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವಂತೆ ಉದ್ರಿಕ್ತ ಯುವಕರಿಗೆ ಪ್ರಚೋದನೆ ನೀಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುನೈಟೆಡ್‌ ನ್ಯಾಷನಲ್‌ ಲಿಬರೇಶನ್‌ ಫ್ರಂಟ್ (United National Liberation Front), ಪೀಪಲ್ಸ್‌ ಲಿಬರೇಶನ್‌ ಆರ್ಮಿ (People's Liberation Army) ಮುಂತಾದ ನಿಷೇಧಿತ ನಕ್ಸಲ್‌ ಗುಂಪುಗಳಿಂದ ತೊಂದರೆಯಾಗುವ ಕುರಿತಾಗಿ ಭದ್ರತಾ ಪಡೆಗಳಿಗೆ ಈಗಾಗಲೇ ಎಚ್ಚರಿಕೆಯನ್ನು ರವಾನಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ದಾರಿಮಧ್ಯೆ ಸಂಕಷ್ಟಕ್ಕೊಳಗಾದ ಒಡತಿಯ ಸುರಕ್ಷಿತವಾಗಿ ಕರೆತಂದ ಶ್ವಾನ: ಕ್ಯಾಮರಾದಲ್ಲಿ ದೃಶ್ಯ ಸೆರೆ

ಅಲ್ಲದೇ ಕಳೆದ 2 ದಿನಗಳಿಂದ ನಡೆದ ಹಿಂಸಾಚಾರದ ಸಮಯದಲ್ಲಿ ಹಲವು ಬಾರಿ ಉಗ್ರರು ಬಹಿರಂಗವಾಗಿ ಓಡಾಡುತ್ತಿರುವುದು ದಾಖಲಾಗಿದೆ. ಇದು ಶಾಂತಿ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಭದ್ರತಾ ಪಡೆಗಳಿಗೆ ಬಹುದೊಡ್ಡ ಸವಾಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios