Asianet Suvarna News Asianet Suvarna News

Punjab Elections: ಸಿಧು ದುರಹಂಕಾರ ಕೊನೆಗಾಣಿಸಲು ಪ್ರಮುಖ ಅಭ್ಯರ್ಥಿ ಕಣಕ್ಕಿಳಿಸಿದ ಅಕಾಲಿ ದಳ!

* ಪಂಜಾಬ್ ಚುನಾವಣೆಗೆ ಕ್ಷಣಗಣನೆ

* ಕಾಂಗ್ರೆಸ್ ನಾಯಕ ಸಿಧು ವಿರುದ್ಧ ಪ್ರಮುಖ ಅಭ್ಯರ್ಥಿ

 

Navjot Sidhu Versus Akali Dal Bikram Majithia In Punjab Amritsar East Seat pod
Author
Bangalore, First Published Jan 26, 2022, 7:58 PM IST

ಚಂಡೀಗಢ(ಜ.26): ಶಿರೋಮಣಿ ಅಕಾಲಿದಳ ಬುಧವಾರ ಮಹತ್ವದ ಘೋಷಣೆ ಮಾಡಿದೆ. ಅಮೃತಸರ ಪೂರ್ವದಿಂದ ಬಿಕ್ರಮ್ ಸಿಂಗ್ ಮಜಿಥಿಯಾ ಅಭ್ಯರ್ಥಿಯಾಗಲಿದ್ದಾರೆ ಎಂದು ಪಕ್ಷ ಸ್ಪಷ್ಟಪಡಿಸಿದೆ. ಅಮೃತಸರ ಪೂರ್ವದಿಂದ ನವಜೋತ್ ಸಿಂಗ್ ಸಿಧು ವಿರುದ್ಧ ಬಿಕ್ರಮ್‌ಜಿತ್ ಸಿಂಗ್ ಮಜಿಥಿಯಾ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಹೇಳಿದ್ದಾರೆ. ಸಿಧು ದುರಹಂಕಾರವನ್ನು ಕೊನೆಗಾಣಿಸಲು ಮಜಿಥಿಯಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಆತನಲ್ಲಿ ಅಹಂಕಾರ ಹೆಚ್ಚಿದೆ, ಪಂಜಾಬಿನ ಜನರು ಅವನನ್ನು ಇಷ್ಟಪಡುವುದಿಲ್ಲ ಎಂದು ಅವನಿಗೆ ತಿಳಿಯುತ್ತದೆ ಎಂದಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನವಜೋತ್ ಸಿಂಗ್ ಸಿಧುವನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಹೀಗಾಗಿ ಈ ಸ್ಪರ್ಧೆ ಈಗ ಭಾರೀ ಕುತೂಹಲ ಮೂಡಿಸಿದೆ. ಅಲ್ಲದೇ ಹಾಟ್ ಸೀಟ್ ಆಗಿ ಮಾರ್ಪಟ್ಟಿದೆ.

ಇತ್ತೀಚೆಗೆ ಅಮೃತಸರ ಪೂರ್ವದಿಂದ ಸಿಧು ವಿರುದ್ಧ ಸ್ಪರ್ಧಿಸಲು ಬಯಸುವುದಾಗಿ ಮಜಿಥಿಯಾ ಹೇಳಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಸಿಧು ಮಜಿಥಿಯಾ ವಿರುದ್ಧ ಹರಿಹಾಯ್ದಿದ್ದಾರೆ ಮತ್ತು ಅವರ ಮೇಲೆ ಒತ್ತಡ ಹೇರಿ ಎಫ್‌ಐಆರ್ ದಾಖಲಿಸಿದ್ದಾರೆ ಎಂಬುವುದು ಉಲ್ಲೇಖನೀಯ. ಆ ನಂತರ ಮಜಿಥಿಯಾರ ತೊಂದರೆ ಹೆಚ್ಚಾಗಿದೆ. ಮಂಗಳವಾರ ಒಂದು ದಿನ ಮುಂಚಿತವಾಗಿ, ಮಜಿಥಿಯಾ ಹೈಕೋರ್ಟ್‌ ಮೆಟ್ಟಿಲೇರಿ ಬಂಧನದಿಂದ ಪಾರಾಗಿದ್ದಾರೆ. ಮಜಿಥಿಯಾ ಬಂಧನಕ್ಕೆ ಮೂರು ದಿನಗಳ ವಿನಾಯಿತಿ ನೀಡಿ ನ್ಯಾಯಾಲಯ ಆದೇಶಿಸಿದೆ.

ಸಿಧು ಮತ್ತು ಎಸ್‌ಎಡಿ ನಡುವೆ ಹಳೆಯ ರಾಜಕೀಯ ವೈಷಮ್ಯ

ಬಿಕ್ರಮ್ ಮಜಿಥಿಯಾ ಮತ್ತು ನವಜೋತ್ ಸಿಂಗ್ ಸಿಧು ನಡುವಿನ ರಾಜಕೀಯ ವೈಷಮ್ಯ ಸಾಕಷ್ಟು ಹಳೆಯದು. ಸಿಧು ಬಿಜೆಪಿಯಲ್ಲಿದ್ದಾಗ ಎನ್‌ಡಿಎ ಮಿತ್ರಪಕ್ಷ ಎಸ್‌ಎಡಿ ನಾಯಕ ಬಿಕ್ರಮ್ ಮಜಿಥಿಯಾ ಅವರನ್ನು ಪ್ರಶ್ನಿಸಲು ಆರಂಭಿಸಿದ್ದರು. ಬಿಜೆಪಿಯು 2014 ರಲ್ಲಿ ನವಜೋತ್ ಸಿಂಗ್ ಸಿಧು ಅವರಿಗೆ ಅಮೃತಸರದಿಂದ ಲೋಕಸಭೆ ಟಿಕೆಟ್ ನೀಡದಿರುವುದು ಮತ್ತು ದಿವಂಗತ ನಾಯಕ ಅರುಣ್ ಜೇಟ್ಲಿ ಅವರನ್ನು ಇಲ್ಲಿಂದ ಕಣಕ್ಕಿಳಿಸುವುದು ಎಸ್‌ಎಡಿ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗಿದದೆ. ಆದರೆ, ಆಗ ಈ ಚುನಾವಣೆಗಳಲ್ಲಿ ಜೇಟ್ಲಿ ಸೋತಿದ್ದರು. ನಂತರ ಸಿದ್ದು ಕಾಂಗ್ರೆಸ್ ಸೇರಿದ್ದರು.

ಯಾರು ಮಜಿಥಿಯಾ?

ಬಿಕ್ರಮ್ ಮಜಿಥಿಯಾ ಅವರು ಎನ್‌ಡಿಎ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ ಮತ್ತು ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ. SAD ಅಧ್ಯಕ್ಷ ಸುಖ್ಬೀರ್ ಸಿಂಗ್ ಅವರು ಬಾದಲ್ ಅವರ ಸೋದರ ಮಾವ ಮತ್ತು ಮೋದಿ ಸರ್ಕಾರದಲ್ಲಿ ಸಚಿವರಾಗಿರುವ ಹರ್ಸಿಮ್ರತ್ ಕೌರ್ ಅವರ ಸಹೋದರ. ಈ ಬಾರಿ ಎಸ್‌ಎಡಿ ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡು ಹೋರಾಟ ನಡೆಸುತ್ತಿದೆ. ಈ ಬಾರಿ ಎಸ್‌ಎಡಿ 97 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. 2017 ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ, ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿತು ಮತ್ತು 10 ವರ್ಷಗಳ ನಂತರ SAD-BJP ಸರ್ಕಾರವನ್ನು ಹೊರಹಾಕಿತ್ತು.

ಪಂಜಾಬ್ ಚುನಾವಣೆಯ ಸಂಪೂರ್ಣ ವಿವರ

ಒಟ್ಟು ಅಸೆಂಬ್ಲಿ ಸ್ಥಾನಗಳು - 117
ಅಧಿಸೂಚನೆ ಬಿಡುಗಡೆ ದಿನಾಂಕ - ಜನವರಿ 25
ನಾಮನಿರ್ದೇಶನಕ್ಕೆ ಕೊನೆಯ ದಿನಾಂಕ - ಫೆಬ್ರವರಿ 1
ನಾಮಪತ್ರಗಳ ಪರಿಶೀಲನೆ - ಫೆಬ್ರವರಿ 2
ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ - ಫೆಬ್ರವರಿ 4
ಮತದಾನ - ಫೆಬ್ರವರಿ 20
ಫಲಿತಾಂಶ - ಮಾರ್ಚ್ 10

Follow Us:
Download App:
  • android
  • ios